ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ | ನಮ್ಮ ಮಗಳ ಜೀವಕ್ಕೆ ಅಪಾಯವಿದೆ: ಸಂತ್ರಸ್ತೆಯ ತಂದೆ ಆರೋಪ

ಬಿಜೆಪಿ–ಟಿಎಂಸಿ ಆರೋಪ–ಪ್ರತ್ಯಾರೋಪ
Published : 13 ಅಕ್ಟೋಬರ್ 2025, 23:30 IST
Last Updated : 13 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಮಮತಾ ಹೇಳಿಕೆ: ವ್ಯಾಪಕ ಆಕ್ರೋಶ
ರಾತ್ರಿ 12.30ಕ್ಕೆ ಆಕೆ ಹೇಗೆ ಹೊರ ಹೋದಳು? ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಅದರಲ್ಲಿಯೂ ಇತರೆ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ವ್ಯಾಸಂಗಕ್ಕಾಗಿ ಬರುವವರು ಹಾಸ್ಟೆಲ್‌ಗಳ ನಿಯಮಗಳನ್ನು ಪಾಲಿಸಬೇಕು. ಎಲ್ಲಿಗೆ ಬೇಕಾದರೂ ಹೋಗುವ ಮೂಲಭೂತ ಹಕ್ಕು ಇದ್ದರೂ ಯಾರೂ ರಾತ್ರಿ ವೇಳೆ ಹೊರಗೆ ಹೋಗಬಾರದು.
– ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ನನ್ನ ಮಗಳು ಮಧ್ಯ ರಾತ್ರಿ ಹೊರಗೆ ಹೋಗಿರಲಿಲ್ಲ. ಮಮತಾ ಅವರ ಈ ಹೇಳಿಕೆಯು ಸಂಪೂರ್ಣ ಸುಳ್ಳು. ಆಕೆ ಹೊರ ಹೋಗುವಾದ ರಾತ್ರಿ 8 ಗಂಟೆಯಾಗಿತ್ತಷ್ಟೆ. ಅವರ ಹೇಳಿಕೆಯು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನದಂತೆ ಕಾಣುತ್ತಿದೆ. ನನ್ನ ಮಗಳು ಸ್ನೇಹಿತನೊಂದಿಗೆ ಹೊರಹೋಗಿದ್ದಳು. ದಾಳಿಕೋರರು ಬಂದ ಕೂಡಲೇ ಆತ ಓಡಿ ಹೋಗಿದ್ದಾನೆ. ಮಗಳ ಮೇಲೆ ರಾತ್ರಿ 8ರಿಂದ 9ರ ಮಧ್ಯೆ ದಾಳಿ ನಡೆದಿದೆ.
– ಸಂತ್ರಸ್ತೆಯ ತಂದೆ
ದೀದೀ ಎಂದೇ ಕರೆಸಿಕೊಳ್ಳುವ ಮಮತಾ ಅವರಂಥ ನಾಯಕಿಯು ನೀಡಿದ ಹೇಳಿಕೆ ಆಶ್ಚರ್ಯ ತರಿಸಿದೆ ಮತ್ತು ಇದು ಮಹಿಳೆಯರನ್ನು ಅವಮಾನಿಸಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಬದಲು ಅವರು ಲಿಂಗ ತಾರತಮ್ಯದ ಮಾತುಗಳನ್ನಾಡಿದ್ದಾರೆ. ನಿಮಗೆ ಒಡಿಶಾದ ಹುಡುಗಿಯ ಬಗ್ಗೆ ಕರುಣೆ ಇಲ್ಲವಾದರೆ ನಮ್ಮ ಸರ್ಕಾರಕ್ಕೆ ಪತ್ರ ಬರೆಯಿರಿ. ನಿಮ್ಮ ರಾಜ್ಯದಲ್ಲಿದ್ದರೂ ನಮಗೆ ನಮ್ಮ ಹುಡುಗಿಯ ಕಷ್ಟ ಅರ್ಥವಾಗುತ್ತದೆ.,
– ಪ್ರವತಿ ಪರಿದಾ, ಒಡಿಶಾ ಉಪ ಮುಖ್ಯಮಂತ್ರಿ
ಪೊಲೀಸರು ಎಲ್ಲ ರಸ್ತೆಗಳಲ್ಲಿಯೂ ಇರಲು ಸಾಧ್ಯವಿಲ್ಲ. ಘಟನೆ ನಡೆದ ಬಳಿಕವಷ್ಟೇ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯ. ಆದ್ದರಿಂದ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಕಾಲೇಜುಗಳಿಂದ ಹೊರಬರಬಾರದು ಮತ್ತು ಮಹಿಳೆಯರೇ ಎಚ್ಚರದಿಂದ ಇರಬೇಕು.
– ಸೌಗತ್‌ ರಾಯ್‌, ಟಿಎಂಸಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT