<p><strong>ಚೆನ್ನೈ</strong>: ಬ್ಯಾಂಕ್ಗೆ ₹200 ಕೋಟಿ ಮೊತ್ತದ ವಂಚನೆ ಮತ್ತು ಬೇನಾಮಿ ಸಂಪತ್ತು ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಸೇರಿದಂತೆ ಹಲವು ಆಪ್ತರ ಮನೆ ಹಾಗೂ ಇತರೆ ಕಡೆಗಳಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಗುರುವಾರ ದಾಳಿ ಮಾಡಿದೆ.</p>.<p>ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.</p>.<p>ಶಶಿಕಲಾ ಅವರ ಬೇನಾಮಿ ಎನ್ನಲಾದ ಮಾರ್ಗ್ ಸಮೂಹದ ಜಿ.ಆರ್.ಕೆ ರೆಡ್ಡಿ ಅವರಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ. ಕೆನರಾ ಬ್ಯಾಂಕ್ಗೆ ₹200 ಕೋಟಿ ವಂಚಿಸಿದ ಆರೋಪ ಇದಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಸಿಬಿಐ ಕೂಡಾ ಎಫ್ಐಆರ್ ದಾಖಲು ಮಾಡಿದೆ. ಸಿಬಿಐ ಎಫ್ಐಆರ್ನಲ್ಲಿ ಶಶಿಕಲಾ ಹೆಸರು ಇಲ್ಲ.</p>.<p>ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಕೆಲ ದಿನಗಳ ಹಿಂದೆ ಆದೇಶವೊಂದನ್ನು ಹೊರಡಿಸಿ ಜಿ.ಆರ್.ಕೆ.ರೆಡ್ಡಿ ಅವರು ಶಶಿಕಲಾ ಅವರ ಬೇನಾಮಿದಾರ ಎಂದು ಘೋಷಿಸಿತ್ತು. ಮಾರ್ಗ್ ಸಮೂಹದಲ್ಲಿ ಶಶಿಕಲಾ ಅವರ ಕೆಲ ಬೇನಾಮಿ ಆಸ್ತಿಗಳಿವೆ ಎಂಬ ಮಾಹಿತಿಯನ್ನೂ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಬ್ಯಾಂಕ್ಗೆ ₹200 ಕೋಟಿ ಮೊತ್ತದ ವಂಚನೆ ಮತ್ತು ಬೇನಾಮಿ ಸಂಪತ್ತು ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಸೇರಿದಂತೆ ಹಲವು ಆಪ್ತರ ಮನೆ ಹಾಗೂ ಇತರೆ ಕಡೆಗಳಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ಗುರುವಾರ ದಾಳಿ ಮಾಡಿದೆ.</p>.<p>ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.</p>.<p>ಶಶಿಕಲಾ ಅವರ ಬೇನಾಮಿ ಎನ್ನಲಾದ ಮಾರ್ಗ್ ಸಮೂಹದ ಜಿ.ಆರ್.ಕೆ ರೆಡ್ಡಿ ಅವರಿಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ. ಕೆನರಾ ಬ್ಯಾಂಕ್ಗೆ ₹200 ಕೋಟಿ ವಂಚಿಸಿದ ಆರೋಪ ಇದಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಸಿಬಿಐ ಕೂಡಾ ಎಫ್ಐಆರ್ ದಾಖಲು ಮಾಡಿದೆ. ಸಿಬಿಐ ಎಫ್ಐಆರ್ನಲ್ಲಿ ಶಶಿಕಲಾ ಹೆಸರು ಇಲ್ಲ.</p>.<p>ಮೂಲಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಕೆಲ ದಿನಗಳ ಹಿಂದೆ ಆದೇಶವೊಂದನ್ನು ಹೊರಡಿಸಿ ಜಿ.ಆರ್.ಕೆ.ರೆಡ್ಡಿ ಅವರು ಶಶಿಕಲಾ ಅವರ ಬೇನಾಮಿದಾರ ಎಂದು ಘೋಷಿಸಿತ್ತು. ಮಾರ್ಗ್ ಸಮೂಹದಲ್ಲಿ ಶಶಿಕಲಾ ಅವರ ಕೆಲ ಬೇನಾಮಿ ಆಸ್ತಿಗಳಿವೆ ಎಂಬ ಮಾಹಿತಿಯನ್ನೂ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>