ಪಂಚಕುಲ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಬಿಜೆಪಿಗೆ ಮತ ಹಾಕಿ ಅಜ್ಞಾತ ಸ್ಥಳ ಸೇರಿಕೊಂಡಿದ್ದ ಕಾಂಗ್ರೆಸ್ನ ಆರು ಶಾಸಕರು ಶಿಮ್ಲಾಗೆ ಆಗಮಿಸಿದ್ದಾರೆ.
ಇವರಲ್ಲಿ ಮೂವರು ಪಕ್ಷೇತರ ಶಾಸಕರೂ ಸೇರಿದ್ದಾರೆ. ಕಾಂಗ್ರೆಸ್ನ ಆರು, ಪಕ್ಷೇತರ 3 ಶಾಸಕರು ಸೇರಿ ಒಟ್ಟು 9 ಶಾಸಕರು ಅಡ್ಡಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರ ಗೆಲುವಿಗೆ ಕಾರಣರಾಗಿದ್ದರು.
ಈ 9 ಶಾಸಕರು ವಿಧಾನಸಭೆಗೆ ಬರುತ್ತಿದ್ದಂತೆ, ‘ಜೈ ಶ್ರೀರಾಮ್, ಕೆಲಸ ಮುಗಿದಿದೆ’ ಎಂದು ಬಿಜೆಪಿ ಶಾಸಕರು ಘೋಷಣೆ ಕೂಗಿ ಅವರನ್ನು ಸ್ವಾಗತಿಸಿದ್ದಾರೆ.