‘ಆನೆ ಭಾರತದ ಭವ್ಯ ಪರಂಪರೆಯ ಪ್ರತೀಕ. ಅವುಗಳ ಬಗ್ಗೆ ನಾವು ತೋರುತ್ತಿರುವ ಈ ಧೋರಣೆ ಸರಿಯೇ’ ಎಂದು ಕೇಳಿದ ನ್ಯಾಯಪೀಠ, ‘ನಿರ್ಮಾಣಕ್ಕೆ ಅನುಮತಿ ನೀಡಿರುವ ದಾಖಲೆ ಪ್ರಸ್ತುತಪಡಿಸಲು ಸಾಧ್ಯವಾಗದ 27 ರೆಸಾರ್ಟ್ಗಳ ಮಾಲೀಕರು ತಮ್ಮ ಪರ ವಕೀಲರನ್ನೇ ಕಳುಹಿಸದೆ ಇರುವುದನ್ನು ಗಮನಿಸಿದರೆ ಅವೆಲ್ಲವೂ ಅಕ್ರಮ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ’ ಎಂದು ಅಭಿಪ್ರಾಯಪಟ್ಟಿತು.