‘ರಾಹುಲ್ ಗಾಂಧಿ ಅವರು ಮಾದಕದ್ರವ್ಯ ಕೊಕೇನ್ ಬಳಸುತ್ತಾರೆ’ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು. ಇದು ಸುಳ್ಳು ಆರೋಪ ಎಂಬುದು ಸ್ವಾಮಿ ಅವರಿಗೂ ಗೊತ್ತಿದೆ. ಆದರೆ ರಾಹುಲ್ ಅವರನ್ನು ಅಪಮಾನಿಸುವ ಉದ್ದೇಶದಿಂದಲೇ ಅವರು ಈ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ರಾಜಕೀಯ ಪಕ್ಷಗಳಲ್ಲಿ ವೈರತ್ವವನ್ನು ಬೆಳೆಸಿ ಶಾಂತಿ ಕದಡಲು ಕಾರಣವಾಗುತ್ತದೆ’ ಎಂದು ಕಾಂಗ್ರೆಸ್ನ ಜಶ್ಪುರ್ ಜಿಲ್ಲಾ ಘಟಕದ ಅಧ್ಯಕ್ಷ ಪವನ್ ಅಗರ್ವಾಲ್ ನೀಡಿರುವ ದೂರಿನಲ್ಲಿ ಹೇಳಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಂಕರ್ಲಾಲ್ ಬಘೇಲ ತಿಳಿಸಿದರು.