ಬೆಂಗಳೂರು: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುಕ್ರವಾರವೂ ಮುಂದುವರಿದಿದೆ.
ಬಂಡಾಯ ನಾಯಕ ಶಿವಸೇನಾ ಶಾಸಕ ಏಕನಾಥ ಶಿಂಧೆ ಅವರು ಕಳುಹಿಸಿದ್ದ ಮೊದಲ ಪತ್ರದಲ್ಲಿ ಬಹಳಷ್ಟು ತಪ್ಪುಗಳಿವೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ನಾಯಕ ಅತುಲ್ ಲೊಂಧೆ ಅವರು ಈ ಕುರಿತು ಟ್ವೀಟ್ ಮಾಡಿದ್ದು, ಮೊದಲು ಶಿಂಧೆ ಅವರು ತಮಗೆ 34 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು. ಆದರೆ, ಅವರದೇ ಪಕ್ಷ, 12 ಶಾಸಕರ ಅನರ್ಹತೆಗೆ ಕೋರಿಕೆ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಮೈತ್ರಿಕೂಟದ ಮತ್ತೊಂದು ಪಕ್ಷ ಎನ್ಸಿಪಿ ಕೂಡ ಬೆಂಬಲ ಮುಂದುವರಿಸುವುದಾಗಿ ತಿಳಿಸಿದೆ.
शिंदे गटांनी पहिले जे पत्र पाठवलं होतं त्यात प्रचंड चुका होत्या आणि ते 34 आमदारांचच होत आता तोच आधार धरल्या जाईल स्वतः मूळ पार्टीने बारा आमदारांच्या डिसकॉलिफिकेशन साठी अर्ज दिलेला आहे त्यानंतर अर्ज दिल्यामुळे नंतरचा सदर अर्ज हा बाद ठरतो राजेंद्रसिंह राणा केस वाचा pic.twitter.com/C0SG2N9CQb