<p><strong>ನವದೆಹಲಿ</strong>: ತಂದೆಯೇ ಮಗುವಿನ ಸಹಜ ಕಸ್ಟಡಿಯನ್. ಮಗುವಿನ ಲಾಲನೆ–ಪಾಲನೆ ಮಾಡಲು ಅವರೇ ಸೂಕ್ತ ವ್ಯಕ್ತಿ ಎಂದಿರುವ ಸುಪ್ರೀಂ ಕೋರ್ಟ್, ನಾದಿನಿಯರ ಬಳಿ ಇದ್ದ ಅಪ್ರಾಪ್ತ ವಯಸ್ಕ ಮಗಳನ್ನು ತನ್ನ ಕಸ್ಟಡಿಗೆ ಪಡೆಯಲು ವ್ಯಕ್ತಿಗೆ ಅನುಮತಿ ನೀಡಿದೆ. </p>.<p>ಹೆರಿಗೆಯಾದ 10 ದಿನಗಳ ಒಳಗೆ, ಕೋವಿಡ್–19ನಿಂದಾಗಿ ಪತ್ನಿ ಮೃತಪಟ್ಟ ನಂತರ, ಪತಿ ಗೌತಮಕುಮಾರ್ ದಾಸ್ ಎಂಬುವವರು ತನ್ನ ಮಗಳನ್ನು ನಾದಿನಿಯರ ಬಳಿ ಬಿಟ್ಟಿದ್ದರು. ಕೆಲ ವರ್ಷಗಳ ನಂತರ, ಮಗಳನ್ನು ತನ್ನ ಸುಪರ್ದಿಗೆ ನೀಡಲು ನಾದಿನಿಯರು ನಿರಾಕರಿಸಿದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ಗೌತಮಕುಮಾರ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ನಡೆಸಿತು.</p>.<p>‘ದುರದೃಷ್ಟಕರ ಸನ್ನಿವೇಶಗಳ ಕಾರಣದಿಂದಾಗಿ ಅರ್ಜಿದಾರ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು ನಾದಿನಿಯರ (ಪ್ರತಿವಾದಿ ಸಂಖ್ಯೆ 5 ಮತ್ತು 6) ಬಳಿ ತಾತ್ಕಾಲಿಕವಾಗಿ ಬಿಟ್ಟಿದ್ದರು. ಅವರು ಕೆಲ ವರ್ಷಗಳ ಕಾಲ ಸಲುಹಿದ್ದಾರೆ ಎಂಬುದು ಬಾಲಕಿಯನ್ನು ತಂದೆಯ ಕಸ್ಟಡಿಗೆ ನೀಡಲು ನಿರಾಕರಿಸುವುದಕ್ಕೆ ಆಧಾರವಾಗದು’ ಎಂದು ಪೀಠ ಹೇಳಿದೆ.</p>.<p>ಈ ಕುರಿತು ಪೀಠವು ಆಗಸ್ಟ್ 20ರಂದು ಆದೇಶ ಹೊರಡಿಸಿದೆ. ಅಲ್ಲದೇ, ಮಗುವನ್ನು ಭೇಟಿಯಾಗಲು ನಾದಿನಿಯರಿಗೆ ಅವಕಾಶವನ್ನೂ ನೀಡಿದೆ.</p>.<p>ಗೌತಮಕುಮಾರ್ ದಾಸ್ ಅವರು ಪತ್ನಿ ನಿಧನವಾದ ನಂತರ, ಪುತ್ರ ಹಾಗೂ ಪುತ್ರಿಯನ್ನು ಪತ್ನಿಯ ಸಹೋದರಿಯರ ಸುಪರ್ದಿಗೆ ನೀಡಿದ್ದರು. </p>.<p>ಕೆಲ ವರ್ಷಗಳ ನಂತರ, ನಾದಿನಿಯರು ಮಗನನ್ನು ಮಾತ್ರ ದಾಸ್ ಅವರಿಗೆ ನೀಡಿದ್ದರು. ಚಿಕ್ಕವಯಸ್ಸಿನ ಕಾರಣ ನೀಡಿ ಮಗಳನ್ನು ದಾಸ್ ಸುಪರ್ದಿಗೆ ನೀಡುವುದಕ್ಕೆ ನಿರಾಕರಿಸಿದ್ದರು.</p>.<p>ಇದನ್ನು ಪ್ರಶ್ನಿಸಿ ದಾಸ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ, ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತಂದೆಯೇ ಮಗುವಿನ ಸಹಜ ಕಸ್ಟಡಿಯನ್. ಮಗುವಿನ ಲಾಲನೆ–ಪಾಲನೆ ಮಾಡಲು ಅವರೇ ಸೂಕ್ತ ವ್ಯಕ್ತಿ ಎಂದಿರುವ ಸುಪ್ರೀಂ ಕೋರ್ಟ್, ನಾದಿನಿಯರ ಬಳಿ ಇದ್ದ ಅಪ್ರಾಪ್ತ ವಯಸ್ಕ ಮಗಳನ್ನು ತನ್ನ ಕಸ್ಟಡಿಗೆ ಪಡೆಯಲು ವ್ಯಕ್ತಿಗೆ ಅನುಮತಿ ನೀಡಿದೆ. </p>.<p>ಹೆರಿಗೆಯಾದ 10 ದಿನಗಳ ಒಳಗೆ, ಕೋವಿಡ್–19ನಿಂದಾಗಿ ಪತ್ನಿ ಮೃತಪಟ್ಟ ನಂತರ, ಪತಿ ಗೌತಮಕುಮಾರ್ ದಾಸ್ ಎಂಬುವವರು ತನ್ನ ಮಗಳನ್ನು ನಾದಿನಿಯರ ಬಳಿ ಬಿಟ್ಟಿದ್ದರು. ಕೆಲ ವರ್ಷಗಳ ನಂತರ, ಮಗಳನ್ನು ತನ್ನ ಸುಪರ್ದಿಗೆ ನೀಡಲು ನಾದಿನಿಯರು ನಿರಾಕರಿಸಿದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ಗೌತಮಕುಮಾರ್ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ನಡೆಸಿತು.</p>.<p>‘ದುರದೃಷ್ಟಕರ ಸನ್ನಿವೇಶಗಳ ಕಾರಣದಿಂದಾಗಿ ಅರ್ಜಿದಾರ ತನ್ನ ಅಪ್ರಾಪ್ತ ವಯಸ್ಕ ಮಗಳನ್ನು ನಾದಿನಿಯರ (ಪ್ರತಿವಾದಿ ಸಂಖ್ಯೆ 5 ಮತ್ತು 6) ಬಳಿ ತಾತ್ಕಾಲಿಕವಾಗಿ ಬಿಟ್ಟಿದ್ದರು. ಅವರು ಕೆಲ ವರ್ಷಗಳ ಕಾಲ ಸಲುಹಿದ್ದಾರೆ ಎಂಬುದು ಬಾಲಕಿಯನ್ನು ತಂದೆಯ ಕಸ್ಟಡಿಗೆ ನೀಡಲು ನಿರಾಕರಿಸುವುದಕ್ಕೆ ಆಧಾರವಾಗದು’ ಎಂದು ಪೀಠ ಹೇಳಿದೆ.</p>.<p>ಈ ಕುರಿತು ಪೀಠವು ಆಗಸ್ಟ್ 20ರಂದು ಆದೇಶ ಹೊರಡಿಸಿದೆ. ಅಲ್ಲದೇ, ಮಗುವನ್ನು ಭೇಟಿಯಾಗಲು ನಾದಿನಿಯರಿಗೆ ಅವಕಾಶವನ್ನೂ ನೀಡಿದೆ.</p>.<p>ಗೌತಮಕುಮಾರ್ ದಾಸ್ ಅವರು ಪತ್ನಿ ನಿಧನವಾದ ನಂತರ, ಪುತ್ರ ಹಾಗೂ ಪುತ್ರಿಯನ್ನು ಪತ್ನಿಯ ಸಹೋದರಿಯರ ಸುಪರ್ದಿಗೆ ನೀಡಿದ್ದರು. </p>.<p>ಕೆಲ ವರ್ಷಗಳ ನಂತರ, ನಾದಿನಿಯರು ಮಗನನ್ನು ಮಾತ್ರ ದಾಸ್ ಅವರಿಗೆ ನೀಡಿದ್ದರು. ಚಿಕ್ಕವಯಸ್ಸಿನ ಕಾರಣ ನೀಡಿ ಮಗಳನ್ನು ದಾಸ್ ಸುಪರ್ದಿಗೆ ನೀಡುವುದಕ್ಕೆ ನಿರಾಕರಿಸಿದ್ದರು.</p>.<p>ಇದನ್ನು ಪ್ರಶ್ನಿಸಿ ದಾಸ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ, ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>