ಅರಣ್ಯ ಸಂಶೋಧನಾ ಸಂಸ್ಥೆ ನೆಲೆಗೊಂಡಿರುವ ಪ್ರದೇಶವನ್ನು ಹಾವು ಮುಕ್ತವಾಗಿಸಿ ಸುರಕ್ಷಿತ ಪ್ರದೇಶವನ್ನಾಗಿ ಮಾಡಿ ಎಂದು ಡೆಹರಾಡೂನ್ ಜಿಲ್ಲಾ ಮೆಜಿಸ್ಟ್ರೇಟ್ ಎಸ್.ಎ ಮುರುಗೇಶನ್ ಅರಣ್ಯ ಇಲಾಖೆಗೆ ಕಳೆದ ವಾರ ಆದೇಶ ನೀಡಿದ್ದರು.
ಆ ಪ್ರದೇಶವನ್ನು ಮಂಗ, ಹಾವುಗಳಿಂದ ಮುಕ್ತಗೊಳಿಸುವುದರ ಜತೆಗೆ ಎಲೆಯುದುರಿಸುವ ಮರಗಳಿಂದ ಮುಕ್ತವಾಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನಾನು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ ಎಂದು ಮುರುಗೇಶನ್ ಹೇಳಿದ್ದಾರೆ.