<p><strong>ನವದೆಹಲಿ:</strong> ದೆಹಲಿ ವಿಧಾನಸಭೆ ಸಂಕೀರ್ಣದ ‘ಫಾಸಿ ಘರ್’ (ಮರಣದಂಡನೆ ವಿಧಿಸುವ ಕೊಠಡಿ) ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿಯ ಇತರ ಮುಖಂಡರ ವಿರುದ್ಧ ದೆಹಲಿ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಕ್ರಮಕ್ಕೆ ಶಿಫಾರಸು ಮಾಡಿದೆ.</p>.<p>‘ಕೇಜ್ರಿವಾಲ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮತ್ತು ಮಾಜಿ ಉಪ ಸಭಾಪತಿ ರಾಖಿ ಬಿರ್ಲಾ ಅವರು ‘ಉದ್ದೇಶಪೂರ್ವಕವಾಗಿ’ ಈ ಪ್ರಕರಣದ ವಿಚಾರಣೆಯಿಂದ ದೂರವಿರಲು ಬಯಸಿದ್ದಾರೆ’ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. </p>.<p class="bodytext">‘ಫಾಸಿ ಘರ್’ ಪ್ರಕರಣವು ದೆಹಲಿ ವಿಧಾನಸಭೆ ಕಟ್ಟಡದ ನವೀಕರಿಸಿದ ಕೊಠಡಿಯ ಕುರಿತು ಎಎಪಿ ಮತ್ತು ಬಿಜೆಪಿ ನಡುವಿನ ವಿವಾದವಾಗಿದೆ. 2022ರಲ್ಲಿ ಎಎಪಿ ಸರ್ಕಾರ ಇದ್ದಾಗ ಕೊಠಡಿಯನ್ನು ‘ಫಾಸಿ ಘರ್’ ಹೆಸರಿನಲ್ಲಿ ನವೀಕರಿಸಿ ಉದ್ಘಾಟಿಸಲಾಗಿತ್ತು. ಬ್ರಿಟಿಷರ ಕಾಲದಿಂದಲೂ ಈ ಕೊಠಡಿಯನ್ನು ‘ಉಪಹಾರ ಕೊಠಡಿ’ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.</p>.<p class="bodytext">ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2025ರ ಆಗಸ್ಟ್ನಲ್ಲಿ ವಿಧಾನಸಭಾಧ್ಯಕ್ಷ ವಿಜೇಂದರ್ ಗುಪ್ತಾ ಅವರು, ‘ಫಾಸಿ ಘರ್’ ವಿವಾದವನ್ನು ಬಗೆಹರಿಸುವ ಹೊಣೆಯನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿ, ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಿದ್ದರು. </p>.<p class="bodytext">2025ರ ಸೆಪ್ಟೆಂಬರ್ 9ರಂದು ಎಎಪಿಯ ನಾಲ್ವರು ನಾಯಕರಿಗೆ ನೋಟಿಸ್ ನೀಡಿದ್ದ ಸಮಿತಿ, ‘ಫಾಸಿ ಘರ್ ಅಸ್ತಿತ್ವವನ್ನು ದೃಢೀಕರಿಸುವ’ ಕುರಿತು ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿತ್ತು. ಆದರೆ, ತಮ್ಮಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದಿದ್ದ ಎಎಪಿ ನಾಯಕರು, ಸಮಿತಿಯ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದರು.</p>.<p class="bodytext">‘2025ರ ನವೆಂಬರ್ 13 ಮತ್ತು 20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ, ಎಎಪಿ ನಾಯಕರು ಗೈರಾಗಿದ್ದರು’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿ ವಿಧಾನಸಭೆ ಸಂಕೀರ್ಣದ ‘ಫಾಸಿ ಘರ್’ (ಮರಣದಂಡನೆ ವಿಧಿಸುವ ಕೊಠಡಿ) ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿಯ ಇತರ ಮುಖಂಡರ ವಿರುದ್ಧ ದೆಹಲಿ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಕ್ರಮಕ್ಕೆ ಶಿಫಾರಸು ಮಾಡಿದೆ.</p>.<p>‘ಕೇಜ್ರಿವಾಲ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮತ್ತು ಮಾಜಿ ಉಪ ಸಭಾಪತಿ ರಾಖಿ ಬಿರ್ಲಾ ಅವರು ‘ಉದ್ದೇಶಪೂರ್ವಕವಾಗಿ’ ಈ ಪ್ರಕರಣದ ವಿಚಾರಣೆಯಿಂದ ದೂರವಿರಲು ಬಯಸಿದ್ದಾರೆ’ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ. </p>.<p class="bodytext">‘ಫಾಸಿ ಘರ್’ ಪ್ರಕರಣವು ದೆಹಲಿ ವಿಧಾನಸಭೆ ಕಟ್ಟಡದ ನವೀಕರಿಸಿದ ಕೊಠಡಿಯ ಕುರಿತು ಎಎಪಿ ಮತ್ತು ಬಿಜೆಪಿ ನಡುವಿನ ವಿವಾದವಾಗಿದೆ. 2022ರಲ್ಲಿ ಎಎಪಿ ಸರ್ಕಾರ ಇದ್ದಾಗ ಕೊಠಡಿಯನ್ನು ‘ಫಾಸಿ ಘರ್’ ಹೆಸರಿನಲ್ಲಿ ನವೀಕರಿಸಿ ಉದ್ಘಾಟಿಸಲಾಗಿತ್ತು. ಬ್ರಿಟಿಷರ ಕಾಲದಿಂದಲೂ ಈ ಕೊಠಡಿಯನ್ನು ‘ಉಪಹಾರ ಕೊಠಡಿ’ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.</p>.<p class="bodytext">ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2025ರ ಆಗಸ್ಟ್ನಲ್ಲಿ ವಿಧಾನಸಭಾಧ್ಯಕ್ಷ ವಿಜೇಂದರ್ ಗುಪ್ತಾ ಅವರು, ‘ಫಾಸಿ ಘರ್’ ವಿವಾದವನ್ನು ಬಗೆಹರಿಸುವ ಹೊಣೆಯನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿ, ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಿದ್ದರು. </p>.<p class="bodytext">2025ರ ಸೆಪ್ಟೆಂಬರ್ 9ರಂದು ಎಎಪಿಯ ನಾಲ್ವರು ನಾಯಕರಿಗೆ ನೋಟಿಸ್ ನೀಡಿದ್ದ ಸಮಿತಿ, ‘ಫಾಸಿ ಘರ್ ಅಸ್ತಿತ್ವವನ್ನು ದೃಢೀಕರಿಸುವ’ ಕುರಿತು ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿತ್ತು. ಆದರೆ, ತಮ್ಮಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದಿದ್ದ ಎಎಪಿ ನಾಯಕರು, ಸಮಿತಿಯ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದರು.</p>.<p class="bodytext">‘2025ರ ನವೆಂಬರ್ 13 ಮತ್ತು 20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ, ಎಎಪಿ ನಾಯಕರು ಗೈರಾಗಿದ್ದರು’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>