<p><strong>ಹೈದರಾಬಾದ್</strong>: ಭಾರತದಿಂದ ರಫ್ತು ಆಗಲಿರುವ ಔಷಧ ಉತ್ಪನ್ನಗಳಿಗೆ ಭಾರತಕ್ಕೆ ಸರಿ ಸಮಾನವಾಗಿ ಸುಂಕವನ್ನು ವಿಧಿಸುವ ಅಮೆರಿಕದ ನಿಲುವಿನ ಕುರಿತು ರಾಜ್ಯಸಭೆ ಸದಸ್ಯ, ತೆಲಂಗಾಣದ ಬಿ.ಪಾರ್ಥಸಾರಥಿ ರೆಡ್ಡಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಭಾರತದ ಪ್ರಮುಖ ಆರ್ಥಿಕ ವಲಯದ ಮೇಲೆ ಉದ್ದೇಶಿತ ಸುಂಕವು ಪ್ರತಿಕೂಲ ಪರಿಣಾಮ ಬೀರಲಿದೆ. ವಿದೇಶಿ ವಿನಿಮಯ ಗಳಿಕೆಗೆ ಧಕ್ಕೆ ಉಂಟು ಮಾಡುವ ಜೊತೆಗೆ ಲಕ್ಷಾಂತರ ಉದ್ಯೋಗಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು. </p><p>ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ದೇಶದಿಂದ ರಫ್ತುಗೊಳ್ಳುವ ಔಷಧ ಉತ್ಪನ್ನಗಳಲ್ಲಿ ಶೇ 31ರಷ್ಟು ಅಮೆರಿಕಕ್ಕೆ ಹೋಗಲಿದೆ. 2023–24ರಲ್ಲಿ ಸುಮಾರು 74 ಸಾವಿರ ಕೋಟಿ ವಹಿವಾಟು ಆಗಿದೆ. ಸುಂಕ ಏರಿಕೆ ಈ ವಹಿವಾಟನ್ನು ಅಸ್ತವ್ಯಸ್ತಗೊಳಿಸಲಿದೆ’ ಎಂದರು.</p><p>ಬಿಆರ್ಎಸ್ ಪಕ್ಷದ ಪ್ರತಿನಿಧಿಯಾದ ಅವರು ಹೆಟೆರೊ ಫಾರ್ಮಾ ಕಂಪನಿಯ ಮಾಲೀಕರು ಆಗಿದ್ದಾರೆ. ಕೇಂದ್ರ ಸರ್ಕಾರವು ಈ ವಿಷಯದತ್ತ ತುರ್ತು ಗಮನಹರಿಸಬೇಕು ಹಾಗೂ ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಭಾರತದಿಂದ ರಫ್ತು ಆಗಲಿರುವ ಔಷಧ ಉತ್ಪನ್ನಗಳಿಗೆ ಭಾರತಕ್ಕೆ ಸರಿ ಸಮಾನವಾಗಿ ಸುಂಕವನ್ನು ವಿಧಿಸುವ ಅಮೆರಿಕದ ನಿಲುವಿನ ಕುರಿತು ರಾಜ್ಯಸಭೆ ಸದಸ್ಯ, ತೆಲಂಗಾಣದ ಬಿ.ಪಾರ್ಥಸಾರಥಿ ರೆಡ್ಡಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಭಾರತದ ಪ್ರಮುಖ ಆರ್ಥಿಕ ವಲಯದ ಮೇಲೆ ಉದ್ದೇಶಿತ ಸುಂಕವು ಪ್ರತಿಕೂಲ ಪರಿಣಾಮ ಬೀರಲಿದೆ. ವಿದೇಶಿ ವಿನಿಮಯ ಗಳಿಕೆಗೆ ಧಕ್ಕೆ ಉಂಟು ಮಾಡುವ ಜೊತೆಗೆ ಲಕ್ಷಾಂತರ ಉದ್ಯೋಗಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು. </p><p>ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ದೇಶದಿಂದ ರಫ್ತುಗೊಳ್ಳುವ ಔಷಧ ಉತ್ಪನ್ನಗಳಲ್ಲಿ ಶೇ 31ರಷ್ಟು ಅಮೆರಿಕಕ್ಕೆ ಹೋಗಲಿದೆ. 2023–24ರಲ್ಲಿ ಸುಮಾರು 74 ಸಾವಿರ ಕೋಟಿ ವಹಿವಾಟು ಆಗಿದೆ. ಸುಂಕ ಏರಿಕೆ ಈ ವಹಿವಾಟನ್ನು ಅಸ್ತವ್ಯಸ್ತಗೊಳಿಸಲಿದೆ’ ಎಂದರು.</p><p>ಬಿಆರ್ಎಸ್ ಪಕ್ಷದ ಪ್ರತಿನಿಧಿಯಾದ ಅವರು ಹೆಟೆರೊ ಫಾರ್ಮಾ ಕಂಪನಿಯ ಮಾಲೀಕರು ಆಗಿದ್ದಾರೆ. ಕೇಂದ್ರ ಸರ್ಕಾರವು ಈ ವಿಷಯದತ್ತ ತುರ್ತು ಗಮನಹರಿಸಬೇಕು ಹಾಗೂ ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>