<p><strong>ನವದೆಹಲಿ:</strong> ವಿವಿಧ ರಾಜ್ಯಗಳಿಂದ ಬಂದು ದೆಹಲಿ ಗಡಿಯಲ್ಲಿ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಜತೆಗೆ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆಗಳು ಆರಂಭವಾಗಿವೆ.</p>.<p>ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರು ತಮ್ಮ ನೂರಾರು ಮಂದಿ ಬೆಂಬಲಿಗರೊಂದಿಗೆ ದೆಹಲಿ- ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮಂಗಳವಾರ ಸೇರಿಕೊಂಡರು.</p>.<p>‘ನಡುಗುವ ಚಳಿಯಲ್ಲೂ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅವರ ಜತೆಗಿದ್ದೇವೆ. ಹೊಸ ಕೃಷಿ ಕಾನೂನುಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p class="Subhead"><strong>ವಿದ್ಯಾರ್ಥಿಗಳಬೆಂಬಲ: </strong>ದೆಹಲಿಯ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಿದರು.</p>.<p>‘ಹೋರಾಟಕ್ಕೆ ಬೆಂಬಲ ಸೂಚಿಸಿ ನಾವು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭಿಸಿದ್ದೇವೆ. ಹೊಸ ಕೃಷಿ ಕಾನೂನುಗಳ ಮೂಲಕ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಶ್ರೀಮಂತ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ’ ಎಂದು ಕ್ರಾಂತಿಕಾರಿ ಯುವ ಸಂಘಟನ್ (ಕೆವೈಎಸ್) ಆರೋಪಿಸಿದೆ.</p>.<p>ಈ ನಡುವೆ, ಪ್ರಧಾನಿ ಮಧ್ಯಪ್ರವೇಶಕ್ಕೆ ಹಲವು ನಾಯಕರು ಒತ್ತಾಯಿಸಿದ್ದಾರೆ. ‘ಮೋದಿ ಅವರು ನಾಯಕತ್ವ ವಹಿಸಿಕೊಂಡು, ರೈತರು ಹಾಗೂ ಸರ್ಕಾರದ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಬೇಕು’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.</p>.<p>‘ಸರ್ಕಾರವು ರೈತರ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈ ನಿರ್ಧಾರ ಕೈಗೊಳ್ಳುವುದು ತುಂಬ ವಿಳಂಬವಾಯಿತು. ರೈತರ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯ’ ಎಂದು ಟ್ವೀಟ್ ಮಾಡಿದ್ದಾರೆ.</p>.<p class="Subhead"><strong>ಮಾತುಕತೆ ನಡೆಸಿ:</strong> ‘ನೀವು ದೇಶದ ಒಳಿತನ್ನು ಬಯಸುವವರು. ದೇಶಕ್ಕೆ ಒಳ್ಳೆಯದಾಗಬೇಕಾದರೆ ಕೃಷಿ ಕ್ಷೇತ್ರ ಚೆನ್ನಾಗಿರಬೇಕು. ಅದಕ್ಕೆ ರೈತರ ಜತೆಗೆ ಮಾತುಕತೆ ನಡೆಸುವುದು ಅಗತ್ಯ. ಆ ಕೆಲಸವನ್ನು ಸಾಕಷ್ಟು ಮೊದಲೇ ಮಾಡಬೇಕಾಗಿತ್ತು’ ಎಂದು ಮಕ್ಕಳ್ ನೀದಿ ಮಯ್ಯಂ ಅಧ್ಯಕ್ಷ, ನಟ ಕಮಲ್ಹಾಸನ್ ಸಲಹೆ ನೀಡಿದ್ದಾರೆ.</p>.<p class="Subhead"><strong>ಅಹವಾಲು ಆಲಿಸಿ:</strong> ‘ರೈತರು ದೇಶದ ಜೀವನಾಡಿಗಳು. ಅವರ ಅಹವಾಲುಗಳನ್ನು ಸರ್ಕಾರ ಆಲಿಸಬೇಕು’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.</p>.<p><strong>ಭೂಕಬಳಿಕೆ ಹುನ್ನಾರ:</strong> ‘ಆದಾಯವನ್ನು ದ್ವಿಗುಣಗೊಳಿಸುವುದಾಗಿ ರೈತರಿಗೆ ಹುಸಿ ಭರವಸೆ ನೀಡಿದ್ದ ಸರ್ಕಾರವು ಈಗ ಕೃಷಿ ಕಾನೂನುಗಳ ಮೂಲಕ ರೈತರ ಭೂಮಿಯನ್ನು ಹಬಳಿಸುವ ಸಂಚು ರೂಪಿಸಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.</p>.<p><strong>ಕೇಂದ್ರಕ್ಕೆ ಮೈತ್ರಿ ಪಕ್ಷಗಳ ಸಲಹೆ</strong></p>.<p>ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಮಿತ್ರಪಕ್ಷಗಳು ಸಲಹೆಗಳನ್ನು ನೀಡಿವೆ.</p>.<p>‘ಹೊಸ ಕೃಷಿ ಕಾನೂನಿನಿಂದ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ನಾಶವಾಗುತ್ತದೆ, ಕೃಷಿ ಉತ್ಪನ್ನಗಳ ಸಂಗ್ರಹದ ಮೇಲೆ ಹೊಸ ಕಾನೂನುಗಳು ವ್ಯತಿರಿಕ್ತ ಪಡಿಣಾಮ ಬೀರುತ್ತವೆ ಎಂಬ ಭಯ ರೈತರಲ್ಲಿದೆ. ಈ ಭಯವನ್ನು ಸರ್ಕಾರ ದೂರಮಾಡಬೇಕು’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.</p>.<p>‘ಬಿಹಾರದಲ್ಲಿ 2006ರಲ್ಲಿಯೇ ಎಪಿಎಂಸಿಗಳನ್ನು ಮುಚ್ಚಿ, ಪಿಎಸಿಎಸ್ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಈ ವ್ಯವಸ್ಥೆ ಬಂದ ಬಳಿಕವೇ ಖರೀದಿ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಹೊಸ ಕಾನೂನುಗಳ ಬಗ್ಗೆಯಾಗಲಿ, ಬೆಂಬಲ ಬೆಲೆಯ ಬಗ್ಗೆಯಾಗಲಿ ಭಯಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.</p>.<p><strong>ಲಿಖಿತ ಭರವಸೆ ಕೊಡಿ:</strong> ಹೊಸ ಕಾನೂನುಗಳು ಜಾರಿಯಾದರೂ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ ಎಂಬುದನ್ನು ಸರ್ಕಾರ ರೈತರಿಗೆ ಲಿಖಿತ ಭರವಸೆ ನೀಡಬೇಕು ಎಂದು ಹರಿಯಾಣದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜನನಾಯಕ ಜನತಾಪಾರ್ಟಿಯ ಅಧ್ಯಕ್ಷ ಅಜಯ್ಸಿಂಗ್ ಚೌಟಾಲ ಸಲಹೆ ನೀಡಿದ್ದಾರೆ.</p>.<p>ಬೆಂಬಲಬೆಲೆ ವ್ಯವಸ್ಥೆ ಮುಂದುವರಿಯಲಿದೆ ಎಂದು ಪ್ರಧಾನಿಯೇ ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ಲಿಖಿತವಾಗಿ ಆ ಭರವಸೆಯನ್ನು ನೀಡಲು ಹಿಂಜರಿಯುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.</p>.<p>ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ವಿರೋಧಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಅಜಯ್ಸಿಂಗ್ ಈ ಹಿಂದೆ ಆರೋಪಿಸಿದ್ದರು. ಅವರ ಪುತ್ರ, ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು, ‘ಬೆಂಬಲಬೆಲೆ ವ್ಯವಸ್ಥೆ ರದ್ದುಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದೂ ಹೇಳಿದ್ದರು.</p>.<p><strong>ಬಿಲ್ಕಿಸ್ ಬಾನುಗೆ ತಡೆ</strong></p>.<p>ಪೌರತ್ವ ಕಾನೂನನ್ನು ವಿರೋಧಿಸಿ ಶಾಹೀನ್ಬಾಗ್ನಲ್ಲಿ ನಡೆದಿದ್ದ ಸುದೀರ್ಘ ಹೋರಾಟದ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ಬಾನು (ಬಿಲ್ಕಿಸ್ ದೀದಿ) ಅವರನ್ನು ಪೊಲೀಸರು ತಡೆದು ಪುನಃ ಮನೆಗೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.</p>.<p>ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 82 ವರ್ಷ ವಯಸ್ಸಿನ ಬಿಲ್ಕಿಸ್ ಬಾನು ಅವರು ದೆಹಲಿ– ಹರಿಯಾಣ ಗಡಿಭಾಗದ ಸಿಂಘುಗೆ ಬಂದಿದ್ದರು. ಆದರೆ ಅಲ್ಲಿ ಅವರನ್ನು ಪೊಲೀಸರು ತಡೆದರು.</p>.<p>‘ಸಿಂಘು ಗಡಿಯಲ್ಲಿ ಬಿಲ್ಕಿಸ್ ಅವರನ್ನು ತಡೆದು ದೆಹಲಿಯಲ್ಲಿರುವ ಅವರ ಮನೆಗೆ ವಾಪಸ್ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಪಕ್ಷೇತರ ಅಭ್ಯರ್ಥಿ ಸೋಂಬಿರ್ ಸಂಗ್ವಾನ್ ಅವರು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ‘ರೈತರಿಗೆ ಸಹಾನುಭೂತಿ ತೋರಿಸುವುದಕ್ಕೆ ಸೀಮಿತವಾಗದೆ, ರೈತವಿರೋಧಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನಾನು ಹಿಂತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p><strong>ಪ್ರಶಸ್ತಿ ಮರಳಿಸಲು ತೀರ್ಮಾನ</strong></p>.<p>ಪದ್ಮಶ್ರೀ, ಅರ್ಜುನ ಸೇರಿದಂತೆ ತಾವು ಪಡೆದ ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್ ಕೊಡುವ ಮೂಲಕ ರೈತರ ಹೋರಾಟವನ್ನು ಬೆಂಬಲಿಸಲು ಪಂಜಾಬ್ನ ಕೆಲವು ಮಾಜಿ ಕ್ರೀಡಾಪಟುಗಳು ತೀರ್ಮಾನಿಸಿದ್ದಾರೆ.</p>.<p>ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಬ್ಯಾಸ್ಕೆಟ್ಬಾಲ್ ಪಟು ಸಜ್ಜನ್ಸಿಂಗ್ ಚೀಮಾ, ಹಾಕಿ ಆಟಗಾರ ರಾಜ್ಬೀರ್ ಕೌರ್ ಅವರು ಪ್ರಶಸ್ತಿ ಮರಳಿಸಲು ಮುಂದಾಗಿದ್ದಾರೆ.</p>.<p>ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ ಹಾಗೂ ಆಶ್ರುವಾಯು ಶೆಲ್ಗಳನ್ನು ಬಳಸಿದ್ದನ್ನು ವಿರೋಧಿಸಿರುವ ಈ ಕ್ರೀಡಾಪಟುಗಳು, ‘ಡಿ.5ರಂದು ದೆಹಲಿಗೆ ತೆರಳಿ ನಾವು ಪಡೆದ ಪ್ರಶಸ್ತಿಗಳನ್ನು ರಾಷ್ಟ್ರಪತಿಭವನದ ಹೊರಗೆ ಇಟ್ಟು ಬರುತ್ತೇವೆ. ಅನೇಕ ಮಾಜಿ ಕ್ರೀಡಾಪಟುಗಳು ನಮ್ಮ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿವಿಧ ರಾಜ್ಯಗಳಿಂದ ಬಂದು ದೆಹಲಿ ಗಡಿಯಲ್ಲಿ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಜತೆಗೆ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆಗಳು ಆರಂಭವಾಗಿವೆ.</p>.<p>ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರು ತಮ್ಮ ನೂರಾರು ಮಂದಿ ಬೆಂಬಲಿಗರೊಂದಿಗೆ ದೆಹಲಿ- ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮಂಗಳವಾರ ಸೇರಿಕೊಂಡರು.</p>.<p>‘ನಡುಗುವ ಚಳಿಯಲ್ಲೂ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅವರ ಜತೆಗಿದ್ದೇವೆ. ಹೊಸ ಕೃಷಿ ಕಾನೂನುಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p class="Subhead"><strong>ವಿದ್ಯಾರ್ಥಿಗಳಬೆಂಬಲ: </strong>ದೆಹಲಿಯ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಿದರು.</p>.<p>‘ಹೋರಾಟಕ್ಕೆ ಬೆಂಬಲ ಸೂಚಿಸಿ ನಾವು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭಿಸಿದ್ದೇವೆ. ಹೊಸ ಕೃಷಿ ಕಾನೂನುಗಳ ಮೂಲಕ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಶ್ರೀಮಂತ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ’ ಎಂದು ಕ್ರಾಂತಿಕಾರಿ ಯುವ ಸಂಘಟನ್ (ಕೆವೈಎಸ್) ಆರೋಪಿಸಿದೆ.</p>.<p>ಈ ನಡುವೆ, ಪ್ರಧಾನಿ ಮಧ್ಯಪ್ರವೇಶಕ್ಕೆ ಹಲವು ನಾಯಕರು ಒತ್ತಾಯಿಸಿದ್ದಾರೆ. ‘ಮೋದಿ ಅವರು ನಾಯಕತ್ವ ವಹಿಸಿಕೊಂಡು, ರೈತರು ಹಾಗೂ ಸರ್ಕಾರದ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಬೇಕು’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.</p>.<p>‘ಸರ್ಕಾರವು ರೈತರ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈ ನಿರ್ಧಾರ ಕೈಗೊಳ್ಳುವುದು ತುಂಬ ವಿಳಂಬವಾಯಿತು. ರೈತರ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯ’ ಎಂದು ಟ್ವೀಟ್ ಮಾಡಿದ್ದಾರೆ.</p>.<p class="Subhead"><strong>ಮಾತುಕತೆ ನಡೆಸಿ:</strong> ‘ನೀವು ದೇಶದ ಒಳಿತನ್ನು ಬಯಸುವವರು. ದೇಶಕ್ಕೆ ಒಳ್ಳೆಯದಾಗಬೇಕಾದರೆ ಕೃಷಿ ಕ್ಷೇತ್ರ ಚೆನ್ನಾಗಿರಬೇಕು. ಅದಕ್ಕೆ ರೈತರ ಜತೆಗೆ ಮಾತುಕತೆ ನಡೆಸುವುದು ಅಗತ್ಯ. ಆ ಕೆಲಸವನ್ನು ಸಾಕಷ್ಟು ಮೊದಲೇ ಮಾಡಬೇಕಾಗಿತ್ತು’ ಎಂದು ಮಕ್ಕಳ್ ನೀದಿ ಮಯ್ಯಂ ಅಧ್ಯಕ್ಷ, ನಟ ಕಮಲ್ಹಾಸನ್ ಸಲಹೆ ನೀಡಿದ್ದಾರೆ.</p>.<p class="Subhead"><strong>ಅಹವಾಲು ಆಲಿಸಿ:</strong> ‘ರೈತರು ದೇಶದ ಜೀವನಾಡಿಗಳು. ಅವರ ಅಹವಾಲುಗಳನ್ನು ಸರ್ಕಾರ ಆಲಿಸಬೇಕು’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.</p>.<p><strong>ಭೂಕಬಳಿಕೆ ಹುನ್ನಾರ:</strong> ‘ಆದಾಯವನ್ನು ದ್ವಿಗುಣಗೊಳಿಸುವುದಾಗಿ ರೈತರಿಗೆ ಹುಸಿ ಭರವಸೆ ನೀಡಿದ್ದ ಸರ್ಕಾರವು ಈಗ ಕೃಷಿ ಕಾನೂನುಗಳ ಮೂಲಕ ರೈತರ ಭೂಮಿಯನ್ನು ಹಬಳಿಸುವ ಸಂಚು ರೂಪಿಸಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.</p>.<p><strong>ಕೇಂದ್ರಕ್ಕೆ ಮೈತ್ರಿ ಪಕ್ಷಗಳ ಸಲಹೆ</strong></p>.<p>ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಮಿತ್ರಪಕ್ಷಗಳು ಸಲಹೆಗಳನ್ನು ನೀಡಿವೆ.</p>.<p>‘ಹೊಸ ಕೃಷಿ ಕಾನೂನಿನಿಂದ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ನಾಶವಾಗುತ್ತದೆ, ಕೃಷಿ ಉತ್ಪನ್ನಗಳ ಸಂಗ್ರಹದ ಮೇಲೆ ಹೊಸ ಕಾನೂನುಗಳು ವ್ಯತಿರಿಕ್ತ ಪಡಿಣಾಮ ಬೀರುತ್ತವೆ ಎಂಬ ಭಯ ರೈತರಲ್ಲಿದೆ. ಈ ಭಯವನ್ನು ಸರ್ಕಾರ ದೂರಮಾಡಬೇಕು’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.</p>.<p>‘ಬಿಹಾರದಲ್ಲಿ 2006ರಲ್ಲಿಯೇ ಎಪಿಎಂಸಿಗಳನ್ನು ಮುಚ್ಚಿ, ಪಿಎಸಿಎಸ್ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಈ ವ್ಯವಸ್ಥೆ ಬಂದ ಬಳಿಕವೇ ಖರೀದಿ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಹೊಸ ಕಾನೂನುಗಳ ಬಗ್ಗೆಯಾಗಲಿ, ಬೆಂಬಲ ಬೆಲೆಯ ಬಗ್ಗೆಯಾಗಲಿ ಭಯಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.</p>.<p><strong>ಲಿಖಿತ ಭರವಸೆ ಕೊಡಿ:</strong> ಹೊಸ ಕಾನೂನುಗಳು ಜಾರಿಯಾದರೂ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ ಎಂಬುದನ್ನು ಸರ್ಕಾರ ರೈತರಿಗೆ ಲಿಖಿತ ಭರವಸೆ ನೀಡಬೇಕು ಎಂದು ಹರಿಯಾಣದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜನನಾಯಕ ಜನತಾಪಾರ್ಟಿಯ ಅಧ್ಯಕ್ಷ ಅಜಯ್ಸಿಂಗ್ ಚೌಟಾಲ ಸಲಹೆ ನೀಡಿದ್ದಾರೆ.</p>.<p>ಬೆಂಬಲಬೆಲೆ ವ್ಯವಸ್ಥೆ ಮುಂದುವರಿಯಲಿದೆ ಎಂದು ಪ್ರಧಾನಿಯೇ ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ಲಿಖಿತವಾಗಿ ಆ ಭರವಸೆಯನ್ನು ನೀಡಲು ಹಿಂಜರಿಯುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.</p>.<p>ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ವಿರೋಧಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಅಜಯ್ಸಿಂಗ್ ಈ ಹಿಂದೆ ಆರೋಪಿಸಿದ್ದರು. ಅವರ ಪುತ್ರ, ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರು, ‘ಬೆಂಬಲಬೆಲೆ ವ್ಯವಸ್ಥೆ ರದ್ದುಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದೂ ಹೇಳಿದ್ದರು.</p>.<p><strong>ಬಿಲ್ಕಿಸ್ ಬಾನುಗೆ ತಡೆ</strong></p>.<p>ಪೌರತ್ವ ಕಾನೂನನ್ನು ವಿರೋಧಿಸಿ ಶಾಹೀನ್ಬಾಗ್ನಲ್ಲಿ ನಡೆದಿದ್ದ ಸುದೀರ್ಘ ಹೋರಾಟದ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ಬಾನು (ಬಿಲ್ಕಿಸ್ ದೀದಿ) ಅವರನ್ನು ಪೊಲೀಸರು ತಡೆದು ಪುನಃ ಮನೆಗೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.</p>.<p>ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 82 ವರ್ಷ ವಯಸ್ಸಿನ ಬಿಲ್ಕಿಸ್ ಬಾನು ಅವರು ದೆಹಲಿ– ಹರಿಯಾಣ ಗಡಿಭಾಗದ ಸಿಂಘುಗೆ ಬಂದಿದ್ದರು. ಆದರೆ ಅಲ್ಲಿ ಅವರನ್ನು ಪೊಲೀಸರು ತಡೆದರು.</p>.<p>‘ಸಿಂಘು ಗಡಿಯಲ್ಲಿ ಬಿಲ್ಕಿಸ್ ಅವರನ್ನು ತಡೆದು ದೆಹಲಿಯಲ್ಲಿರುವ ಅವರ ಮನೆಗೆ ವಾಪಸ್ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಪಕ್ಷೇತರ ಅಭ್ಯರ್ಥಿ ಸೋಂಬಿರ್ ಸಂಗ್ವಾನ್ ಅವರು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ‘ರೈತರಿಗೆ ಸಹಾನುಭೂತಿ ತೋರಿಸುವುದಕ್ಕೆ ಸೀಮಿತವಾಗದೆ, ರೈತವಿರೋಧಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನಾನು ಹಿಂತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p><strong>ಪ್ರಶಸ್ತಿ ಮರಳಿಸಲು ತೀರ್ಮಾನ</strong></p>.<p>ಪದ್ಮಶ್ರೀ, ಅರ್ಜುನ ಸೇರಿದಂತೆ ತಾವು ಪಡೆದ ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್ ಕೊಡುವ ಮೂಲಕ ರೈತರ ಹೋರಾಟವನ್ನು ಬೆಂಬಲಿಸಲು ಪಂಜಾಬ್ನ ಕೆಲವು ಮಾಜಿ ಕ್ರೀಡಾಪಟುಗಳು ತೀರ್ಮಾನಿಸಿದ್ದಾರೆ.</p>.<p>ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಬ್ಯಾಸ್ಕೆಟ್ಬಾಲ್ ಪಟು ಸಜ್ಜನ್ಸಿಂಗ್ ಚೀಮಾ, ಹಾಕಿ ಆಟಗಾರ ರಾಜ್ಬೀರ್ ಕೌರ್ ಅವರು ಪ್ರಶಸ್ತಿ ಮರಳಿಸಲು ಮುಂದಾಗಿದ್ದಾರೆ.</p>.<p>ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ ಹಾಗೂ ಆಶ್ರುವಾಯು ಶೆಲ್ಗಳನ್ನು ಬಳಸಿದ್ದನ್ನು ವಿರೋಧಿಸಿರುವ ಈ ಕ್ರೀಡಾಪಟುಗಳು, ‘ಡಿ.5ರಂದು ದೆಹಲಿಗೆ ತೆರಳಿ ನಾವು ಪಡೆದ ಪ್ರಶಸ್ತಿಗಳನ್ನು ರಾಷ್ಟ್ರಪತಿಭವನದ ಹೊರಗೆ ಇಟ್ಟು ಬರುತ್ತೇವೆ. ಅನೇಕ ಮಾಜಿ ಕ್ರೀಡಾಪಟುಗಳು ನಮ್ಮ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>