ಪುಣೆ ನಗರ ಪಾಲಿಕೆಯ ನೀರು ಸರಬರಾಜು ವಿಭಾಗದ ಮುಖ್ಯಸ್ಥ ನಂದಕಿಶೋರ್ ಜಗ್ತಾಪ್ ಅವರು ದೂರು ದಾಖಲಿಸಿದ್ದಾರೆ. ಗೋಖಲೆನಗರದ ಆಶಾ ನಗರದಲ್ಲಿ ಜ.24ರಂದು ಓವರ್ಹೆಡ್ ಟ್ಯಾಂಕ್ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ.
ಯೋಜನೆಯನ್ನು ತಾನು ಮಾಡಿದ್ದಾಗಿ ಬಿಜೆಪಿ ಲಾಭ ಪಡೆದುಕೊಳ್ಳುತ್ತಿದೆ ಎಂದು ಉದ್ಘಾಟನೆ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ತಗಾದೆ ತೆಗೆದಿದ್ದರು. ಯಾವುದೇ ಗಲಾಟೆಯಾಗಬಾರದು ಎಂದು ಯೋಜನೆಯ ಉದ್ಘಾಟನೆಗೆ ಆಗಮಿಸುತ್ತಿದ್ದ ಶಾಸಕ ರವೀಂದ್ರ ದಂಗೇಕರ್ ಅವರನ್ನು ನಾವು ತಡೆದವು. ಮಾತಿನ ಚಕಮಕಿ ವೇಳೆ ಶಾಸಕರು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಜಗ್ತಾಪ್ ದೂರಿದ್ದಾರೆ.