<p><strong>ಮಹಾರಾಷ್ಟ್ರ:</strong> ರಾಜಕಾರಣಿಗಳಿಗೆ ತಮಗೆ ಆಗಬೇಕಾದ ಕೆಲಸಗಳು ಆಗಿಬಿಡಬೇಕು, ಸಿಗಬೇಕಾದ ಸ್ಥಾನಮಾನಸಿಕ್ಕಿಬಿಡಬೇಕು. ಅವು ಸಿಗದಿದ್ದರೆ, ಅವರ ಪರವಾಗಿ ಕೆಲಸಗಳು ಆಗದಿದ್ದರೆ, ಎಂತಹ ಕೀಳುಮಟ್ಟದ ಕೆಲಸಕ್ಕೂ ಇಳಿದುಬಿಡುತ್ತಾರೆ ಎಂಬುದಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಕಚೇರಿಯೊಂದರಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.</p>.<p>ಕೇಂದ್ರ ಮಹಾರಾಷ್ಟ್ರದ ಕಾಂಗ್ರೆಸ್ಕಚೇರಿಯಲ್ಲಿ ಶಾಸಕರೊಬ್ಬರು ತನಗೆ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶಗೊಂಡು ಕಚೇರಿಗೆ ತಾವು ಕೊಟ್ಟಿದ್ದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ.ಔರಂಗಾಬಾದ್ ನ ಸಿಲ್ಲೋದ್ ಕ್ಷೇತ್ರದ ಶಾಸಕ ಅಬ್ದುಲ್ಸತ್ತಾರ್ ಎಂಬುವರೆ ಕುರ್ಚಿಗಳನ್ನು ಹೊತ್ತೊಯ್ದದವರು.</p>.<p>ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಬ್ದುಲ್ ಸತ್ತಾರ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಆದರೆ, ಮಂಗಳವಾರ ಶಾಹ್ಘಂಜ್ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಎನ್ಸಿಪಿ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಅಬ್ದುಲ್ ಸತ್ತಾರ್ ಬದಲಿಗೆ ವಿಧಾನಪರಿಷತ್ ಸದಸ್ಯ ಸುಭಾಷ್ ಜಾಮ್ ಬಾದ್ ಎಂಬುವರಿಗೆ ಟಿಕೆಟ್ ನೀಡುತ್ತಿರುವುದಾಗಿ ಘೋಷಿಸಲಾಯಿತು. ಈ ಮಾತು ಕೇಳಿದ ಕೂಡಲೆ ಸತ್ತಾರ್ ಆಕ್ರೋಶಗೊಂಡುಕಾಂಗ್ರೆಸ್ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಹೊತ್ತೊಯ್ಯುವಂತೆ ತನ್ನ ಬೆಂಬಲಿಗರಿಗೆ ಹೇಳಿದರು. ಕೂಡಲೆ ಮುಖಂಡರೂ ಸೇರಿದಂತೆ ಅಲ್ಲಿದ್ದ ಅಷ್ಟೂ ಜನರನ್ನು ಕುರ್ಚಿಗಳಿಂದಕೆಳಗಿಳಿಸಿದ ಬೆಂಬಲಿಗರು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.</p>.<p>ಅನಿರೀಕ್ಷಿತವಾಗಿ ಎದುರಾದ ಈ ಬೆಳವಣಿಗೆಯಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡರು ನೆಲದಲ್ಲಿ ಕುಳಿತು ಸಭೆ ನಡೆಸಲಾಗದೆ, ಸಮೀಪದಲ್ಲಿಯೇ ಇದ್ದ ಎನ್ಸಿಪಿ ಕಚೇರಿಗೆ ತೆರಳಿ ಅಲ್ಲಿ ಸಭೆ ನಡೆಸಿದರು ಎನ್ನಲಾಗಿದೆ.</p>.<p>ಈ ಸಂಬಂಧ ಮಾತನಾಡಿದ ಅಬ್ದುಲ್ಸತ್ತಾರ್, ನನಗೆ ಟಿಕೆಟ್ ತಿರಸ್ಕರಿಸಿದ ಮೇಲೆ ನಾನು ಕೊಟ್ಟಿದ್ದ ಕುರ್ಚಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಯಾರು ಟಿಕೆಟ್ ಪಡೆದುಕೊಳ್ಳುತ್ತಾರೋ ಅವರೇ ಇವೆಲ್ಲಾವ್ಯವಸ್ಥೆ ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಈ ಸಂಬಂಧ ಮಾತನಾಡಿದ ಅಭ್ಯರ್ಥಿ ಸುಭಾಷ್ ಜಾಮ್ ಬಾದ್, ಸತ್ತಾರ್ ಅವರಿಗೆ ತುರ್ತಾಗಿ ಕುರ್ಚಿಗೆ ಬೇಕಾಗಿತ್ತೇನೋ ಅದಕ್ಕಾಗಿ ಅವರು ತೆಗೆದುಕೊಂಡು ಹೋಗಿದ್ದಾರೆ. ನಾವು ಇದಕ್ಕಾಗಿ ಬೇಸರ ವ್ಯಕ್ತಪಡಿಸುವುದಿಲ್ಲ. ಸತ್ತಾರ್ ಈಗಲೂ ಕಾಂಗ್ರೆಸ್ನಲ್ಲಿಯೇ ಇದ್ದಾರೆ, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾರಾಷ್ಟ್ರ:</strong> ರಾಜಕಾರಣಿಗಳಿಗೆ ತಮಗೆ ಆಗಬೇಕಾದ ಕೆಲಸಗಳು ಆಗಿಬಿಡಬೇಕು, ಸಿಗಬೇಕಾದ ಸ್ಥಾನಮಾನಸಿಕ್ಕಿಬಿಡಬೇಕು. ಅವು ಸಿಗದಿದ್ದರೆ, ಅವರ ಪರವಾಗಿ ಕೆಲಸಗಳು ಆಗದಿದ್ದರೆ, ಎಂತಹ ಕೀಳುಮಟ್ಟದ ಕೆಲಸಕ್ಕೂ ಇಳಿದುಬಿಡುತ್ತಾರೆ ಎಂಬುದಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ಕಚೇರಿಯೊಂದರಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.</p>.<p>ಕೇಂದ್ರ ಮಹಾರಾಷ್ಟ್ರದ ಕಾಂಗ್ರೆಸ್ಕಚೇರಿಯಲ್ಲಿ ಶಾಸಕರೊಬ್ಬರು ತನಗೆ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶಗೊಂಡು ಕಚೇರಿಗೆ ತಾವು ಕೊಟ್ಟಿದ್ದ 300 ಕುರ್ಚಿಗಳನ್ನು ಹೊತ್ತೊಯ್ದಿದ್ದಾರೆ.ಔರಂಗಾಬಾದ್ ನ ಸಿಲ್ಲೋದ್ ಕ್ಷೇತ್ರದ ಶಾಸಕ ಅಬ್ದುಲ್ಸತ್ತಾರ್ ಎಂಬುವರೆ ಕುರ್ಚಿಗಳನ್ನು ಹೊತ್ತೊಯ್ದದವರು.</p>.<p>ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಬ್ದುಲ್ ಸತ್ತಾರ್ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಆದರೆ, ಮಂಗಳವಾರ ಶಾಹ್ಘಂಜ್ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಎನ್ಸಿಪಿ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಅಬ್ದುಲ್ ಸತ್ತಾರ್ ಬದಲಿಗೆ ವಿಧಾನಪರಿಷತ್ ಸದಸ್ಯ ಸುಭಾಷ್ ಜಾಮ್ ಬಾದ್ ಎಂಬುವರಿಗೆ ಟಿಕೆಟ್ ನೀಡುತ್ತಿರುವುದಾಗಿ ಘೋಷಿಸಲಾಯಿತು. ಈ ಮಾತು ಕೇಳಿದ ಕೂಡಲೆ ಸತ್ತಾರ್ ಆಕ್ರೋಶಗೊಂಡುಕಾಂಗ್ರೆಸ್ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಹೊತ್ತೊಯ್ಯುವಂತೆ ತನ್ನ ಬೆಂಬಲಿಗರಿಗೆ ಹೇಳಿದರು. ಕೂಡಲೆ ಮುಖಂಡರೂ ಸೇರಿದಂತೆ ಅಲ್ಲಿದ್ದ ಅಷ್ಟೂ ಜನರನ್ನು ಕುರ್ಚಿಗಳಿಂದಕೆಳಗಿಳಿಸಿದ ಬೆಂಬಲಿಗರು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.</p>.<p>ಅನಿರೀಕ್ಷಿತವಾಗಿ ಎದುರಾದ ಈ ಬೆಳವಣಿಗೆಯಿಂದ ವಿಚಲಿತರಾದ ಕಾಂಗ್ರೆಸ್ ಮುಖಂಡರು ನೆಲದಲ್ಲಿ ಕುಳಿತು ಸಭೆ ನಡೆಸಲಾಗದೆ, ಸಮೀಪದಲ್ಲಿಯೇ ಇದ್ದ ಎನ್ಸಿಪಿ ಕಚೇರಿಗೆ ತೆರಳಿ ಅಲ್ಲಿ ಸಭೆ ನಡೆಸಿದರು ಎನ್ನಲಾಗಿದೆ.</p>.<p>ಈ ಸಂಬಂಧ ಮಾತನಾಡಿದ ಅಬ್ದುಲ್ಸತ್ತಾರ್, ನನಗೆ ಟಿಕೆಟ್ ತಿರಸ್ಕರಿಸಿದ ಮೇಲೆ ನಾನು ಕೊಟ್ಟಿದ್ದ ಕುರ್ಚಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ಪಕ್ಷವನ್ನು ತೊರೆಯುತ್ತಿದ್ದೇನೆ. ಯಾರು ಟಿಕೆಟ್ ಪಡೆದುಕೊಳ್ಳುತ್ತಾರೋ ಅವರೇ ಇವೆಲ್ಲಾವ್ಯವಸ್ಥೆ ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಈ ಸಂಬಂಧ ಮಾತನಾಡಿದ ಅಭ್ಯರ್ಥಿ ಸುಭಾಷ್ ಜಾಮ್ ಬಾದ್, ಸತ್ತಾರ್ ಅವರಿಗೆ ತುರ್ತಾಗಿ ಕುರ್ಚಿಗೆ ಬೇಕಾಗಿತ್ತೇನೋ ಅದಕ್ಕಾಗಿ ಅವರು ತೆಗೆದುಕೊಂಡು ಹೋಗಿದ್ದಾರೆ. ನಾವು ಇದಕ್ಕಾಗಿ ಬೇಸರ ವ್ಯಕ್ತಪಡಿಸುವುದಿಲ್ಲ. ಸತ್ತಾರ್ ಈಗಲೂ ಕಾಂಗ್ರೆಸ್ನಲ್ಲಿಯೇ ಇದ್ದಾರೆ, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>