<p><strong>ನವದೆಹಲಿ/ರಾಯಪುರ</strong> : ಮಹದೇವ್ ಆ್ಯಪ್ ಮೂಲಕ ಕಾನೂನುಬಾಹಿರವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ವಿಶೇಷ ಕೋರ್ಟ್ನಲ್ಲಿ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದೆ.</p>.<p>‘ಇದರ ವಿವರಗಳನ್ನು ಯುಎಐ ಆಡಳಿತಕ್ಕೂ ಸಲ್ಲಿಸಿ, ಆ್ಯಪ್ನ ಇಬ್ಬರು ಮುಖ್ಯ ಪ್ರವರ್ತಕರಾದ ರವಿ ಉಪ್ಪಲ್, ಸೌರಭ್ ಚಂದ್ರಕರ್ರನ್ನು ಗಡೀಪಾರು ಮಾಡಬೇಕು ಅಥವಾ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೋರಲಾಗುವುದು’ ಎಂದು ಇ.ಡಿ ಮೂಲಗಳು ತಿಳಿಸಿವೆ.</p>.<p>ಇ.ಡಿ ಕೋರಿಕೆ ಪರಿಗಣಿಸಿ ಇಂಟರ್ಪೋಲ್ ನೀಡಿದ್ದ ರೆಡ್ ನೋಟಿಸ್ ಆಧರಿಸಿ ಇಬ್ಬರನ್ನು ದುಬೈನಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ತನಿಖಾ ಸಂಸ್ಥೆ ಈಗಾಗಲೇ ಮೊದಲ ಆರೋಪಪಟ್ಟಿಯ ವಿವರಗಳನ್ನು ನೀಡಿತ್ತು. ಅದರ ಆಧಾರದಲ್ಲಿ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು.</p>.<p>ಕ್ಯಾಷ್ ಕೊರಿಯರ್ ಅಸೀಂ ದಾಸ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಜನವರಿ 1ರಂದು 1800 ಪುಟಗಳ ಎರಡನೇ ಆರೋಪಪಟ್ಟಿ ದಾಖಲಾಗಿದೆ.ಪೊಲೀಸ್ ಕಾನ್ಸ್ಟೆಬಲ್ ಭೀಮ್ ಸಿಂಗ್ ಯಾದವ್, ಆ್ಯಪ್ನ ಎಕ್ಸಿಕ್ಯೂಟಿವ್ ಶುಭಂ ಸೋನಿ ಇತರ ಆರೋಪಿಗಳು.</p>.<p>ಎರಡನೇ ಆರೋಪಪಟ್ಟಿಯನ್ನು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್ಎ) ವಿಶೇಷ ಕೋರ್ಟ್, ಜೂನ್ 10ರಂದು ನಡೆಯುವ ವಿಚಾರಣೆಯಲ್ಲಿ ಪರಿಗಣಿಸುವ ಸಂಭವವಿದೆ ಎಂದು ಇ.ಡಿ ಪರ ವಕೀಲ ಸೌರಭ್ ಪಾಂಡೆ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ರಾಯಪುರ</strong> : ಮಹದೇವ್ ಆ್ಯಪ್ ಮೂಲಕ ಕಾನೂನುಬಾಹಿರವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ವಿಶೇಷ ಕೋರ್ಟ್ನಲ್ಲಿ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದೆ.</p>.<p>‘ಇದರ ವಿವರಗಳನ್ನು ಯುಎಐ ಆಡಳಿತಕ್ಕೂ ಸಲ್ಲಿಸಿ, ಆ್ಯಪ್ನ ಇಬ್ಬರು ಮುಖ್ಯ ಪ್ರವರ್ತಕರಾದ ರವಿ ಉಪ್ಪಲ್, ಸೌರಭ್ ಚಂದ್ರಕರ್ರನ್ನು ಗಡೀಪಾರು ಮಾಡಬೇಕು ಅಥವಾ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೋರಲಾಗುವುದು’ ಎಂದು ಇ.ಡಿ ಮೂಲಗಳು ತಿಳಿಸಿವೆ.</p>.<p>ಇ.ಡಿ ಕೋರಿಕೆ ಪರಿಗಣಿಸಿ ಇಂಟರ್ಪೋಲ್ ನೀಡಿದ್ದ ರೆಡ್ ನೋಟಿಸ್ ಆಧರಿಸಿ ಇಬ್ಬರನ್ನು ದುಬೈನಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ತನಿಖಾ ಸಂಸ್ಥೆ ಈಗಾಗಲೇ ಮೊದಲ ಆರೋಪಪಟ್ಟಿಯ ವಿವರಗಳನ್ನು ನೀಡಿತ್ತು. ಅದರ ಆಧಾರದಲ್ಲಿ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು.</p>.<p>ಕ್ಯಾಷ್ ಕೊರಿಯರ್ ಅಸೀಂ ದಾಸ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಜನವರಿ 1ರಂದು 1800 ಪುಟಗಳ ಎರಡನೇ ಆರೋಪಪಟ್ಟಿ ದಾಖಲಾಗಿದೆ.ಪೊಲೀಸ್ ಕಾನ್ಸ್ಟೆಬಲ್ ಭೀಮ್ ಸಿಂಗ್ ಯಾದವ್, ಆ್ಯಪ್ನ ಎಕ್ಸಿಕ್ಯೂಟಿವ್ ಶುಭಂ ಸೋನಿ ಇತರ ಆರೋಪಿಗಳು.</p>.<p>ಎರಡನೇ ಆರೋಪಪಟ್ಟಿಯನ್ನು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್ಎ) ವಿಶೇಷ ಕೋರ್ಟ್, ಜೂನ್ 10ರಂದು ನಡೆಯುವ ವಿಚಾರಣೆಯಲ್ಲಿ ಪರಿಗಣಿಸುವ ಸಂಭವವಿದೆ ಎಂದು ಇ.ಡಿ ಪರ ವಕೀಲ ಸೌರಭ್ ಪಾಂಡೆ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>