<p><strong>ಗಾಜೀಪುರ(ಉತ್ತರ ಪ್ರದೇಶ): </strong>‘ಇಷ್ಟೊಂದು ವೈವಿಧ್ಯದ ಮಧ್ಯೆಯೂ ದೇಶವು ಸಾವಿರಾರು ವರ್ಷಗಳಿಂದ ಒಂದು ದೇಶವಾಗಿಯೇ ನಿಂತಿದೆ. ಪಾಕಿಸ್ತಾನ ಇರಬಹುದು ಚೀನಾ ಇರಬಹುದು, ಯಾರೇ ನಡೆಸಿದ ದಾಳಿಯನ್ನು ದೇಶವು ಒಂದುಗೂಡಿ ಎದುರಿಸಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ಅಭಿಪ್ರಾಯಪಟ್ಟರು.</p><p>ಇಂಡಿಯಾ ಮತ್ತು ಪಾಕಿಸ್ತಾನದ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಗಾಜೀಪುರದ ಅಬ್ದುಲ್ ಹಮೀದ್ ಅವರ ಕುರಿತ ‘ಮೇರೆ ಪಾಪಾ ಪರಂವೀರ್’ (ಪರಮ ವೀರನಾಗಿರುವ ನನ್ನ ತಂದೆ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವತ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಹಮೀದ್ ಅವರ ಶೌರ್ಯಕ್ಕೆ ಅವರಿಗೆ ಮರಣೋತ್ತರ ‘ಪರಮವೀರ ಚಕ್ರ’ವನ್ನು ನೀಡಿ ಗೌರವಿಸಲಾಗಿದೆ.</p><p>‘ನಾವು ಒಂದು ದೇಶ, ಒಂದು ಸಮಾಜದಂತೆ ಇದ್ದೇವೆ. ಪ್ರೀತಿ ಹಾಗೂ ದೇಶದ ಕುರಿತ ಭಕ್ತಿಯು ದೇಶದ ತುಂಬೆಲ್ಲಾ ಹರಡಿಕೊಂಡಿದೆ. ಹೊರಗೆನಿಂತು ನೋಡಿದಾಗ ಏನೇ ಕಾಣಬಹುದು. ಆದರೆ, ದೇಶದೆಲ್ಲೆಡೆ ಪ್ರೀತಿ ಮತ್ತು ದೇಶಭಕ್ತಿ ತುಂಬಿಕೊಂಡಿದೆ’ ಎಂದು ಹೇಳಿದರು. </p><p>ಹಮೀದ್ ಅವರ ಕುರಿತು ಹಮೀದ್ ಅವರ ಜೊತೆಗಿದ್ದ ಸೈನಿಕರು ಹೇಳಿದ ಕಥೆಗಳ ಗುಚ್ಛವೇ ಈ ಪುಸ್ತಕ. ಕಾರ್ಯಕ್ರಮದಲ್ಲಿ ಹಮೀದ್ ಅವರ ಮಗ ಜೈನುಲ್ ಹಸನ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಜೀಪುರ(ಉತ್ತರ ಪ್ರದೇಶ): </strong>‘ಇಷ್ಟೊಂದು ವೈವಿಧ್ಯದ ಮಧ್ಯೆಯೂ ದೇಶವು ಸಾವಿರಾರು ವರ್ಷಗಳಿಂದ ಒಂದು ದೇಶವಾಗಿಯೇ ನಿಂತಿದೆ. ಪಾಕಿಸ್ತಾನ ಇರಬಹುದು ಚೀನಾ ಇರಬಹುದು, ಯಾರೇ ನಡೆಸಿದ ದಾಳಿಯನ್ನು ದೇಶವು ಒಂದುಗೂಡಿ ಎದುರಿಸಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ಅಭಿಪ್ರಾಯಪಟ್ಟರು.</p><p>ಇಂಡಿಯಾ ಮತ್ತು ಪಾಕಿಸ್ತಾನದ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಗಾಜೀಪುರದ ಅಬ್ದುಲ್ ಹಮೀದ್ ಅವರ ಕುರಿತ ‘ಮೇರೆ ಪಾಪಾ ಪರಂವೀರ್’ (ಪರಮ ವೀರನಾಗಿರುವ ನನ್ನ ತಂದೆ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವತ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಹಮೀದ್ ಅವರ ಶೌರ್ಯಕ್ಕೆ ಅವರಿಗೆ ಮರಣೋತ್ತರ ‘ಪರಮವೀರ ಚಕ್ರ’ವನ್ನು ನೀಡಿ ಗೌರವಿಸಲಾಗಿದೆ.</p><p>‘ನಾವು ಒಂದು ದೇಶ, ಒಂದು ಸಮಾಜದಂತೆ ಇದ್ದೇವೆ. ಪ್ರೀತಿ ಹಾಗೂ ದೇಶದ ಕುರಿತ ಭಕ್ತಿಯು ದೇಶದ ತುಂಬೆಲ್ಲಾ ಹರಡಿಕೊಂಡಿದೆ. ಹೊರಗೆನಿಂತು ನೋಡಿದಾಗ ಏನೇ ಕಾಣಬಹುದು. ಆದರೆ, ದೇಶದೆಲ್ಲೆಡೆ ಪ್ರೀತಿ ಮತ್ತು ದೇಶಭಕ್ತಿ ತುಂಬಿಕೊಂಡಿದೆ’ ಎಂದು ಹೇಳಿದರು. </p><p>ಹಮೀದ್ ಅವರ ಕುರಿತು ಹಮೀದ್ ಅವರ ಜೊತೆಗಿದ್ದ ಸೈನಿಕರು ಹೇಳಿದ ಕಥೆಗಳ ಗುಚ್ಛವೇ ಈ ಪುಸ್ತಕ. ಕಾರ್ಯಕ್ರಮದಲ್ಲಿ ಹಮೀದ್ ಅವರ ಮಗ ಜೈನುಲ್ ಹಸನ್ ಅವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>