<p>ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>‘ನಟಿ ರನ್ಯಾ ರಾವ್ ಹಾಗೂ ಸಹಚರರು ಒಂದು ವರ್ಷದಲ್ಲಿ ₹102.55 ಕೋಟಿ ಮೌಲ್ಯದ 127 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ’ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ. ವಿಶೇಷ ನ್ಯಾಯಾಲಯಕ್ಕೆ ಇ.ಡಿ ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.</p> .ರನ್ಯಾ ರಾವ್ ಪ್ರಕರಣ | ವರ್ಷದಲ್ಲಿ 127 ಕೆ.ಜಿ ಚಿನ್ನದ ಕಳ್ಳ ಸಾಗಣೆ: ಇ.ಡಿ.ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ.<p>‘ದಿ ಕೇರಳ ಸ್ಟೋರಿ–2’ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವುದು ಆತುರ ಹಾಗೂ ತಪ್ಪುಕಲ್ಪನೆಯಾಗಿದೆ’ ಎಂದು ಇಲ್ಲಿನ ಹೈಕೋರ್ಟ್ಗೆ ನಿರ್ಮಾಪಕ ವಿಪುಲ್ ಅಮಿತ್ ಶಾ ತಿಳಿಸಿದ್ದಾರೆ.</p> .ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್ಗೆ ನಿರ್ಮಾಪಕ ವಿಪುಲ್ ಮನವಿ .<p>ಭಾರತದ ಕೆಲವು ಸೌರ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕವು<br>ಹೆಚ್ಚಿಸಿರುವುದರ ಪರಿಣಾಮವು ತಮ್ಮ ಮೇಲೆ ಸೀಮಿತವಾಗಿ ಇರಲಿದೆ ಎಂದು ಸೌರಫಲಕ ತಯಾರಿಕಾ ವಲಯದ ಪ್ರಮುಖ ಕಂಪನಿಗಳಾದ ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್, ಪ್ರೀಮಿಯರ್ ಎನರ್ಜೀಸ್ ಹೇಳಿವೆ.</p>.ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ.<p>ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಇಸ್ರೇಲ್ ಸಂಸತ್ತು ‘ಕೆನೆಸೆಟ್’ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ಭಯೋತ್ಪಾದನೆಯು ವಿಶ್ವದೆಲ್ಲೆಡೆ ಶಾಂತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಭಾರತವು ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ’ ಎಂದು ಹೇಳಿದರು. </p>.ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್ ಸಂಸತ್ತಿನಲ್ಲಿ PM ಮೋದಿ .<p>ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಂಗಳೂರು, ತೆಲಂಗಾಣದೊಂದಿಗೆ ನಂಟು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ.<p><strong>ಬೆಂಗಳೂರು</strong>: ಅತಿಕ್ರಮವಾಗಿ ಪ್ರವೇಶಿಸಿ, ನಿರ್ಮಾಣ ಹಂತದ ಕಟ್ಟಡ ತೆರವು ಪ್ರಕರಣದಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p> .ನಿರ್ಮಾಣ ಹಂತದ ಕಟ್ಟಡ ತೆರವು ಪ್ರಕರಣ: ಸಿ.ಎಂ.ಇಬ್ರಾಹಿಂ ವಿರುದ್ಧ ಎಫ್ಐಆರ್.<p>‘ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ) ವಲಯದ ಬೆಳವಣಿಗೆಗೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ವಿವಿಧ ಸಾಮರ್ಥ್ಯದ ಎಐ ದತ್ತಾಂಶ ಕೇಂದ್ರ (ಡೇಟಾ ಸೆಂಟರ್) ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಇಂಧನ ಮತ್ತು ಐಟಿ ಸಚಿವರ ಜತೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು.</p>.ರಾಜ್ಯದಲ್ಲಿ ಎ.ಐ ಡೇಟಾ ಹಬ್ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ.<p>ಸತತ ಎರಡನೇ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಈಗ ಅಪಾರ ಒತ್ತಡದಲ್ಲಿದೆ. ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿದ್ದು ಮತ್ತು ಅಗ್ರಕ್ರಮಾಂಕದ ಬ್ಯಾಟರ್ಗಳ ಅಸ್ಥಿರತೆಗಳು ತಂಡದ ಚಿಂತೆಗೆ ಕಾರಣವಾಗಿವೆ. </p>.ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ.<p>ಹುಬ್ಬಳ್ಳಿ: ಬುಧವಾರ ಬೆಳಿಗ್ಗೆ ಸೂರ್ಯನ ತಾಪ ಏರುತ್ತಿದ್ದ ಹೊತ್ತಿನಲ್ಲಿ ಕರ್ನಾಟಕ ತಂಡದ ಕ್ಷೇತ್ರರಕ್ಷಕ ನಿಗೆ ಡಿಚ್ಚಿ ಹೊಡೆದ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಬಿಸಿ ಚರ್ಚೆಗೆ ಗ್ರಾಸವಾದರು. ಸಂಜೆ ಮಳೆ–ಮಂದಬೆಳಕಿನಿಂದ ಆಟ ಸ್ಥಗಿತವಾದ ನಂತರ ಪಾರಸ್ ತಮ್ಮ ಕೃತ್ಯಕ್ಕೆ ದಂಡ ತೆತ್ತರು.</p> .ರಣಜಿ ಫೈನಲ್ಗೆ ಕಾವೇರಿಸಿದ ಡೋಗ್ರಾ ಡಿಚ್ಚಿ: ಕರ್ನಾಟಕದ ಮುಂದೆ ಕಠಿಣ ಹಾದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>‘ನಟಿ ರನ್ಯಾ ರಾವ್ ಹಾಗೂ ಸಹಚರರು ಒಂದು ವರ್ಷದಲ್ಲಿ ₹102.55 ಕೋಟಿ ಮೌಲ್ಯದ 127 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ’ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಹೇಳಿದೆ. ವಿಶೇಷ ನ್ಯಾಯಾಲಯಕ್ಕೆ ಇ.ಡಿ ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.</p> .ರನ್ಯಾ ರಾವ್ ಪ್ರಕರಣ | ವರ್ಷದಲ್ಲಿ 127 ಕೆ.ಜಿ ಚಿನ್ನದ ಕಳ್ಳ ಸಾಗಣೆ: ಇ.ಡಿ.ಪಂಚ ‘ಗ್ಯಾರಂಟಿ’, ಇತರ ಕಲ್ಯಾಣ ಯೋಜನೆ: ಹಣಕಾಸಿನ ಕೊರತೆ ಹುದ್ದೆ ಭರ್ತಿಗೆ ಅಡ್ಡಿ.<p>‘ದಿ ಕೇರಳ ಸ್ಟೋರಿ–2’ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವುದು ಆತುರ ಹಾಗೂ ತಪ್ಪುಕಲ್ಪನೆಯಾಗಿದೆ’ ಎಂದು ಇಲ್ಲಿನ ಹೈಕೋರ್ಟ್ಗೆ ನಿರ್ಮಾಪಕ ವಿಪುಲ್ ಅಮಿತ್ ಶಾ ತಿಳಿಸಿದ್ದಾರೆ.</p> .ದಿ–ಕೇರಳ ಸ್ಟೋರಿ–2: ತಪ್ಪು ಕಲ್ಪನೆ: ಕೇರಳ ಹೈಕೋರ್ಟ್ಗೆ ನಿರ್ಮಾಪಕ ವಿಪುಲ್ ಮನವಿ .<p>ಭಾರತದ ಕೆಲವು ಸೌರ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕವು<br>ಹೆಚ್ಚಿಸಿರುವುದರ ಪರಿಣಾಮವು ತಮ್ಮ ಮೇಲೆ ಸೀಮಿತವಾಗಿ ಇರಲಿದೆ ಎಂದು ಸೌರಫಲಕ ತಯಾರಿಕಾ ವಲಯದ ಪ್ರಮುಖ ಕಂಪನಿಗಳಾದ ವಿಕ್ರಮ್ ಸೋಲಾರ್, ವಾರೀಸ್ ಎನರ್ಜೀಸ್, ಪ್ರೀಮಿಯರ್ ಎನರ್ಜೀಸ್ ಹೇಳಿವೆ.</p>.ಸೌರ ಉತ್ಪನ್ನಗಳ ಮೇಲೆ ಶೇಕಡ 125.87ರಷ್ಟು ಸುಂಕ: ಉದ್ಯಮದಿಂದ ಮಿಶ್ರ ಅಭಿಪ್ರಾಯ.<p>ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಇಸ್ರೇಲ್ ಸಂಸತ್ತು ‘ಕೆನೆಸೆಟ್’ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ಭಯೋತ್ಪಾದನೆಯು ವಿಶ್ವದೆಲ್ಲೆಡೆ ಶಾಂತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಭಾರತವು ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ’ ಎಂದು ಹೇಳಿದರು. </p>.ಭಯೋತ್ಪಾದನೆ ನಿಗ್ರಹ | ನಿರಂತರ ಯತ್ನ ಅಗತ್ಯ: ಇಸ್ರೇಲ್ ಸಂಸತ್ತಿನಲ್ಲಿ PM ಮೋದಿ .<p>ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಂಗಳೂರು, ತೆಲಂಗಾಣದೊಂದಿಗೆ ನಂಟು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ.<p><strong>ಬೆಂಗಳೂರು</strong>: ಅತಿಕ್ರಮವಾಗಿ ಪ್ರವೇಶಿಸಿ, ನಿರ್ಮಾಣ ಹಂತದ ಕಟ್ಟಡ ತೆರವು ಪ್ರಕರಣದಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p> .ನಿರ್ಮಾಣ ಹಂತದ ಕಟ್ಟಡ ತೆರವು ಪ್ರಕರಣ: ಸಿ.ಎಂ.ಇಬ್ರಾಹಿಂ ವಿರುದ್ಧ ಎಫ್ಐಆರ್.<p>‘ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ) ವಲಯದ ಬೆಳವಣಿಗೆಗೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ವಿವಿಧ ಸಾಮರ್ಥ್ಯದ ಎಐ ದತ್ತಾಂಶ ಕೇಂದ್ರ (ಡೇಟಾ ಸೆಂಟರ್) ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಇಂಧನ ಮತ್ತು ಐಟಿ ಸಚಿವರ ಜತೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು.</p>.ರಾಜ್ಯದಲ್ಲಿ ಎ.ಐ ಡೇಟಾ ಹಬ್ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ.<p>ಸತತ ಎರಡನೇ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಈಗ ಅಪಾರ ಒತ್ತಡದಲ್ಲಿದೆ. ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿದ್ದು ಮತ್ತು ಅಗ್ರಕ್ರಮಾಂಕದ ಬ್ಯಾಟರ್ಗಳ ಅಸ್ಥಿರತೆಗಳು ತಂಡದ ಚಿಂತೆಗೆ ಕಾರಣವಾಗಿವೆ. </p>.ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ.<p>ಹುಬ್ಬಳ್ಳಿ: ಬುಧವಾರ ಬೆಳಿಗ್ಗೆ ಸೂರ್ಯನ ತಾಪ ಏರುತ್ತಿದ್ದ ಹೊತ್ತಿನಲ್ಲಿ ಕರ್ನಾಟಕ ತಂಡದ ಕ್ಷೇತ್ರರಕ್ಷಕ ನಿಗೆ ಡಿಚ್ಚಿ ಹೊಡೆದ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಬಿಸಿ ಚರ್ಚೆಗೆ ಗ್ರಾಸವಾದರು. ಸಂಜೆ ಮಳೆ–ಮಂದಬೆಳಕಿನಿಂದ ಆಟ ಸ್ಥಗಿತವಾದ ನಂತರ ಪಾರಸ್ ತಮ್ಮ ಕೃತ್ಯಕ್ಕೆ ದಂಡ ತೆತ್ತರು.</p> .ರಣಜಿ ಫೈನಲ್ಗೆ ಕಾವೇರಿಸಿದ ಡೋಗ್ರಾ ಡಿಚ್ಚಿ: ಕರ್ನಾಟಕದ ಮುಂದೆ ಕಠಿಣ ಹಾದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>