ಪಳನಿಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವ ಹಾಗೂ ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಒ.ಪನ್ನೀರಸೆಲ್ವಂ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಗುರುವಾರ ಇದರ ವಿಚಾರಣೆ ನಡೆಸಿದೆ. ಇದೇ ಸಮಯದಲ್ಲಿ ಆಯೋಗವು ಪಳನಿಸ್ವಾಮಿ ಬಣದ ಮನವಿಯನ್ನು ಪುರಸ್ಕರಿಸಿದೆ.