<p><strong>ನವದೆಹಲಿ:</strong> ವಿದ್ಯಾರ್ಥಿಗಳು ಯಾವ ಪ್ರದೇಶಕ್ಕೆ ಸೇರಿದವರು ಎಂಬ ಆಧಾರದಲ್ಲಿ ಅವರಿಗೆ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್ಗಳಲ್ಲಿ ರಾಜ್ಯ ಸರ್ಕಾರಗಳು ಮೀಸಲಾತಿ ಕಲ್ಪಿಸುವುದು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.</p>.<p>ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ಪೀಠವು, ಇಂತಹ ಮೀಸಲಾತಿಗೆ ಅವಕಾಶ ನೀಡಿದರೆ ಹಲವು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.</p>.<p>‘ನಾವೆಲ್ಲರೂ ಭಾರತದ ನಿವಾಸಿಗಳು. ಒಂದು ದೇಶದ ಪ್ರಜೆಗಳು, ನಿವಾಸಿಗಳು ಎಂಬ ಬಾಂಧವ್ಯವು ನಮಗೆ ದೇಶದ ಯಾವುದೇ ಪ್ರದೇಶದಲ್ಲಿ ನೆಲೆಯಾಗುವ ಹಕ್ಕನ್ನು ನೀಡುತ್ತದೆ...’ ಎಂದು ಪೀಠವು ವಿವರಿಸಿದೆ.</p>.<p>‘ಇದು ನಮಗೆ ಭಾರತದ ಎಲ್ಲೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕೋರುವ ಹಕ್ಕನ್ನು ನೀಡುತ್ತದೆ. ನಿರ್ದಿಷ್ಟ ರಾಜ್ಯಗಳ ನಿವಾಸಿಗಳಿಗೆ ವೈದ್ಯಕೀಯ ಕಾಲೇಜು ಸೇರಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸೌಲಭ್ಯವನ್ನು ಎಂಬಿಬಿಎಸ್ ಕೋರ್ಸ್ಗಳಲ್ಲಿ ಮಾತ್ರ ಒಂದು ಹಂತದವರೆಗೆ ನೀಡಬಹುದು’ ಎಂದು ಪೀಠವು ಹೇಳಿದೆ.</p>.<p>‘ಕೆಲವು ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿಯೇ ಅವರನ್ನು ಅಸಮಾನ ಧೋರಣೆಯಿಂದ ಕಂಡರೆ, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ’ ಎಂದು ಪೀಠ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿದ್ಯಾರ್ಥಿಗಳು ಯಾವ ಪ್ರದೇಶಕ್ಕೆ ಸೇರಿದವರು ಎಂಬ ಆಧಾರದಲ್ಲಿ ಅವರಿಗೆ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್ಗಳಲ್ಲಿ ರಾಜ್ಯ ಸರ್ಕಾರಗಳು ಮೀಸಲಾತಿ ಕಲ್ಪಿಸುವುದು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.</p>.<p>ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ಪೀಠವು, ಇಂತಹ ಮೀಸಲಾತಿಗೆ ಅವಕಾಶ ನೀಡಿದರೆ ಹಲವು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.</p>.<p>‘ನಾವೆಲ್ಲರೂ ಭಾರತದ ನಿವಾಸಿಗಳು. ಒಂದು ದೇಶದ ಪ್ರಜೆಗಳು, ನಿವಾಸಿಗಳು ಎಂಬ ಬಾಂಧವ್ಯವು ನಮಗೆ ದೇಶದ ಯಾವುದೇ ಪ್ರದೇಶದಲ್ಲಿ ನೆಲೆಯಾಗುವ ಹಕ್ಕನ್ನು ನೀಡುತ್ತದೆ...’ ಎಂದು ಪೀಠವು ವಿವರಿಸಿದೆ.</p>.<p>‘ಇದು ನಮಗೆ ಭಾರತದ ಎಲ್ಲೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕೋರುವ ಹಕ್ಕನ್ನು ನೀಡುತ್ತದೆ. ನಿರ್ದಿಷ್ಟ ರಾಜ್ಯಗಳ ನಿವಾಸಿಗಳಿಗೆ ವೈದ್ಯಕೀಯ ಕಾಲೇಜು ಸೇರಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸೌಲಭ್ಯವನ್ನು ಎಂಬಿಬಿಎಸ್ ಕೋರ್ಸ್ಗಳಲ್ಲಿ ಮಾತ್ರ ಒಂದು ಹಂತದವರೆಗೆ ನೀಡಬಹುದು’ ಎಂದು ಪೀಠವು ಹೇಳಿದೆ.</p>.<p>‘ಕೆಲವು ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿಯೇ ಅವರನ್ನು ಅಸಮಾನ ಧೋರಣೆಯಿಂದ ಕಂಡರೆ, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ’ ಎಂದು ಪೀಠ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>