ರಾಷ್ಟ್ರ ರಾಜಧಾನಿಯ ಸಂತ ನಿರಂಕರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಶುಕ್ರವಾರ ನೂರಾರು ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಅಶ್ರುವಾಯು, ಜಲಫಿರಂಗಿ, ಭದ್ರತಾ ಪಡೆಗಳೊಂದಿಗಿನ ಘರ್ಷಣೆ ನಂತರ ರೈತರು ಸಿಂಗು ಗಡಿಯಲ್ಲೇ ಉಳಿದರು. ಈ ಮಧ್ಯೆ, ಪ್ರತಿಭಟನೆಗಾಗಿ ಪೊಲೀಸರು ದೆಹಲಿಯಲ್ಲಿ ಸ್ಥಳ ನಿಗದಿ ಮಾಡಿದರಾದರೂ, ರೈತರು ಅಲ್ಲಿಗೆ ಹೋಗಲಿಲ್ಲ.