ಮಹಾತ್ಮ ಗಾಂಧಿ ಪ್ರತಿಪಾದಿಸಿದ ರಾಷ್ಟ್ರೀಯತೆ ಆರ್ಎಸ್ಎಸ್ನವರಿಗೆ ಗೊತ್ತಿಲ್ಲ. ಇದೇ ಅವರ ಅಸ್ಮಿತೆ. ದೇಶದಲ್ಲಿ ಆರ್ಎಸ್ಎಸ್ನವರು ನಿರ್ಮಿಸಿರುವ ವಾತಾವರಣದಿಂದಾಗಿಯೇ ನಾಥೂರಾಂ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ.
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಮಹಾತ್ಮ ಗಾಂಧಿ ಅವರು ಆಧುನಿಕ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಪೂಜನೀಯ ವ್ಯಕ್ತಿ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಅವರು ಮಹಾನ್ ವ್ಯಕ್ತಿ ಎನಿಸಿದ್ದರು. ಪ್ರೇರಣೆಗಾಗಿ ಆಗ ಅನೇಕ ರಾಷ್ಟ್ರಗಳ ಅವರತ್ತ ನೋಡುತ್ತಿದ್ದವು
ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ರಿಚರ್ಡ್ ಅಟೆನ್ಬರೊ ಅವರು ನಿರ್ಮಿಸಿದ ‘ಗಾಂಧಿ’ ಚಿತ್ರಕ್ಕೂ ಮೊದಲು ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ತಿಳಿದಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ನನಗೆ ದಿಗ್ಭ್ರಮೆಯಾಗಿದೆ. ಮೋದಿ ಅವರಿಗೆ ಆಲ್ಟರ್ಟ್ ಐನ್ಸ್ಟೀನ್ ಬಗ್ಗೆ ಗೊತ್ತೆ? ಐನ್ಸ್ಟೀನ್ ಅವರು ಮಹಾತ್ಮ ಗಾಂಧಿ ಕುರಿತು ಏನು ಹೇಳಿದ್ದಾರೆ ಎಂಬುದು ಮೋದಿ ಅವರಿಗೆ ತಿಳಿದಿದೆಯೇ?