<p><strong>ಲಖನೌ</strong>: ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಭ್ರಷ್ಟ ಮತ್ತು ವಿಫಲ' ಆಡಳಿತವು, ಜನಕಲ್ಯಾಣಕ್ಕಿಂತಲೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಟೀಕಿಸಿದ್ದಾರೆ.</p><p>ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, 'ಸೂಪರ್ ವಿವಿಐಪಿ' ಸಮಾವೇಶಗಳನ್ನು ಆಯೋಜಿಸಬಲ್ಲ ರಾಜ್ಯ ಸರ್ಕಾರವು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ವಿಫಲವಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.</p><p>ಉತ್ತರ ಪ್ರದೇಶದಲ್ಲಿ 37 ತಾಲ್ಲೂಕುಗಳ 402 ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಸುಮಾರು, 84,392 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಭಾನುವಾರ ವರದಿಯಾಗಿದೆ.</p><p>ಕಾನ್ಪುರ ನಗರ, ಲಕ್ಷ್ಮಿಪುರ್ ಖೇರಿ, ಆಗ್ರಾ, ಔರಾಯ, ಚಿತ್ರಕೂಟ್, ಬಲ್ಲಿಯಾ, ಬಂದಾ, ಘಾಜಿಪುರ್, ಮಿರ್ಜಾಪುರ್, ಪ್ರಯಾಗರಾಜ್, ವಾರಾಣಸಿ, ಚಂದೌಲಿ, ಜಲೌನ್, ಕಾನ್ಪುರ ಗ್ರಾಮಾಂತರ, ಹಮೀರಪುರ, ಎತವಾ ಹಾಗೂ ಫತ್ಹೇಪುರ್ ಜಿಲ್ಲೆಗಳನ್ನು ಪ್ರವಾಹ ಬಾಧಿಸಿದೆ.</p>.<p>'ಪ್ರಯಾಗರಾಜ್ನಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಜನರು ಅಮಾನವೀಯ ಪರಿಸ್ಥಿತಿಯಲ್ಲಿಯೇ ಬದುಕುವಂತಾಗಿದೆ' ಎಂದು ಅಖಿಲೇಶ್ ಕಳವಳ ವ್ಯಕ್ತಪಡಿಸಿದ್ದಾರೆ.</p><p>ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ, ಮಕ್ಕಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.</p><p>'ವಿದ್ಯುತ್ ಪ್ರವಹಿಸುವ ಆತಂಕ, ವಿಷಜಂತುಗಳ ಭೀತಿ ಜನರನ್ನು ಕಾಡುತ್ತಿದೆ. ಮನೆಗಳು ಕುಸಿಯುತ್ತಿವೆ. ಆಸ್ತಿಪಾಸ್ತಿ ಕೊಚ್ಚಿಹೋಗುತ್ತಿವೆ. ಜನರಿಗೆ ಧರಿಸಲು ಬಟ್ಟೆಗಳೂ ಇಲ್ಲದಂತಾಗಿದೆ' ಎಂದು ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.</p><p>'ಭ್ರಷ್ಟ ಹಾಗೂ ವಿಫಲ ಸರ್ಕಾರವು ಸ್ವಯಂ ಪ್ರಚಾರದಲ್ಲಿ ಬ್ಯುಸಿ ಆಗಿದ್ದರೆ, ಸ್ಥಳೀಯ ಆಡಳಿತವು ನಾಪತ್ತೆಯಾಗಿದೆ' ಎಂದು ಆರೋಪಿಸಿದ್ದಾರೆ.</p><p>'ಜನರ ಗುರುತಿನ ಚೀಟಿಗಳು, ಪಡಿತರ ಚೀಟಿ, ಭೂ ಹಕ್ಕುಪತ್ರಗಳು, ಬ್ಯಾಂಕ್ ದಾಖಲೆಗಳು, ವೈದ್ಯಕೀಯ ಚೀಟಿಗಳು ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳು ಕೊಚ್ಚಿಹೋಗಿವೆ. ವಾಹನಗಳು ಮುಳುಗಿವೆ. ಜೀವನೋಪಾಯ ಅಸ್ತವ್ಯಸ್ತವಾಗಿದೆ' ಎಂದು ಗುಡುಗಿದ್ದಾರೆ.</p><p>ಗಂಗಾ ನದಿಯು ವಾರಾಣಸಿಯಲ್ಲಿ ಸೋಮವಾರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗದ ಮಾಹಿತಿ ಪ್ರಕಾರ, ಗಂಗಾ ನದಿಯ ಅಪಾಯದ ಮಟ್ಟ 71.26 ಮೀ. ಆಗಿದ್ದು, ಸೋಮವಾರ ಬೆಳಿಗ್ಗೆ ಹೊತ್ತಿಗೆ 72.1 ಮೀ.ಗೆ ತಲುಪಿದೆ ಎನ್ನಲಾಗಿದೆ.</p>.Karnataka Internal Reservation | ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆ: ಸಿಎಂ.ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ?: ತಂದೆಯನ್ನೇ ಅನಾಥರನ್ನಾಗಿಸಿದ X ಎಂಬುವರ ಕಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಭ್ರಷ್ಟ ಮತ್ತು ವಿಫಲ' ಆಡಳಿತವು, ಜನಕಲ್ಯಾಣಕ್ಕಿಂತಲೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಟೀಕಿಸಿದ್ದಾರೆ.</p><p>ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, 'ಸೂಪರ್ ವಿವಿಐಪಿ' ಸಮಾವೇಶಗಳನ್ನು ಆಯೋಜಿಸಬಲ್ಲ ರಾಜ್ಯ ಸರ್ಕಾರವು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ವಿಫಲವಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.</p><p>ಉತ್ತರ ಪ್ರದೇಶದಲ್ಲಿ 37 ತಾಲ್ಲೂಕುಗಳ 402 ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಸುಮಾರು, 84,392 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಭಾನುವಾರ ವರದಿಯಾಗಿದೆ.</p><p>ಕಾನ್ಪುರ ನಗರ, ಲಕ್ಷ್ಮಿಪುರ್ ಖೇರಿ, ಆಗ್ರಾ, ಔರಾಯ, ಚಿತ್ರಕೂಟ್, ಬಲ್ಲಿಯಾ, ಬಂದಾ, ಘಾಜಿಪುರ್, ಮಿರ್ಜಾಪುರ್, ಪ್ರಯಾಗರಾಜ್, ವಾರಾಣಸಿ, ಚಂದೌಲಿ, ಜಲೌನ್, ಕಾನ್ಪುರ ಗ್ರಾಮಾಂತರ, ಹಮೀರಪುರ, ಎತವಾ ಹಾಗೂ ಫತ್ಹೇಪುರ್ ಜಿಲ್ಲೆಗಳನ್ನು ಪ್ರವಾಹ ಬಾಧಿಸಿದೆ.</p>.<p>'ಪ್ರಯಾಗರಾಜ್ನಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಜನರು ಅಮಾನವೀಯ ಪರಿಸ್ಥಿತಿಯಲ್ಲಿಯೇ ಬದುಕುವಂತಾಗಿದೆ' ಎಂದು ಅಖಿಲೇಶ್ ಕಳವಳ ವ್ಯಕ್ತಪಡಿಸಿದ್ದಾರೆ.</p><p>ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ, ಮಕ್ಕಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.</p><p>'ವಿದ್ಯುತ್ ಪ್ರವಹಿಸುವ ಆತಂಕ, ವಿಷಜಂತುಗಳ ಭೀತಿ ಜನರನ್ನು ಕಾಡುತ್ತಿದೆ. ಮನೆಗಳು ಕುಸಿಯುತ್ತಿವೆ. ಆಸ್ತಿಪಾಸ್ತಿ ಕೊಚ್ಚಿಹೋಗುತ್ತಿವೆ. ಜನರಿಗೆ ಧರಿಸಲು ಬಟ್ಟೆಗಳೂ ಇಲ್ಲದಂತಾಗಿದೆ' ಎಂದು ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.</p><p>'ಭ್ರಷ್ಟ ಹಾಗೂ ವಿಫಲ ಸರ್ಕಾರವು ಸ್ವಯಂ ಪ್ರಚಾರದಲ್ಲಿ ಬ್ಯುಸಿ ಆಗಿದ್ದರೆ, ಸ್ಥಳೀಯ ಆಡಳಿತವು ನಾಪತ್ತೆಯಾಗಿದೆ' ಎಂದು ಆರೋಪಿಸಿದ್ದಾರೆ.</p><p>'ಜನರ ಗುರುತಿನ ಚೀಟಿಗಳು, ಪಡಿತರ ಚೀಟಿ, ಭೂ ಹಕ್ಕುಪತ್ರಗಳು, ಬ್ಯಾಂಕ್ ದಾಖಲೆಗಳು, ವೈದ್ಯಕೀಯ ಚೀಟಿಗಳು ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳು ಕೊಚ್ಚಿಹೋಗಿವೆ. ವಾಹನಗಳು ಮುಳುಗಿವೆ. ಜೀವನೋಪಾಯ ಅಸ್ತವ್ಯಸ್ತವಾಗಿದೆ' ಎಂದು ಗುಡುಗಿದ್ದಾರೆ.</p><p>ಗಂಗಾ ನದಿಯು ವಾರಾಣಸಿಯಲ್ಲಿ ಸೋಮವಾರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗದ ಮಾಹಿತಿ ಪ್ರಕಾರ, ಗಂಗಾ ನದಿಯ ಅಪಾಯದ ಮಟ್ಟ 71.26 ಮೀ. ಆಗಿದ್ದು, ಸೋಮವಾರ ಬೆಳಿಗ್ಗೆ ಹೊತ್ತಿಗೆ 72.1 ಮೀ.ಗೆ ತಲುಪಿದೆ ಎನ್ನಲಾಗಿದೆ.</p>.Karnataka Internal Reservation | ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆ: ಸಿಎಂ.ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ?: ತಂದೆಯನ್ನೇ ಅನಾಥರನ್ನಾಗಿಸಿದ X ಎಂಬುವರ ಕಥೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>