ಕಾಮತ್ ಅವರು ಈ ಮೊದಲು ಡಿಆರ್ಡಿಒದನೌಕಾ ವ್ಯವಸ್ಥೆ ಮತ್ತು ಸರಕು ವಿಭಾಗದ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಡಿಆರ್ಡಿಒ ಮುಖ್ಯಸ್ಥರಾಗಿದ್ದ ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕಾಮತ್ ನೇಮಕಗೊಂಡಿದ್ದಾರೆ.