<p><strong>ನವದೆಹಲಿ</strong>: ಸರ್ಕಾರಿ ಶಾಲೆಯೊಂದರಲ್ಲಿ ಸೋಮವಾರ ಸಿಂಧೂರ ಗಿಡ ನೆಟ್ಟ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ‘ನಮ್ಮ ಸೇನೆಯ ಸಾಮರ್ಥ್ಯವು ದೇಶದ ಶಕ್ತಿಯ ಪ್ರತೀಕ’ ಎಂದು ಹೇಳಿದರು.</p>.<p>‘ತಾಯಿಯ ಹೆಸರಲ್ಲಿ ಒಂದು ಗಿಡ 2.0’ ಅಭಿಯಾನಕ್ಕೆ ಶಾಲಿಮಾರ್ ಬಾಗ್ನ ಶಾಲೆಯೊಂದರಲ್ಲಿ ರೇಖಾ ಗುಪ್ತಾ ಚಾಲನೆ ನೀಡಿದರು.</p>.<p>‘ಇದು ಕೇವಲ ಪರಿಸರ ದಿನದ ಆಚರಣೆಯಲ್ಲ, ತಾಯಂದಿರು, ತಾಯ್ನಾಡು ಮತ್ತು ಪ್ರಕೃತಿಯ ಬಗೆಗಿನ ಭಾವನಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದ್ಧತೆಯಾಗಿದೆ’ ಎಂದು ಹೇಳಿದರು.</p>.<p>ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ದ ಸ್ಮರಣೆಗಾಗಿ ಸಿಂಧೂರ ಗಿಡ ನೆಡುವ ಅಭಿಯಾನ ಆರಂಭಗೊಂಡಿದೆ.</p>.<p>‘ಆಪರೇಷನ್ ಸಿಂಧೂರ’ದ ಮೂಲಕ ನಮ್ಮ ಸಹೋದರಿಯರ ಘನತೆಯನ್ನು ಎತ್ತಿಹಿಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರೇಖಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸರ್ಕಾರಿ ಶಾಲೆಯೊಂದರಲ್ಲಿ ಸೋಮವಾರ ಸಿಂಧೂರ ಗಿಡ ನೆಟ್ಟ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ‘ನಮ್ಮ ಸೇನೆಯ ಸಾಮರ್ಥ್ಯವು ದೇಶದ ಶಕ್ತಿಯ ಪ್ರತೀಕ’ ಎಂದು ಹೇಳಿದರು.</p>.<p>‘ತಾಯಿಯ ಹೆಸರಲ್ಲಿ ಒಂದು ಗಿಡ 2.0’ ಅಭಿಯಾನಕ್ಕೆ ಶಾಲಿಮಾರ್ ಬಾಗ್ನ ಶಾಲೆಯೊಂದರಲ್ಲಿ ರೇಖಾ ಗುಪ್ತಾ ಚಾಲನೆ ನೀಡಿದರು.</p>.<p>‘ಇದು ಕೇವಲ ಪರಿಸರ ದಿನದ ಆಚರಣೆಯಲ್ಲ, ತಾಯಂದಿರು, ತಾಯ್ನಾಡು ಮತ್ತು ಪ್ರಕೃತಿಯ ಬಗೆಗಿನ ಭಾವನಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದ್ಧತೆಯಾಗಿದೆ’ ಎಂದು ಹೇಳಿದರು.</p>.<p>ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ದ ಸ್ಮರಣೆಗಾಗಿ ಸಿಂಧೂರ ಗಿಡ ನೆಡುವ ಅಭಿಯಾನ ಆರಂಭಗೊಂಡಿದೆ.</p>.<p>‘ಆಪರೇಷನ್ ಸಿಂಧೂರ’ದ ಮೂಲಕ ನಮ್ಮ ಸಹೋದರಿಯರ ಘನತೆಯನ್ನು ಎತ್ತಿಹಿಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರೇಖಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>