ತಮ್ಮನ್ನು ಮೊದಲ ಬಾರಿಗೆ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದ ಜಯಲಲಿತಾ ಅವರ ದೇಗುಲ ನಿರ್ಮಾಣ ಹೊಣೆಯನ್ನು ಕಂದಾಯ ಸಚಿವ ಉದಯ್ ಕುಮಾರ್ ಹೊತ್ತಿದ್ದರು. ಮಧುರೈನಕಲ್ಲುಪಟ್ಟಿ ಪ್ರದೇಶದ ಒಂದೂವರೆ ಎಕರೆ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.ದೇವಾಲಯಕ್ಕೆ ₹ 50 ಲಕ್ಷ ವ್ಯಯಿಸಲಾಗಿದೆ.