<p><strong>ನವದೆಹಲಿ:</strong> ‘ಕೋರ್ಟ್ಗಳು ‘ನೈತಿಕ ಪೊಲೀಸ್ಗಿರಿ’ ಮಾಡಲಾಗದು’ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆದೇಶವೊಂದನ್ನು ಮಂಗಳವಾರ ವಜಾ ಮಾಡಿತು. </p>.<p>ಜೈನ ಸಂನ್ಯಾಸಿ ತರುಣ್ ಸಾಗರ್ ಅವರನ್ನು ಅಣಕು ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ, ರಾಜಕೀಯ ವಿಶ್ಲೇಷಕ ತಹ್ಸೀನ್ ಪೂನಾವಾಲಾ ಅವರಿಗೆ ಹೈಕೋರ್ಟ್ ₹10 ಲಕ್ಷ ದಂಡ ವಿಧಿಸಿತ್ತು. ಇದನ್ನು ಭರಿಸುವಂತೆ ಪೂನಾವಾಲಾ ಮತ್ತು ಸಂಗೀತ ಸಂಯೋಜಕ, ಗಾಯ ವಿಶಾಲ್ ದದ್ಲಾನಿ ಅವರಿಗೆ ಹೈಕೋರ್ಟ್ ಸೂಚಿಸಿತ್ತು.</p>.<p>‘ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ಧತಿಗೆ ತಲಾ ₹ 10 ಲಕ್ಷ ದಂಡ ಪಾವತಿಸಬೇಕು’ ಎಂದು ಹೈಕೋರ್ಟ್ ಇಬ್ಬರಿಗೂ ಆದೇಶಿಸಿತ್ತು. ‘ಧಾರ್ಮಿಕ ಮುಖಂಡರನ್ನು ಯಾರೂ ಅಣಕಿಸಬಾರದು ಎಂಬ ಸಂದೇಶ ರವಾನಿಸಲು ಈ ದಂಡ ವಿಧಿಸಲಾಗಿದೆ’ ಎಂದು ಹೇಳಿತ್ತು.</p>.<p>ಪೂನಾವಾಲಾ ಅವರು ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.</p>.<p>ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ‘ಇದೆಂತಹ ಆದೇಶ? ಅರ್ಜಿದಾರರನ್ನು ಖುಲಾಸೆಗೊಳಿಸಿ ದಂಡ ವಿಧಿಸಲಾಗಿದೆ. ಕೋರ್ಟ್ ನೈತಿಕ ಪೊಲೀಸ್ಗಿರಿ ಮಾಡಲಾಗದು’ ಎಂದು ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಕೋರ್ಟ್ಗಳು ‘ನೈತಿಕ ಪೊಲೀಸ್ಗಿರಿ’ ಮಾಡಲಾಗದು’ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆದೇಶವೊಂದನ್ನು ಮಂಗಳವಾರ ವಜಾ ಮಾಡಿತು. </p>.<p>ಜೈನ ಸಂನ್ಯಾಸಿ ತರುಣ್ ಸಾಗರ್ ಅವರನ್ನು ಅಣಕು ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ, ರಾಜಕೀಯ ವಿಶ್ಲೇಷಕ ತಹ್ಸೀನ್ ಪೂನಾವಾಲಾ ಅವರಿಗೆ ಹೈಕೋರ್ಟ್ ₹10 ಲಕ್ಷ ದಂಡ ವಿಧಿಸಿತ್ತು. ಇದನ್ನು ಭರಿಸುವಂತೆ ಪೂನಾವಾಲಾ ಮತ್ತು ಸಂಗೀತ ಸಂಯೋಜಕ, ಗಾಯ ವಿಶಾಲ್ ದದ್ಲಾನಿ ಅವರಿಗೆ ಹೈಕೋರ್ಟ್ ಸೂಚಿಸಿತ್ತು.</p>.<p>‘ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ಧತಿಗೆ ತಲಾ ₹ 10 ಲಕ್ಷ ದಂಡ ಪಾವತಿಸಬೇಕು’ ಎಂದು ಹೈಕೋರ್ಟ್ ಇಬ್ಬರಿಗೂ ಆದೇಶಿಸಿತ್ತು. ‘ಧಾರ್ಮಿಕ ಮುಖಂಡರನ್ನು ಯಾರೂ ಅಣಕಿಸಬಾರದು ಎಂಬ ಸಂದೇಶ ರವಾನಿಸಲು ಈ ದಂಡ ವಿಧಿಸಲಾಗಿದೆ’ ಎಂದು ಹೇಳಿತ್ತು.</p>.<p>ಪೂನಾವಾಲಾ ಅವರು ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು.</p>.<p>ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ‘ಇದೆಂತಹ ಆದೇಶ? ಅರ್ಜಿದಾರರನ್ನು ಖುಲಾಸೆಗೊಳಿಸಿ ದಂಡ ವಿಧಿಸಲಾಗಿದೆ. ಕೋರ್ಟ್ ನೈತಿಕ ಪೊಲೀಸ್ಗಿರಿ ಮಾಡಲಾಗದು’ ಎಂದು ಹೇಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>