<p><strong>ನವದೆಹಲಿ: </strong>ಮದ್ಯ ಸೇವನೆಯ ಕನಿಷ್ಠ ಪ್ರಾಯ ಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಹೊಸ ಅಬಕಾರಿ ನೀತಿಗೆ ದೆಹಲಿ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದ್ದಾರೆ.</p>.<p>ಹೊಸ ಅಬಕಾರಿ ನೀತಿಯ ಪ್ರಕಾರ ದೆಹಲಿಯಲ್ಲಿ ಹೊಸ ಮದ್ಯದಂಗಡಿ ತೆರೆಯುವಂತಿಲ್ಲ.</p>.<p>ಇದನ್ನೂ ಓದಿ:<a href="https://www.prajavani.net/india-news/not-even-single-promise-kept-by-punjab-govt-take-revenge-in-assembly-polls-kejriwal-to-people-815341.html" itemprop="url">ಬೇಡಿಕೆ ಈಡೇರಿಸದ ಪಂಜಾಬ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಿ: ಕೇಜ್ರಿವಾಲ್ </a></p>.<p>ಸಚಿವರ ಮಂಡಳಿಯ ಶಿಫಾರಸುಗಳನ್ನು ಪರಿಗಣಿಸಿ ಹೊಸ ಅಬಕಾರಿ ನೀತಿಗೆ ಸಂಪುಟದ ಅನುಮೋದನೆ ದೊರೆತಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯದಿರಲು ಹಾಗೂ ಸರ್ಕಾರವೂ ಯಾವುದೇ ಮದ್ಯದಂಗಡಿಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ ಶೇಕಡಾ 60ರಷ್ಟು ಮದ್ಯದಂಗಡಿಗಳನ್ನು ಸರ್ಕಾರವೇ ಚಲಾಯಿಸುತ್ತಿದೆ.</p>.<p>ಮದ್ಯದಂಗಡಿಗಳ ಸಮಾನವಾದ ವಿತರಣೆಯನ್ನು ಸರ್ಕಾರ ಖಚಿತಪಡಿಸುತ್ತದೆ. ಈ ಮೂಲಕ ಮದ್ಯ ಮಾಫಿಯಾ ವ್ಯಾಪಾರವನ್ನು ತಡೆಯಬಹುದಾಗಿದೆ. ಅಬಕಾರಿ ನೀತಿಯ ಬದಲಾಯಣೆಗಳಿಂದ ಶೇಕಡಾ 20ರಷ್ಟು ಆದಾಯ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಮದ್ಯ ಸೇವನೆಯ ಕನಿಷ್ಠ ಪ್ರಾಯ ಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಹೊಸ ಅಬಕಾರಿ ನೀತಿಗೆ ದೆಹಲಿ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದ್ದಾರೆ.</p>.<p>ಹೊಸ ಅಬಕಾರಿ ನೀತಿಯ ಪ್ರಕಾರ ದೆಹಲಿಯಲ್ಲಿ ಹೊಸ ಮದ್ಯದಂಗಡಿ ತೆರೆಯುವಂತಿಲ್ಲ.</p>.<p>ಇದನ್ನೂ ಓದಿ:<a href="https://www.prajavani.net/india-news/not-even-single-promise-kept-by-punjab-govt-take-revenge-in-assembly-polls-kejriwal-to-people-815341.html" itemprop="url">ಬೇಡಿಕೆ ಈಡೇರಿಸದ ಪಂಜಾಬ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಿ: ಕೇಜ್ರಿವಾಲ್ </a></p>.<p>ಸಚಿವರ ಮಂಡಳಿಯ ಶಿಫಾರಸುಗಳನ್ನು ಪರಿಗಣಿಸಿ ಹೊಸ ಅಬಕಾರಿ ನೀತಿಗೆ ಸಂಪುಟದ ಅನುಮೋದನೆ ದೊರೆತಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯದಿರಲು ಹಾಗೂ ಸರ್ಕಾರವೂ ಯಾವುದೇ ಮದ್ಯದಂಗಡಿಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ ಶೇಕಡಾ 60ರಷ್ಟು ಮದ್ಯದಂಗಡಿಗಳನ್ನು ಸರ್ಕಾರವೇ ಚಲಾಯಿಸುತ್ತಿದೆ.</p>.<p>ಮದ್ಯದಂಗಡಿಗಳ ಸಮಾನವಾದ ವಿತರಣೆಯನ್ನು ಸರ್ಕಾರ ಖಚಿತಪಡಿಸುತ್ತದೆ. ಈ ಮೂಲಕ ಮದ್ಯ ಮಾಫಿಯಾ ವ್ಯಾಪಾರವನ್ನು ತಡೆಯಬಹುದಾಗಿದೆ. ಅಬಕಾರಿ ನೀತಿಯ ಬದಲಾಯಣೆಗಳಿಂದ ಶೇಕಡಾ 20ರಷ್ಟು ಆದಾಯ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>