<p><strong>ನವದೆಹಲಿ:</strong> ಸಿಎಎ ವಿರೋಧಿಸಿ ಸುಮಾರು ಒಂದೂವರೆ ತಿಂಗಳಿಂದ ಇಲ್ಲಿನ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ಭಾನುವಾರ 55 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು.</p>.<p>2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲು ಅವರ ತಾಯಿ ರಾಧಿಕಾ ವೇಮುಲು ಮತ್ತು ದೆಹಲಿಯಲ್ಲಿ ಗುಂಪು ಹತ್ಯೆಗೆ ಒಳಗಾಗಿದ್ದ ಜುನೈದ್ ಖಾನ್ ಅವರ ತಾಯಿ ಸಾಯಿರಾ ಬಾನೊ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.</p>.<p>ಮೊದಲ ದಿನದಿಂದ ಪಾಲ್ಗೊಂಡಿರುವ 75 ಮತ್ತು 90 ವಯಸ್ಸಿನ ಮೂವರು ವೃದ್ಧೆಯರಾದ ಅಸ್ಮಾ ಖಾನ್, ಬಿಲ್ಕಿಸ್ ಮತ್ತು ಸರ್ವಾರಿ ಧ್ವಜಾರೋಹಣಕ್ಕೆ ನೆರ<br />ವಾದರು. ಇವರನ್ನು ‘ದಬಾಂಗ್ ದಾದೀಸ್ (ಅಜ್ಜಿಯಂದಿರು) ಎನ್ನಲಾಗು ತ್ತದೆ. ಡಿಸೆಂಬರ್ 15ರಿಂದ ದಕ್ಷಿಣ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.</p>.<p class="Subhead">ಪ್ರಕರಣ ದಾಖಲು: ಸಿಎಎ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಜೆಎನ್ಯು ಮಾಜಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p><strong>620 ಕಿ.ಮೀ. ಮಾನವ ಸರಪಳಿ</strong></p>.<p><strong>ತಿರುವನಂತಪುರ:</strong> ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸಿಗೆ ಆಗ್ರಹಿಸಿ ಗಣರಾಜ್ಯ ದಿನವಾದ ಭಾನುವಾರ 620 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲಾಯಿತು.</p>.<p>ಕೇರಳ ಉತ್ತರದ ಕಾಸರಗೋಡಿನಿಂದ ದಕ್ಷಿಣದ ಕಲಿಯಕ್ಕವಿಲೈವರೆಗೆ ಮಾನವ ಸರಪಳಿ ರಚಿಸಲಾಗಿತ್ತು. ಸಿಪಿಎಂ ನೇತೃತ್ವದ ಎಲ್ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಪ್ರತಿಭಟನೆ ಆಯೋಜಿಸಿತ್ತು.</p>.<p>ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ ನಾಯಕ ಕಣಂ ರಾಜೇಂದ್ರನ್ ಪಾಲ್ಗೊಂಡಿದ್ದರು. ಮಾನವ ಸರಪಳಿಯಲ್ಲಿ 60ರಿಂದ 70 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ಎಲ್ಡಿಎಫ್ ಹೇಳಿದೆ.</p>.<p><strong>ಸಿಎಎ ವಿರುದ್ಧ ಪತ್ರಕ್ಕೆ ನಾಸೀರುದ್ದೀನ್ ಶಾ, ಮೀರಾ ಸಹಿ</strong></p>.<p><strong>ಮುಂಬೈ:</strong> ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಬಹಿರಂಗ ಪತ್ರಕ್ಕೆ ಬಾಲಿವುಡ್ ಚಿತ್ರ ನಿರ್ಮಾಪಕಿ ಮೀರಾ ನಾಯರ್, ನಟ ನಾಸೀರುದ್ದೀನ್ ಶಾ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಗಣ್ಯರು ಸಹಿ ಹಾಕಿದ್ದಾರೆ.</p>.<p>ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಭಾರತದ 'ಆತ್ಮ'ಕ್ಕೆ ಧಕ್ಕೆ ತರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಿಎಎ ವಿರೋಧಿಸಿ ಸುಮಾರು ಒಂದೂವರೆ ತಿಂಗಳಿಂದ ಇಲ್ಲಿನ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ಭಾನುವಾರ 55 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು.</p>.<p>2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲು ಅವರ ತಾಯಿ ರಾಧಿಕಾ ವೇಮುಲು ಮತ್ತು ದೆಹಲಿಯಲ್ಲಿ ಗುಂಪು ಹತ್ಯೆಗೆ ಒಳಗಾಗಿದ್ದ ಜುನೈದ್ ಖಾನ್ ಅವರ ತಾಯಿ ಸಾಯಿರಾ ಬಾನೊ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.</p>.<p>ಮೊದಲ ದಿನದಿಂದ ಪಾಲ್ಗೊಂಡಿರುವ 75 ಮತ್ತು 90 ವಯಸ್ಸಿನ ಮೂವರು ವೃದ್ಧೆಯರಾದ ಅಸ್ಮಾ ಖಾನ್, ಬಿಲ್ಕಿಸ್ ಮತ್ತು ಸರ್ವಾರಿ ಧ್ವಜಾರೋಹಣಕ್ಕೆ ನೆರ<br />ವಾದರು. ಇವರನ್ನು ‘ದಬಾಂಗ್ ದಾದೀಸ್ (ಅಜ್ಜಿಯಂದಿರು) ಎನ್ನಲಾಗು ತ್ತದೆ. ಡಿಸೆಂಬರ್ 15ರಿಂದ ದಕ್ಷಿಣ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.</p>.<p class="Subhead">ಪ್ರಕರಣ ದಾಖಲು: ಸಿಎಎ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಜೆಎನ್ಯು ಮಾಜಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p><strong>620 ಕಿ.ಮೀ. ಮಾನವ ಸರಪಳಿ</strong></p>.<p><strong>ತಿರುವನಂತಪುರ:</strong> ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸಿಗೆ ಆಗ್ರಹಿಸಿ ಗಣರಾಜ್ಯ ದಿನವಾದ ಭಾನುವಾರ 620 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲಾಯಿತು.</p>.<p>ಕೇರಳ ಉತ್ತರದ ಕಾಸರಗೋಡಿನಿಂದ ದಕ್ಷಿಣದ ಕಲಿಯಕ್ಕವಿಲೈವರೆಗೆ ಮಾನವ ಸರಪಳಿ ರಚಿಸಲಾಗಿತ್ತು. ಸಿಪಿಎಂ ನೇತೃತ್ವದ ಎಲ್ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಪ್ರತಿಭಟನೆ ಆಯೋಜಿಸಿತ್ತು.</p>.<p>ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ ನಾಯಕ ಕಣಂ ರಾಜೇಂದ್ರನ್ ಪಾಲ್ಗೊಂಡಿದ್ದರು. ಮಾನವ ಸರಪಳಿಯಲ್ಲಿ 60ರಿಂದ 70 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ಎಲ್ಡಿಎಫ್ ಹೇಳಿದೆ.</p>.<p><strong>ಸಿಎಎ ವಿರುದ್ಧ ಪತ್ರಕ್ಕೆ ನಾಸೀರುದ್ದೀನ್ ಶಾ, ಮೀರಾ ಸಹಿ</strong></p>.<p><strong>ಮುಂಬೈ:</strong> ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಬಹಿರಂಗ ಪತ್ರಕ್ಕೆ ಬಾಲಿವುಡ್ ಚಿತ್ರ ನಿರ್ಮಾಪಕಿ ಮೀರಾ ನಾಯರ್, ನಟ ನಾಸೀರುದ್ದೀನ್ ಶಾ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಗಣ್ಯರು ಸಹಿ ಹಾಕಿದ್ದಾರೆ.</p>.<p>ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಭಾರತದ 'ಆತ್ಮ'ಕ್ಕೆ ಧಕ್ಕೆ ತರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>