<p><br /><span style="font-size: 14px;"><strong>ಉತ್ತರಾಖಂಡ:</strong> ಜೂನ್ 21ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಡೆಹರಾಡೂನ್ನ ಅರಣ್ಯ ಸಂಶೋಧನಾ ಸಂಸ್ಥೆಗೆಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.ಈ ಭೇಟಿಗೆ ಪೂರ್ವ ತಯಾರಿ ಮಾಡಿಕೊಂಡಿರುವ ಉತ್ತರಾಖಂಡ ಅರಣ್ಯ ಇಲಾಖೆ,ಪ್ರಸ್ತುತ ಸಂಸ್ಥೆಯ ಪರಿಸರವನ್ನು ಮಂಗ ಮತ್ತು ಹಾವು ಮುಕ್ತವಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.</span></p>.<p><span style="font-size:14px;">ಅರಣ್ಯ ಸಂಶೋಧನಾ ಸಂಸ್ಥೆ ನೆಲೆಗೊಂಡಿರುವ ಪ್ರದೇಶವನ್ನು ಹಾವು ಮುಕ್ತವಾಗಿಸಿ ಸುರಕ್ಷಿತ ಪ್ರದೇಶವನ್ನಾಗಿ ಮಾಡಿ ಎಂದು ಡೆಹರಾಡೂನ್ ಜಿಲ್ಲಾ ಮೆಜಿಸ್ಟ್ರೇಟ್ ಎಸ್.ಎ ಮುರುಗೇಶನ್ ಅರಣ್ಯ ಇಲಾಖೆಗೆ ಕಳೆದ ವಾರ ಆದೇಶ ನೀಡಿದ್ದರು.<br />ಆ ಪ್ರದೇಶವನ್ನು ಮಂಗ, ಹಾವುಗಳಿಂದ ಮುಕ್ತಗೊಳಿಸುವುದರ ಜತೆಗೆ ಎಲೆಯುದುರಿಸುವ ಮರಗಳಿಂದ ಮುಕ್ತವಾಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನಾನು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ ಎಂದು ಮುರುಗೇಶನ್ ಹೇಳಿದ್ದಾರೆ.</span></p>.<p><span style="font-size:14px;">ದಟ್ಟ ಅರಣ್ಯ ಪ್ರದೇಶದಲ್ಲಿರುವ ಈ ಸಂಸ್ಥೆಯ ಕ್ಯಾಂಪಸ್ನಲ್ಲಿ ಯೋಗ ದಿನಾಚರಣೆಯಂದು ಪಾಲ್ಗೊಳ್ಳುವ ಜನರಿಗೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ.ಇಲ್ಲಿಯವರೆಗೆ ನಾವು ಎರಡು ಹಾವುಗಳನ್ನು ಹಿಡಿದಿದ್ದು ಅದನ್ನು ಬೇರಡೆಗೆ ಬಿಡಲಾಗಿದೆ ಎಂದು ಡೆಹರಾಡೂನ್ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ರಾಜೀವ್ ಧಿಮನ್ ಹೇಳಿದ್ದಾರೆ.</span></p>.<p><span style="font-size:14px;">ಯೋಗ ಕಾರ್ಯಕ್ರಮ ನಡೆಯುವ ಈ ಪ್ರದೇಶದಲ್ಲಿ ಮಂಗಗಳು ಇಲ್ಲ. ಕಾರ್ಯಕ್ರಮ ಮುಗಿಯುವವರೆಗೆ ಯಾವುದೇ ಪ್ರಾಣಿಗಳು ಇಲ್ಲಿ ಸುಳಿದಾಡದಂತೆ ಎಚ್ಚರವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಇಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ ಧಿಮನ್.</span><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /><span style="font-size: 14px;"><strong>ಉತ್ತರಾಖಂಡ:</strong> ಜೂನ್ 21ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಡೆಹರಾಡೂನ್ನ ಅರಣ್ಯ ಸಂಶೋಧನಾ ಸಂಸ್ಥೆಗೆಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.ಈ ಭೇಟಿಗೆ ಪೂರ್ವ ತಯಾರಿ ಮಾಡಿಕೊಂಡಿರುವ ಉತ್ತರಾಖಂಡ ಅರಣ್ಯ ಇಲಾಖೆ,ಪ್ರಸ್ತುತ ಸಂಸ್ಥೆಯ ಪರಿಸರವನ್ನು ಮಂಗ ಮತ್ತು ಹಾವು ಮುಕ್ತವಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.</span></p>.<p><span style="font-size:14px;">ಅರಣ್ಯ ಸಂಶೋಧನಾ ಸಂಸ್ಥೆ ನೆಲೆಗೊಂಡಿರುವ ಪ್ರದೇಶವನ್ನು ಹಾವು ಮುಕ್ತವಾಗಿಸಿ ಸುರಕ್ಷಿತ ಪ್ರದೇಶವನ್ನಾಗಿ ಮಾಡಿ ಎಂದು ಡೆಹರಾಡೂನ್ ಜಿಲ್ಲಾ ಮೆಜಿಸ್ಟ್ರೇಟ್ ಎಸ್.ಎ ಮುರುಗೇಶನ್ ಅರಣ್ಯ ಇಲಾಖೆಗೆ ಕಳೆದ ವಾರ ಆದೇಶ ನೀಡಿದ್ದರು.<br />ಆ ಪ್ರದೇಶವನ್ನು ಮಂಗ, ಹಾವುಗಳಿಂದ ಮುಕ್ತಗೊಳಿಸುವುದರ ಜತೆಗೆ ಎಲೆಯುದುರಿಸುವ ಮರಗಳಿಂದ ಮುಕ್ತವಾಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನಾನು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ ಎಂದು ಮುರುಗೇಶನ್ ಹೇಳಿದ್ದಾರೆ.</span></p>.<p><span style="font-size:14px;">ದಟ್ಟ ಅರಣ್ಯ ಪ್ರದೇಶದಲ್ಲಿರುವ ಈ ಸಂಸ್ಥೆಯ ಕ್ಯಾಂಪಸ್ನಲ್ಲಿ ಯೋಗ ದಿನಾಚರಣೆಯಂದು ಪಾಲ್ಗೊಳ್ಳುವ ಜನರಿಗೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ.ಇಲ್ಲಿಯವರೆಗೆ ನಾವು ಎರಡು ಹಾವುಗಳನ್ನು ಹಿಡಿದಿದ್ದು ಅದನ್ನು ಬೇರಡೆಗೆ ಬಿಡಲಾಗಿದೆ ಎಂದು ಡೆಹರಾಡೂನ್ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ರಾಜೀವ್ ಧಿಮನ್ ಹೇಳಿದ್ದಾರೆ.</span></p>.<p><span style="font-size:14px;">ಯೋಗ ಕಾರ್ಯಕ್ರಮ ನಡೆಯುವ ಈ ಪ್ರದೇಶದಲ್ಲಿ ಮಂಗಗಳು ಇಲ್ಲ. ಕಾರ್ಯಕ್ರಮ ಮುಗಿಯುವವರೆಗೆ ಯಾವುದೇ ಪ್ರಾಣಿಗಳು ಇಲ್ಲಿ ಸುಳಿದಾಡದಂತೆ ಎಚ್ಚರವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಇಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ ಧಿಮನ್.</span><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>