<p class="bodytext"><strong>ಹೈದರಾಬಾದ್ (ಪಿಟಿಐ): </strong>‘2012ರಲ್ಲಿ ನಡೆದ ಇಂಡಿಯಾ ಎಗೆನೆಸ್ಟ್ ಕರಪ್ಷನ್ ಹೋರಾಟವು ಆರ್ಎಸ್ಎಸ್ ಬೆಂಬಲಿತ ಹೋರಾಟವಾಗಿತ್ತು. ಇದೇ ಹೋರಾಟದಿಂದಲೇ ಆಮ್ ಆದ್ಮಿ ಪಕ್ಷದ ಉದಯವಾಯಿತು. ಆದ್ದರಿಂದ ಆಮ್ ಆದ್ಮಿ ಪಕ್ಷವು ಬಿಜೆಪಿಯ ‘ಬಿ–ಟೀಂ’ ಆಗಿದೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದರು.</p>.<p class="bodytext">‘ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನೇರ ಹಣಾಹಣಿ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p class="bodytext">‘ಚುನಾವಣಾ ಪ್ರಚಾರದ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಎತ್ತುತ್ತಿರುವ ವಿಷಯಗಳು, ಆ ವಿಷಯಗಳನ್ನು ಅವರು ಹೇಳುತ್ತಿರುವ ರೀತಿ ಎಲ್ಲವೂ ಬಿಜೆಪಿಯ ಪ್ರಚಾರ ಕ್ರಮದಂತೆಯೇ ಇದೆ. ಬಿಜೆಪಿಗೂ ಆಮ್ ಆದ್ಮಿ ಪಕ್ಷಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎರಡೂ ಪಕ್ಷದವರು ನೆರಳಿನೊಂದಿಗೆ ಗುದ್ದಾಡುತ್ತಿದ್ದಾರೆ ಅಷ್ಟೆ’ ಎಂದರು.</p>.<p>ಎಐಎಂಐಎಂನ ಅಸಾದುದ್ದೀನ್ ಒವೈಸಿಯ ಭದ್ರಕೋಟೆ ಹೈದರಾಬಾದ್ ಅನ್ನು ಯಾತ್ರೆ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ ಜೈರಾಂ ರಮೇಶ್, ‘ಬಿಜೆಪಿ ಜೊತೆಗೆ ಒಳಒಪ್ಪಂದ ಮಾಡಿಕೊಂಡಿರುವ ಎಐಎಂಐಎಂ, ಕಾಂಗ್ರೆಸ್ ಮತಗಳನ್ನು ಒಡೆಯಲು ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲಸ ಮಾಡುತ್ತದೆ’ ಎಂದು ಆರೋಪಿಸಿದರು.</p>.<p>‘ಬಿಜೆಪಿಯಿಂದ ‘ಆಮ್ಲಜನಕ’ವನ್ನು ತೆಗೆದುಕೊಳ್ಳುವ ಎಐಎಂಐಎಂ, ‘ಬೂಸ್ಟರ್ ಡೋಸ್’ ಅನ್ನು ವಾಪಸು ಕೊಡುತ್ತದೆ. ಈ ಮೊದಲು ಅದು ಯುಪಿಎಯ ಭಾಗವಾಗಿತ್ತು. ಕಾಂಗ್ರೆಸ್ನ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿತ್ತು. ಆದರೆ ಈಗ ಅದು ಬಿಜೆಪಿಯ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ಹೈದರಾಬಾದ್ (ಪಿಟಿಐ): </strong>‘2012ರಲ್ಲಿ ನಡೆದ ಇಂಡಿಯಾ ಎಗೆನೆಸ್ಟ್ ಕರಪ್ಷನ್ ಹೋರಾಟವು ಆರ್ಎಸ್ಎಸ್ ಬೆಂಬಲಿತ ಹೋರಾಟವಾಗಿತ್ತು. ಇದೇ ಹೋರಾಟದಿಂದಲೇ ಆಮ್ ಆದ್ಮಿ ಪಕ್ಷದ ಉದಯವಾಯಿತು. ಆದ್ದರಿಂದ ಆಮ್ ಆದ್ಮಿ ಪಕ್ಷವು ಬಿಜೆಪಿಯ ‘ಬಿ–ಟೀಂ’ ಆಗಿದೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದರು.</p>.<p class="bodytext">‘ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನೇರ ಹಣಾಹಣಿ ಇದೆ’ ಎಂದು ಅಭಿಪ್ರಾಯಪಟ್ಟರು.</p>.<p class="bodytext">‘ಚುನಾವಣಾ ಪ್ರಚಾರದ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಎತ್ತುತ್ತಿರುವ ವಿಷಯಗಳು, ಆ ವಿಷಯಗಳನ್ನು ಅವರು ಹೇಳುತ್ತಿರುವ ರೀತಿ ಎಲ್ಲವೂ ಬಿಜೆಪಿಯ ಪ್ರಚಾರ ಕ್ರಮದಂತೆಯೇ ಇದೆ. ಬಿಜೆಪಿಗೂ ಆಮ್ ಆದ್ಮಿ ಪಕ್ಷಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎರಡೂ ಪಕ್ಷದವರು ನೆರಳಿನೊಂದಿಗೆ ಗುದ್ದಾಡುತ್ತಿದ್ದಾರೆ ಅಷ್ಟೆ’ ಎಂದರು.</p>.<p>ಎಐಎಂಐಎಂನ ಅಸಾದುದ್ದೀನ್ ಒವೈಸಿಯ ಭದ್ರಕೋಟೆ ಹೈದರಾಬಾದ್ ಅನ್ನು ಯಾತ್ರೆ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ ಜೈರಾಂ ರಮೇಶ್, ‘ಬಿಜೆಪಿ ಜೊತೆಗೆ ಒಳಒಪ್ಪಂದ ಮಾಡಿಕೊಂಡಿರುವ ಎಐಎಂಐಎಂ, ಕಾಂಗ್ರೆಸ್ ಮತಗಳನ್ನು ಒಡೆಯಲು ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲಸ ಮಾಡುತ್ತದೆ’ ಎಂದು ಆರೋಪಿಸಿದರು.</p>.<p>‘ಬಿಜೆಪಿಯಿಂದ ‘ಆಮ್ಲಜನಕ’ವನ್ನು ತೆಗೆದುಕೊಳ್ಳುವ ಎಐಎಂಐಎಂ, ‘ಬೂಸ್ಟರ್ ಡೋಸ್’ ಅನ್ನು ವಾಪಸು ಕೊಡುತ್ತದೆ. ಈ ಮೊದಲು ಅದು ಯುಪಿಎಯ ಭಾಗವಾಗಿತ್ತು. ಕಾಂಗ್ರೆಸ್ನ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿತ್ತು. ಆದರೆ ಈಗ ಅದು ಬಿಜೆಪಿಯ ‘ಆಮ್ಲಜನಕ ಸಿಲಿಂಡರ್’ ಅನ್ನು ಬಳಸಿಕೊಳ್ಳುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>