<p><strong>ನವದೆಹಲಿ</strong>: ದಿವಾಳಿಯಾದ ಕಂಪನಿಗಳು ಹಾಗೂ ಅವುಗಳ ಪಾಲುದಾರರ ಆಸ್ತಿಗಳನ್ನು, ವಂಚನೆಗೊಳಗಾದ ಬ್ಯಾಂಕ್ಗಳು ಮತ್ತು ಹೂಡಿಕೆದಾರರ ಬಾಕಿ ತೀರಿಸಲು ಬಳಸಿಕೊಳ್ಳಲು ಅನುವಾಗುವಂತಹ ಸುತ್ತೋಲೆಯೊಂದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಹೊರಡಿಸಿದೆ.</p>.<p>ದಿವಾಳಿ ಮತ್ತು ದಿವಾಳಿ ಮಂಡಳಿಯ (ಐಬಿಬಿಐ) ಅಧಿಕಾರಿಗಳು ಹಾಗೂ ಇ.ಡಿ ತನಿಖಾಧಿಕಾರಿಗಳ ನಡುವಿನ ಹಲವು ಸುತ್ತಿನ ಸಮನ್ವಯ ಸಭೆಗಳ ನಂತರ ನ. 4ರಂದು ಈ ಸುತ್ತೋಲೆ ಹೊರಡಿಸಲಾಗಿದೆ.</p>.<p>ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಇ.ಡಿ.ಯು ವಶಪಡಿಸಿಕೊಂಡ ವಂಚಕರ ಸ್ವತ್ತುಗಳನ್ನು ಬಾಕಿ ತೀರಿಸಲಿಕ್ಕಾಗಿ ಬಳಸಿಕೊಳ್ಳಲು ದಿವಾಳಿ ಪ್ರಕ್ರಿಯೆ ನಿರ್ವಹಿಸುವ ವೃತ್ತಿಪರರು ವಿಶೇಷ ನ್ಯಾಯಾಲಯಕ್ಕೆ ‘ಪ್ರಮಾಣಬದ್ಧ ವಾಗ್ದಾನ’ ಸಲ್ಲಿಸಬಹುದು ಎಂದಿದೆ.</p>.<p>ಪ್ರಸ್ತುತ, ಹಲವು ದಿವಾಳಿ ಪ್ರಕರಣಗಳಲ್ಲಿ ಕಾರ್ಪೊರೇಟ್ ಸಾಲಗಾರನ ಸ್ವತ್ತುಗಳನ್ನು ಪಿಎಂಎಲ್ಎ ಅಡಿ ವಶಕ್ಕೆ ಪಡೆದಿದ್ದರೂ, ಅವುಗಳ ಬಳಕೆ ನಿರ್ಬಂಧಿಸಲಾಗಿತ್ತು.</p>.<p>ಈ ಸಮಸ್ಯೆ ಪರಿಹಾರಕ್ಕಾಗಿಯೇ ಇ.ಡಿ ಹಾಗೂ ಐಬಿಬಿಐ, ಪ್ರಕ್ರಿಯೆ ನಡೆಯುತ್ತಿರುವಾಗ ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದ ಬ್ಯಾಂಕ್ಗಳಿಗೆ, ಹೂಡಿಕೆದಾರರಿಗೆ ಹಿಂದಿರುಗಿಸಲು ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ರಚಿಸಿವೆ.</p>.<p>ಪಿಎಂಎಲ್ಎ ಸೆಕ್ಷನ್ 8 (7), 8 (8)ರಡಿ ಸಲ್ಲಿಸಿದ ಅರ್ಜಿಗಳ ಮೂಲಕ ಅಂತಹ ಸ್ವತ್ತುಗಳನ್ನು ಬಳಸಿಕೊಳ್ಳಲು, ಈ ಎಸ್ಒಪಿಯು ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ ಎಂದು ಇ.ಡಿ ಹೇಳಿದೆ.</p>.<p>ಹೊಸ ಕಾರ್ಯವಿಧಾನವು ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದವರ ಪ್ರಯೋಜನಕ್ಕಾಗಿ ಮಾತ್ರ ಬಳಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಆರೋಪಿಗೆ ಯಾವುದೇ ಲಾಭವನ್ನು ಮಾಡಿಕೊಡಲ್ಲ. ಪ್ರಕ್ರಿಯೆಯು ಅಂತಿಮಗೊಳ್ಳುವವರೆಗೆ ಸುರಕ್ಷತೆಯು ಜಾರಿಯಲ್ಲಿರುತ್ತದೆ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದಿವಾಳಿಯಾದ ಕಂಪನಿಗಳು ಹಾಗೂ ಅವುಗಳ ಪಾಲುದಾರರ ಆಸ್ತಿಗಳನ್ನು, ವಂಚನೆಗೊಳಗಾದ ಬ್ಯಾಂಕ್ಗಳು ಮತ್ತು ಹೂಡಿಕೆದಾರರ ಬಾಕಿ ತೀರಿಸಲು ಬಳಸಿಕೊಳ್ಳಲು ಅನುವಾಗುವಂತಹ ಸುತ್ತೋಲೆಯೊಂದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಹೊರಡಿಸಿದೆ.</p>.<p>ದಿವಾಳಿ ಮತ್ತು ದಿವಾಳಿ ಮಂಡಳಿಯ (ಐಬಿಬಿಐ) ಅಧಿಕಾರಿಗಳು ಹಾಗೂ ಇ.ಡಿ ತನಿಖಾಧಿಕಾರಿಗಳ ನಡುವಿನ ಹಲವು ಸುತ್ತಿನ ಸಮನ್ವಯ ಸಭೆಗಳ ನಂತರ ನ. 4ರಂದು ಈ ಸುತ್ತೋಲೆ ಹೊರಡಿಸಲಾಗಿದೆ.</p>.<p>ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಇ.ಡಿ.ಯು ವಶಪಡಿಸಿಕೊಂಡ ವಂಚಕರ ಸ್ವತ್ತುಗಳನ್ನು ಬಾಕಿ ತೀರಿಸಲಿಕ್ಕಾಗಿ ಬಳಸಿಕೊಳ್ಳಲು ದಿವಾಳಿ ಪ್ರಕ್ರಿಯೆ ನಿರ್ವಹಿಸುವ ವೃತ್ತಿಪರರು ವಿಶೇಷ ನ್ಯಾಯಾಲಯಕ್ಕೆ ‘ಪ್ರಮಾಣಬದ್ಧ ವಾಗ್ದಾನ’ ಸಲ್ಲಿಸಬಹುದು ಎಂದಿದೆ.</p>.<p>ಪ್ರಸ್ತುತ, ಹಲವು ದಿವಾಳಿ ಪ್ರಕರಣಗಳಲ್ಲಿ ಕಾರ್ಪೊರೇಟ್ ಸಾಲಗಾರನ ಸ್ವತ್ತುಗಳನ್ನು ಪಿಎಂಎಲ್ಎ ಅಡಿ ವಶಕ್ಕೆ ಪಡೆದಿದ್ದರೂ, ಅವುಗಳ ಬಳಕೆ ನಿರ್ಬಂಧಿಸಲಾಗಿತ್ತು.</p>.<p>ಈ ಸಮಸ್ಯೆ ಪರಿಹಾರಕ್ಕಾಗಿಯೇ ಇ.ಡಿ ಹಾಗೂ ಐಬಿಬಿಐ, ಪ್ರಕ್ರಿಯೆ ನಡೆಯುತ್ತಿರುವಾಗ ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದ ಬ್ಯಾಂಕ್ಗಳಿಗೆ, ಹೂಡಿಕೆದಾರರಿಗೆ ಹಿಂದಿರುಗಿಸಲು ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ರಚಿಸಿವೆ.</p>.<p>ಪಿಎಂಎಲ್ಎ ಸೆಕ್ಷನ್ 8 (7), 8 (8)ರಡಿ ಸಲ್ಲಿಸಿದ ಅರ್ಜಿಗಳ ಮೂಲಕ ಅಂತಹ ಸ್ವತ್ತುಗಳನ್ನು ಬಳಸಿಕೊಳ್ಳಲು, ಈ ಎಸ್ಒಪಿಯು ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ ಎಂದು ಇ.ಡಿ ಹೇಳಿದೆ.</p>.<p>ಹೊಸ ಕಾರ್ಯವಿಧಾನವು ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದವರ ಪ್ರಯೋಜನಕ್ಕಾಗಿ ಮಾತ್ರ ಬಳಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಆರೋಪಿಗೆ ಯಾವುದೇ ಲಾಭವನ್ನು ಮಾಡಿಕೊಡಲ್ಲ. ಪ್ರಕ್ರಿಯೆಯು ಅಂತಿಮಗೊಳ್ಳುವವರೆಗೆ ಸುರಕ್ಷತೆಯು ಜಾರಿಯಲ್ಲಿರುತ್ತದೆ ಎಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>