<p><strong>ನವದೆಹಲಿ</strong>: ‘ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದ್ದ ₹22,280 ಕೋಟಿ ಮೌಲ್ಯದ ಆಸ್ತಿಯನ್ನು ಕಾನೂನುಬದ್ಧ ಹಕ್ಕುದಾರರಿಗೆ ಹಿಂದಿರುಗಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಿಳಿಸಿದ್ದಾರೆ.</p><p>ಲೋಕಸಭೆಯಲ್ಲಿ ಪೂರಕ ಅಂದಾಜುಗಳ ಮೇಲಿನ ಚರ್ಚೆ ವೇಳೆ ಈ ಮಾಹಿತಿ ನೀಡಿದ ಅವರು, ‘ಆರ್ಥಿಕ ಅಪರಾಧಗಳನ್ನು ಎಸಗುವವರ ವಿರುದ್ಧದ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟ ಪಡಿಸಿದರು.</p><p>‘ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ₹14,131.6 ಕೋಟಿ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಗೆ ಹಿಂದಿರುಗಿಸಲಾಗಿದೆ. ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್ ಮೋದಿಗೆ ಸೇರಿದ ₹1,052.58 ಕೋಟಿ ಆಸ್ತಿಯನ್ನು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಇತರೆ ಖಾಸಗಿ ಬ್ಯಾಂಕ್ಗಳಿಗೆ ಹಿಂದಿರುಗಿಸಲಾಗಿದೆ. ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ₹2,562.90 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಸದ್ಯದಲ್ಲೇ ಹರಾಜು ಹಾಕಲಾಗುವುದು’ ಎಂದು ವಿವರಿಸಿದರು.</p><p>‘ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ (ಎನ್ಎಸ್ಇಎಲ್) ಪ್ರಕರಣದಲ್ಲಿ ವಂಚನೆಗೆ ಒಳಗಾದ ನೈಜ ಹೂಡಿಕೆದಾರರಿಗೆ ₹17.47 ಕೋಟಿ ವಾಪಸ್ ಮಾಡಲಾಗಿದೆ’ ಎಂದೂ ತಿಳಿಸಿದರು. </p><p>‘ಪ್ರಮುಖ ಪ್ರಕರಣಗಳಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ₹22,280 ಕೋಟಿ ಮೊತ್ತದ ಆಸ್ತಿಯನ್ನು ವಾಪಸ್ ನೀಡಿದೆ. ಯಾರನ್ನೂ ನಾವು ಸುಮ್ಮನೆ ಬಿಟ್ಟಿಲ್ಲ. ಒಂದೊಮ್ಮೆ ಅವರು ದೇಶ ಬಿಟ್ಟು ಹೋಗಿದ್ದರೂ, ಅವರ ಆಸ್ತಿಯನ್ನು ವಶಕ್ಕೆ ಪಡೆದುಕೊಂಡು ಬ್ಯಾಂಕ್ಗಳಿಗೆ ಹಿಂತಿರುಗಿಸಿದ್ದೇವೆ’ ಎಂದು ವಿವರಿಸಿದರು.</p><p>‘ಆರ್ಥಿಕ ಅಪರಾಧವೆಸಗಿದ ಯಾರನ್ನೂ ಬಿಟ್ಟಿಲ್ಲ. ಹಣವನ್ನು ಮರಳಿ ವಶಕ್ಕೆ ಪಡೆದು, ಬ್ಯಾಂಕ್ಗಳಿಗೆ ನೀಡಿದ್ದೇವೆ‘ ಎಂದರು.</p><p>‘ಕಪ್ಪು ಹಣ ಕಾಯ್ದೆ –2015 ಕಾಯ್ದೆ ಜಾರಿ ಬಳಿಕ ವಿದೇಶದಲ್ಲಿ ಆಸ್ತಿ ಹೊಂದಿರುವವರು ಅವರಾಗಿಯೇ ತಮ್ಮ ಆಸ್ತಿ ಕುರಿತು ಮಾಹಿತಿ ಬಹಿರಂಗಪಡಿಸಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.</p><p>ಈ ಕಾಯ್ದೆಯ ಅಡಿ, ಕಳೆದ ಜೂನ್ಗೆ ಅಂತ್ಯಗೊಂಡಂತೆ, 687 ಪ್ರಕರಣಗಳನ್ನು ದಾಖಲಿಸಲಾಗಿದ್ದು, 163 ಪ್ರಕರಣಗಳ ಕುರಿತು ಕಾನೂನು ಕ್ರಮ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.</p><p>ಲೆಕ್ಕಪತ್ರ ಇಲ್ಲದ ಹಾಗೂ ಬಹಿರಂಗ ಪಡಿಸದೇ ಇರುವ ವಿದೇಶ ಸ್ವತ್ತುಗಳ ವಿಚಾರವಾಗಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಪನಾಮಾ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್, ಎಚ್ಎಸ್ಬಿಸಿ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪಡೆದ ಮಾಹಿತಿ ಆಧರಿಸಿ, 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಹೇಳಿದರು.</p><p>‘ವಿದೇಶಗಳಲ್ಲಿ ಹೊಂದಿರುವ ಸ್ವತ್ತುಗಳ ಕುರಿತು 2021ರಲ್ಲಿ 60,467 ತೆರಿಗೆದಾರರು ಮಾಹಿತಿ ಬಹಿರಂಗಪಡಿಸಿದ್ದರು. 2024–25ರಲ್ಲಿ ಇಂತಹವರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ’ ಎಂದು ಅವರು ಸದನಕ್ಕೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದ್ದ ₹22,280 ಕೋಟಿ ಮೌಲ್ಯದ ಆಸ್ತಿಯನ್ನು ಕಾನೂನುಬದ್ಧ ಹಕ್ಕುದಾರರಿಗೆ ಹಿಂದಿರುಗಿಸಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಿಳಿಸಿದ್ದಾರೆ.</p><p>ಲೋಕಸಭೆಯಲ್ಲಿ ಪೂರಕ ಅಂದಾಜುಗಳ ಮೇಲಿನ ಚರ್ಚೆ ವೇಳೆ ಈ ಮಾಹಿತಿ ನೀಡಿದ ಅವರು, ‘ಆರ್ಥಿಕ ಅಪರಾಧಗಳನ್ನು ಎಸಗುವವರ ವಿರುದ್ಧದ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟ ಪಡಿಸಿದರು.</p><p>‘ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ₹14,131.6 ಕೋಟಿ ಆಸ್ತಿಯನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಿಗೆ ಹಿಂದಿರುಗಿಸಲಾಗಿದೆ. ದೇಶಭ್ರಷ್ಟ ವಜ್ರವ್ಯಾಪಾರಿ ನೀರವ್ ಮೋದಿಗೆ ಸೇರಿದ ₹1,052.58 ಕೋಟಿ ಆಸ್ತಿಯನ್ನು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಇತರೆ ಖಾಸಗಿ ಬ್ಯಾಂಕ್ಗಳಿಗೆ ಹಿಂದಿರುಗಿಸಲಾಗಿದೆ. ಮೆಹುಲ್ ಚೋಕ್ಸಿ ಪ್ರಕರಣದಲ್ಲಿ ₹2,562.90 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಸದ್ಯದಲ್ಲೇ ಹರಾಜು ಹಾಕಲಾಗುವುದು’ ಎಂದು ವಿವರಿಸಿದರು.</p><p>‘ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ (ಎನ್ಎಸ್ಇಎಲ್) ಪ್ರಕರಣದಲ್ಲಿ ವಂಚನೆಗೆ ಒಳಗಾದ ನೈಜ ಹೂಡಿಕೆದಾರರಿಗೆ ₹17.47 ಕೋಟಿ ವಾಪಸ್ ಮಾಡಲಾಗಿದೆ’ ಎಂದೂ ತಿಳಿಸಿದರು. </p><p>‘ಪ್ರಮುಖ ಪ್ರಕರಣಗಳಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ₹22,280 ಕೋಟಿ ಮೊತ್ತದ ಆಸ್ತಿಯನ್ನು ವಾಪಸ್ ನೀಡಿದೆ. ಯಾರನ್ನೂ ನಾವು ಸುಮ್ಮನೆ ಬಿಟ್ಟಿಲ್ಲ. ಒಂದೊಮ್ಮೆ ಅವರು ದೇಶ ಬಿಟ್ಟು ಹೋಗಿದ್ದರೂ, ಅವರ ಆಸ್ತಿಯನ್ನು ವಶಕ್ಕೆ ಪಡೆದುಕೊಂಡು ಬ್ಯಾಂಕ್ಗಳಿಗೆ ಹಿಂತಿರುಗಿಸಿದ್ದೇವೆ’ ಎಂದು ವಿವರಿಸಿದರು.</p><p>‘ಆರ್ಥಿಕ ಅಪರಾಧವೆಸಗಿದ ಯಾರನ್ನೂ ಬಿಟ್ಟಿಲ್ಲ. ಹಣವನ್ನು ಮರಳಿ ವಶಕ್ಕೆ ಪಡೆದು, ಬ್ಯಾಂಕ್ಗಳಿಗೆ ನೀಡಿದ್ದೇವೆ‘ ಎಂದರು.</p><p>‘ಕಪ್ಪು ಹಣ ಕಾಯ್ದೆ –2015 ಕಾಯ್ದೆ ಜಾರಿ ಬಳಿಕ ವಿದೇಶದಲ್ಲಿ ಆಸ್ತಿ ಹೊಂದಿರುವವರು ಅವರಾಗಿಯೇ ತಮ್ಮ ಆಸ್ತಿ ಕುರಿತು ಮಾಹಿತಿ ಬಹಿರಂಗಪಡಿಸಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.</p><p>ಈ ಕಾಯ್ದೆಯ ಅಡಿ, ಕಳೆದ ಜೂನ್ಗೆ ಅಂತ್ಯಗೊಂಡಂತೆ, 687 ಪ್ರಕರಣಗಳನ್ನು ದಾಖಲಿಸಲಾಗಿದ್ದು, 163 ಪ್ರಕರಣಗಳ ಕುರಿತು ಕಾನೂನು ಕ್ರಮ ನಡೆಯುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.</p><p>ಲೆಕ್ಕಪತ್ರ ಇಲ್ಲದ ಹಾಗೂ ಬಹಿರಂಗ ಪಡಿಸದೇ ಇರುವ ವಿದೇಶ ಸ್ವತ್ತುಗಳ ವಿಚಾರವಾಗಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಪನಾಮಾ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್, ಎಚ್ಎಸ್ಬಿಸಿ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪಡೆದ ಮಾಹಿತಿ ಆಧರಿಸಿ, 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಹೇಳಿದರು.</p><p>‘ವಿದೇಶಗಳಲ್ಲಿ ಹೊಂದಿರುವ ಸ್ವತ್ತುಗಳ ಕುರಿತು 2021ರಲ್ಲಿ 60,467 ತೆರಿಗೆದಾರರು ಮಾಹಿತಿ ಬಹಿರಂಗಪಡಿಸಿದ್ದರು. 2024–25ರಲ್ಲಿ ಇಂತಹವರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ’ ಎಂದು ಅವರು ಸದನಕ್ಕೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>