ಲೋಪಕ್ಕೆ ಕಾರಣರಾದ ಇತರ ಅಧಿಕಾರಿಗಳನ್ನು ಮುಂದಿನ ಮೂರು ದಿನಗಳಲ್ಲಿ ಗುರುತಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯ ಸಮಿತಿಗೆ ಸೂಚಿಸಲಾಗಿದೆ. ಪುರ್ಬಾ ಮೇದಿನಿಪುರದ ಜಿಲ್ಲಾಧಿಕಾರಿ ವಿಭು ಗೋಯಲ್ ಅವರನ್ನು ತಕ್ಷಣವೇ ವರ್ಗಾಯಿಸಬೇಕು. ಈ ಸ್ಥಾನಕ್ಕೆ ಐಎಎಸ್ ಅಧಿಕಾರಿ ಸ್ಮಿತಾ ಪಾಂಡೆ ಅವರನ್ನು ನೇಮಿಸಬೇಕು. ಗೋಯಲ್ ಅವರಿಗೆ ಚುನಾವಣೆ ಹೊಣೆ ಇಲ್ಲದ ಹುದ್ದೆ ನೀಡಬೇಕು ಎಂದು ಆಯೋಗವು ಸೂಚಿಸಿದೆ.