<p><strong>ನವದೆಹಲಿ:</strong> ನಮ್ಮ ಆಪ್ತರು ಯಾರು? ದೇಶದ ಸಾಮಾನ್ಯ ಜನತೆಯೇ ನಮ್ಮ ಆಪ್ತರು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.</p>.<p>ಬಜೆಟ್ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಭಾರತದ ಸಾಮರ್ಥ್ಯದ ಮೇಲೆ ಕಾಂಗ್ರೆಸ್ಗೆ ನಂಬಿಕೆಯಿಲ್ಲ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/prime-minister-narendra-modi-wants-to-clear-path-for-his-friends-rahul-gandhi-on-farm-laws-804609.html" itemprop="url">ಸ್ನೇಹಿತರಿಗೆ ಅನುಕೂಲ ಕಲ್ಪಿಸುತ್ತಿರುವ ಪ್ರಧಾನಿ: ರಾಹುಲ್ ಗಾಂಧಿ ಟೀಕೆ</a></p>.<p>ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ನಿರಂತರ ಆರೋಪ ಮಾಡುವವರಿಗೆ ‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಕಾಣಿಸುವುದಿಲ್ಲ. ಈ ಯೋಜನೆ ಸ್ನೇಹಿತರಿಗೆ ತಲುಪುವುದಿಲ್ಲ ನೋಡಿ ಎಂದು ನಿರ್ಮಲಾ ವ್ಯಂಗ್ಯವಾಡಿದ್ದಾರೆ.</p>.<p>‘ಸ್ನೇಹಿತರು ಎಲ್ಲಿದ್ದಾರೆ? ಅವರು ಬಹುಶಃ ಜನ ತಿರಸ್ಕರಿಸಿರುವ ಪಕ್ಷದ ನೆರಳಿನ ಹಿಂದೆ ಅಡಗಿದ್ದಾರೆ. ಬಂದರೊಂದನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿದವರ ನೆರಳಿನ ಹಿಂದೆ ಇದ್ದಾರೆ. ಅವರು ಆಹ್ವಾನಿಸಿದ್ದರಷ್ಟೇ, ಮುಕ್ತವಾದ ಟೆಂಡರ್ ಇಲ್ಲ, ಜಾಗತಿಕ ಟೆಂಡರ್ಗಳನ್ನೂ ಕರೆದಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/govt-will-have-to-withdraw-farm-laws-even-british-could-not-stand-before-farmers-says-rahul-gandhi-804653.html" itemprop="url">ಬ್ರಿಟೀಷರೇ ರೈತರೆದುರು ನಿಲ್ಲಲು ಆಗದಿದ್ದಾಗ, ಮೋದಿ ಯಾವ ಲೆಕ್ಕ: ರಾಹುಲ್ ಗಾಂಧಿ</a></p>.<p>‘ಹೊಸ ಕೃಷಿ ಕಾಯ್ದೆಗಳ ಮೂಲಕ ತಮ್ಮ ಸ್ನೇಹಿತರಿಗೆ ಮುಕ್ತ ಮಾರ್ಗ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ನಮ್ಮ ಆಪ್ತರು ಯಾರು? ದೇಶದ ಸಾಮಾನ್ಯ ಜನತೆಯೇ ನಮ್ಮ ಆಪ್ತರು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.</p>.<p>ಬಜೆಟ್ ಮೇಲಿನ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಲೇ ಬಂದಿದೆ. ಭಾರತದ ಸಾಮರ್ಥ್ಯದ ಮೇಲೆ ಕಾಂಗ್ರೆಸ್ಗೆ ನಂಬಿಕೆಯಿಲ್ಲ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/prime-minister-narendra-modi-wants-to-clear-path-for-his-friends-rahul-gandhi-on-farm-laws-804609.html" itemprop="url">ಸ್ನೇಹಿತರಿಗೆ ಅನುಕೂಲ ಕಲ್ಪಿಸುತ್ತಿರುವ ಪ್ರಧಾನಿ: ರಾಹುಲ್ ಗಾಂಧಿ ಟೀಕೆ</a></p>.<p>ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ನಿರಂತರ ಆರೋಪ ಮಾಡುವವರಿಗೆ ‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಕಾಣಿಸುವುದಿಲ್ಲ. ಈ ಯೋಜನೆ ಸ್ನೇಹಿತರಿಗೆ ತಲುಪುವುದಿಲ್ಲ ನೋಡಿ ಎಂದು ನಿರ್ಮಲಾ ವ್ಯಂಗ್ಯವಾಡಿದ್ದಾರೆ.</p>.<p>‘ಸ್ನೇಹಿತರು ಎಲ್ಲಿದ್ದಾರೆ? ಅವರು ಬಹುಶಃ ಜನ ತಿರಸ್ಕರಿಸಿರುವ ಪಕ್ಷದ ನೆರಳಿನ ಹಿಂದೆ ಅಡಗಿದ್ದಾರೆ. ಬಂದರೊಂದನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿದವರ ನೆರಳಿನ ಹಿಂದೆ ಇದ್ದಾರೆ. ಅವರು ಆಹ್ವಾನಿಸಿದ್ದರಷ್ಟೇ, ಮುಕ್ತವಾದ ಟೆಂಡರ್ ಇಲ್ಲ, ಜಾಗತಿಕ ಟೆಂಡರ್ಗಳನ್ನೂ ಕರೆದಿಲ್ಲ’ ಎಂದು ನಿರ್ಮಲಾ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/govt-will-have-to-withdraw-farm-laws-even-british-could-not-stand-before-farmers-says-rahul-gandhi-804653.html" itemprop="url">ಬ್ರಿಟೀಷರೇ ರೈತರೆದುರು ನಿಲ್ಲಲು ಆಗದಿದ್ದಾಗ, ಮೋದಿ ಯಾವ ಲೆಕ್ಕ: ರಾಹುಲ್ ಗಾಂಧಿ</a></p>.<p>‘ಹೊಸ ಕೃಷಿ ಕಾಯ್ದೆಗಳ ಮೂಲಕ ತಮ್ಮ ಸ್ನೇಹಿತರಿಗೆ ಮುಕ್ತ ಮಾರ್ಗ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>