<p><strong>ನವದೆಹಲಿ</strong>: ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು, ತಮ್ಮ ಮುಂದೆ ಬರುವ ಮಸೂದೆಗಳ ಕುರಿತು ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು. ಇಂಥ ಸಂದರ್ಭದಲ್ಲಿ, ಸಂವಿಧಾನದ 200(1) ವಿಧಿಯಲ್ಲಿನ ‘ಸಾಧ್ಯವಾದಷ್ಟು ತ್ವರಿತವಾಗಿ’ ಎಂಬ ಉಲ್ಲೇಖವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.</p>.<p>ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ನ್ಯಾಯಪೀಠ, ‘ಸಾಧ್ಯವಾದಷ್ಟು ತ್ವರಿತವಾಗಿ ಎಂಬುದು ಸಂವಿಧಾನದಲ್ಲಿ ಮಹತ್ವದ ಉದ್ದೇಶ ಹೊಂದಿದೆ. ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿತು.</p>.<p>ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹತ್ತು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ. ಮಸೂದೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿತು.</p>.<p>ಇದಕ್ಕೂ ಮುನ್ನ, ಸಾಲಿಸಿಟರ್ ಜನರಲ್ ಮೆಹ್ತಾ ಹಾಗೂ ಹಿರಿಯ ವಕೀಲ ದುಷ್ಯಂತ್ ದವೆ ನಡುವೆ ಕಾವೇರಿದ ಚರ್ಚೆ ನಡೆಯಿತು.</p>.<p>ತೆಲಂಗಾಣ ರಾಜ್ಯಪಾಲರ ಪರ ಹಾಜರಿದ್ದ ಮೆಹ್ತಾ, ‘ಸದ್ಯ ಯಾವುದೇ ಮಸೂದೆ ಅಂಕಿತಕ್ಕೆ ಬಾಕಿ ಉಳಿದಿಲ್ಲ. ಮಸೂದೆಗಳ ಕುರಿತು ನಿರ್ಧರಿಸುವಾಗ ಆದಷ್ಟು ತ್ವರಿತವಾಗಿ ಎಂಬ ನ್ಯಾಯಪೀಠದ ಅಭಿಪ್ರಾಯವನ್ನು ಆದೇಶದಲ್ಲಿ ಉಲ್ಲೇಖಿಸುವ ಅಗತ್ಯ ಇರಲಲಿಲ್ಲ’ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ‘ಈ ರಾಜ್ಯಪಾಲರನ್ನೇ (ತಮಿಳಿಸೈ ಸೌಂದರರಾಜನ್) ಉದ್ದೇಶಿಸಿ ನಾವು ಈ ಮಾತನ್ನು ಹೇಳಿಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದೇವೆ’ ಎಂದು ಹೇಳಿದರು.</p>.<p>‘ಇದರ ಉಲ್ಲೇಖ ಅಗತ್ಯವಿರಲಿಲ್ಲ. ನಾನು ಇದಕ್ಕಿಂತ ಹೆಚ್ಚಿಗೇನೂ ಹೇಳುವುದಿಲ್ಲ. ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಲು ಇಚ್ಛಿಸುವುದಿಲ್ಲ’ ಎಂದು ಮೆಹ್ತಾ ಹೇಳಿದರು.</p>.<p>ತೆಲಂಗಾಣ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ, ‘ಸೂಕ್ತ ನಿರ್ದೇಶನ ಇರುವ ಆದೇಶವನ್ನು ಹೊರಡಿಸುವ ಮೂಲಕ ಈ ವಿಷಯಕ್ಕೆ ಅಂತ್ಯ ಹಾಡಬೇಕು’ ಎಂದು ಕೋರಿದರು.</p>.<p>‘ಮಧ್ಯಪ್ರದೇಶದಲ್ಲಿ ರಾಜ್ಯಪಾಲರು ಮಸೂದೆಗಳಿಗೆ ಒಂದು ವಾರದೊಳಗೆ ಅಂಕಿತ ಹಾಕುತ್ತಾರೆ. ಗುಜರಾತಿನಲ್ಲಿ ಒಂದು ತಿಂಗಳ ಒಳಗೆ ಹಾಕಲಾಗುತ್ತದೆ. ತೆಲಂಗಾಣದಲ್ಲಿ ವಿರೋಧ ಪಕ್ಷ ನೇತೃತ್ವದ ಸರ್ಕಾರ ಇರುವುದರಿಂದ ಮಸೂದೆಗಳಿಗೆ ಅಂಕಿತ ಹಾಕುವುದು ವಿಳಂಬವಾಗುತ್ತಿದೆ’ ಎಂದ ದವೆ ಆರೋಪಿಸಿದರು.</p>.<p class="title">ಈ ಮಾತಿಗೆ ಆಕ್ಷೇಪಿಸಿದ ಮೆಹ್ತಾ, ‘ಒಂದು ವಿಷಯವನ್ನು ಈ ರೀತಿಯಾಗಿ ಸಾರ್ವತ್ರೀಕರಣಗೊಳಿಸಲಾಗದು’ ಎಂದರು.</p>.<p class="title">ಆಗ, ‘ನೀವು ಕೇಂದ್ರ ಸರ್ಕಾರದಿಂದ ನೇಮಕವಾದವರು. ಹೀಗಾಗಿ, ನೀವು ಒಂದು ವಿಷಯವನ್ನು ಸಾರ್ವತ್ರೀಕರಣಗೊಳಿಸಬಾರದು’ ಎಂದು ದವೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ‘ನ್ಯಾಯಾಲಯದಲ್ಲಿ ಕೂಗಾಡಿದರೆ ಯಾವುದೇ ಪ್ರಯೋಜನವಾಗದು’ ಎಂದರು.</p>.<p class="title">‘ಪ್ರತಿ ಬಾರಿ ನಾನು ನ್ಯಾಯಪೀಠದ ಮುಂದೆ ಹಾಜರಾದಾಗ, ಅವರಲ್ಲಿ (ಮೆಹ್ತಾ) ನನ್ನ ಕುರಿತು ಅಸಹನೆ ಕಂಡು ಬರುತ್ತದೆ. ಅವರು ಬಹಳ ಕೀಳುಮಟ್ಟಕ್ಕೆ ಇಳಿದಿದ್ದಾರೆ. ನನ್ನ 44 ವರ್ಷಗಳ ವಕೀಲಿ ವೃತ್ತಿಯಲ್ಲಿಯೇ ಇಂಥದ್ದನ್ನು ನೋಡಿಲ್ಲ’ ಎಂದು ದವೆ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು, ತಮ್ಮ ಮುಂದೆ ಬರುವ ಮಸೂದೆಗಳ ಕುರಿತು ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು. ಇಂಥ ಸಂದರ್ಭದಲ್ಲಿ, ಸಂವಿಧಾನದ 200(1) ವಿಧಿಯಲ್ಲಿನ ‘ಸಾಧ್ಯವಾದಷ್ಟು ತ್ವರಿತವಾಗಿ’ ಎಂಬ ಉಲ್ಲೇಖವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.</p>.<p>ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ನ್ಯಾಯಪೀಠ, ‘ಸಾಧ್ಯವಾದಷ್ಟು ತ್ವರಿತವಾಗಿ ಎಂಬುದು ಸಂವಿಧಾನದಲ್ಲಿ ಮಹತ್ವದ ಉದ್ದೇಶ ಹೊಂದಿದೆ. ರಾಜ್ಯಪಾಲರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿತು.</p>.<p>ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹತ್ತು ಮಸೂದೆಗಳು ರಾಜ್ಯಪಾಲರ ಅಂಕಿತಕ್ಕಾಗಿ ಕಾಯುತ್ತಿವೆ. ಮಸೂದೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿತು.</p>.<p>ಇದಕ್ಕೂ ಮುನ್ನ, ಸಾಲಿಸಿಟರ್ ಜನರಲ್ ಮೆಹ್ತಾ ಹಾಗೂ ಹಿರಿಯ ವಕೀಲ ದುಷ್ಯಂತ್ ದವೆ ನಡುವೆ ಕಾವೇರಿದ ಚರ್ಚೆ ನಡೆಯಿತು.</p>.<p>ತೆಲಂಗಾಣ ರಾಜ್ಯಪಾಲರ ಪರ ಹಾಜರಿದ್ದ ಮೆಹ್ತಾ, ‘ಸದ್ಯ ಯಾವುದೇ ಮಸೂದೆ ಅಂಕಿತಕ್ಕೆ ಬಾಕಿ ಉಳಿದಿಲ್ಲ. ಮಸೂದೆಗಳ ಕುರಿತು ನಿರ್ಧರಿಸುವಾಗ ಆದಷ್ಟು ತ್ವರಿತವಾಗಿ ಎಂಬ ನ್ಯಾಯಪೀಠದ ಅಭಿಪ್ರಾಯವನ್ನು ಆದೇಶದಲ್ಲಿ ಉಲ್ಲೇಖಿಸುವ ಅಗತ್ಯ ಇರಲಲಿಲ್ಲ’ ಎಂದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ‘ಈ ರಾಜ್ಯಪಾಲರನ್ನೇ (ತಮಿಳಿಸೈ ಸೌಂದರರಾಜನ್) ಉದ್ದೇಶಿಸಿ ನಾವು ಈ ಮಾತನ್ನು ಹೇಳಿಲ್ಲ. ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದೇವೆ’ ಎಂದು ಹೇಳಿದರು.</p>.<p>‘ಇದರ ಉಲ್ಲೇಖ ಅಗತ್ಯವಿರಲಿಲ್ಲ. ನಾನು ಇದಕ್ಕಿಂತ ಹೆಚ್ಚಿಗೇನೂ ಹೇಳುವುದಿಲ್ಲ. ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಲು ಇಚ್ಛಿಸುವುದಿಲ್ಲ’ ಎಂದು ಮೆಹ್ತಾ ಹೇಳಿದರು.</p>.<p>ತೆಲಂಗಾಣ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್ ದವೆ, ‘ಸೂಕ್ತ ನಿರ್ದೇಶನ ಇರುವ ಆದೇಶವನ್ನು ಹೊರಡಿಸುವ ಮೂಲಕ ಈ ವಿಷಯಕ್ಕೆ ಅಂತ್ಯ ಹಾಡಬೇಕು’ ಎಂದು ಕೋರಿದರು.</p>.<p>‘ಮಧ್ಯಪ್ರದೇಶದಲ್ಲಿ ರಾಜ್ಯಪಾಲರು ಮಸೂದೆಗಳಿಗೆ ಒಂದು ವಾರದೊಳಗೆ ಅಂಕಿತ ಹಾಕುತ್ತಾರೆ. ಗುಜರಾತಿನಲ್ಲಿ ಒಂದು ತಿಂಗಳ ಒಳಗೆ ಹಾಕಲಾಗುತ್ತದೆ. ತೆಲಂಗಾಣದಲ್ಲಿ ವಿರೋಧ ಪಕ್ಷ ನೇತೃತ್ವದ ಸರ್ಕಾರ ಇರುವುದರಿಂದ ಮಸೂದೆಗಳಿಗೆ ಅಂಕಿತ ಹಾಕುವುದು ವಿಳಂಬವಾಗುತ್ತಿದೆ’ ಎಂದ ದವೆ ಆರೋಪಿಸಿದರು.</p>.<p class="title">ಈ ಮಾತಿಗೆ ಆಕ್ಷೇಪಿಸಿದ ಮೆಹ್ತಾ, ‘ಒಂದು ವಿಷಯವನ್ನು ಈ ರೀತಿಯಾಗಿ ಸಾರ್ವತ್ರೀಕರಣಗೊಳಿಸಲಾಗದು’ ಎಂದರು.</p>.<p class="title">ಆಗ, ‘ನೀವು ಕೇಂದ್ರ ಸರ್ಕಾರದಿಂದ ನೇಮಕವಾದವರು. ಹೀಗಾಗಿ, ನೀವು ಒಂದು ವಿಷಯವನ್ನು ಸಾರ್ವತ್ರೀಕರಣಗೊಳಿಸಬಾರದು’ ಎಂದು ದವೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ‘ನ್ಯಾಯಾಲಯದಲ್ಲಿ ಕೂಗಾಡಿದರೆ ಯಾವುದೇ ಪ್ರಯೋಜನವಾಗದು’ ಎಂದರು.</p>.<p class="title">‘ಪ್ರತಿ ಬಾರಿ ನಾನು ನ್ಯಾಯಪೀಠದ ಮುಂದೆ ಹಾಜರಾದಾಗ, ಅವರಲ್ಲಿ (ಮೆಹ್ತಾ) ನನ್ನ ಕುರಿತು ಅಸಹನೆ ಕಂಡು ಬರುತ್ತದೆ. ಅವರು ಬಹಳ ಕೀಳುಮಟ್ಟಕ್ಕೆ ಇಳಿದಿದ್ದಾರೆ. ನನ್ನ 44 ವರ್ಷಗಳ ವಕೀಲಿ ವೃತ್ತಿಯಲ್ಲಿಯೇ ಇಂಥದ್ದನ್ನು ನೋಡಿಲ್ಲ’ ಎಂದು ದವೆ ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>