ಅಯೋಧ್ಯೆ: ಶ್ರೀರಾಮನವಮಿ ಪ್ರಯುಕ್ತ ಬಾಲರಾಮನ ಕಣ್ತುಂಬಿಕೊಳ್ಳಲು ದೇಶದ ಹಲವೆಡೆಯಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸಿದ್ದಾರೆ.
ರಾಮಮಂದಿರ ನಿರ್ಮಾಣಗೊಂಡ ನಂತರ ಆಚರಿಸಲಾಗುತ್ತಿರುವ ಮೊದಲ ರಾಮನವಮಿಗೆ ಅಯೋಧ್ಯೆ ಸಿಂಗಾರಗೊಂಡಿದೆ. ರಾಮನವಮಿ ವಿಶೇಷವಾಗಿ ದೇವರಾಹ ಹಂಸ ಬಾಬಾ ಟ್ರಸ್ಟ್ ರಾಮಮಂದಿರಕ್ಕೆ 1,11,111 ಕೆ.ಜಿ ಲಡ್ಡನ್ನು ಅರ್ಪಿಸಿದೆ.
ಮುಂಜಾನೆ 3:30ರಿಂದ ರಾತ್ರಿ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಯೋಧ್ಯೆ ಬೀದಿಗಳನ್ನು ಎಲ್ಇಡಿ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅಯೋಧ್ಯೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.