ಬೆಂಗಳೂರು: ಭೂತಾನ್ನ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 30 ಸ್ಥಾನಗಳನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಗೆದ್ದುಗೊಂಡಿದ್ದು, ಸರ್ಕಾರ ರಚನೆಗೆ ಮುಂದಾಗಿದೆ.
ಪಿಡಿಪಿ ಪಕ್ಷದ ಮುಖಂಡ ಶೇರಿಂಗ್ ಟೊಬ್ಗೆ ಅವರಿಗೆ ಎಐಸಿಸಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭೂತಾನ್ ಸಂಸದೀಯ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಅಭಿನಂದನೆಗಳು ಹಾಗೂ ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸ್ನೇಹ ಮತ್ತಷ್ಟು ಬಲಗೊಳ್ಳಲಿ ಎಂದು ಹೇಳಿದ್ದಾರೆ.
ಭೂತಾನ್ ಪ್ರಸಾರ ಸೇವೆಯ ಮಾಹಿತಿಗಳ ಪ್ರಕಾರ, ಸಂಸತ್ತಿನ ಒಟ್ಟು ಸದಸ್ಯ ಬಲ 47 ಸ್ಥಾನಗಳು. ಪಿಡಿಪಿ 30 ಸ್ಥಾನ ಗೆದ್ದುಕೊಂಡರೆ, ಕಣದಲ್ಲಿದ್ದ ಮತ್ತೊಂದು ಪಕ್ಷ ಭೂತಾನ್ ಟೆಂಡ್ರೆಲ್ ಪಾರ್ಟಿ 17 ಸ್ಥಾನ ಗೆದ್ದುಕೊಂಡಿತು.