<p><strong>ನವದೆಹಲಿ:</strong> ಅಪ್ಪಟ ಕಾಂಗ್ರೆಸ್ಸಿಗ ಹಾಗೂ ಗಾಂಧಿ ಕುಟುಂಬದ ಆಪ್ತ ಎಂದೇ ಗುರುತಿಸಿಕೊಂಡಿದ್ದ ಪ್ರಣವ್ ಮುಖರ್ಜಿ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭಿಸಿದರೂನಂತರದ ಕೆಲವು ದಿನಗಳು ಪತ್ರಕರ್ತರಾಗಿಯೂ ಕೆಲಸ ಮಾಡಿದರು.</p>.<p>ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಲ್ಎಲ್ಬಿ ಪೂರೈಸಿದರು. ವಿದ್ಯಾಭ್ಯಾಸದ ಬಳಿಕ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಎರಡು ವರ್ಷದ ಬಳಿಕ ಆ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬಂಗಾಳಿಯ ‘ಮದರ್ಲ್ಯಾಂಡ್‘ ಪತ್ರಿಕೆಗೆ ವರದಿಗಾರರಾಗಿ ಸೇರಿಕೊಂಡರು.</p>.<p>ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಾಜಕಾರಣದತ್ತ ಮುಖ ಮಾಡಿದರು. ಇದೇ ಸಮಯಕ್ಕೆ ಮಿಡ್ನಾಪುರ ಉಪಚುನಾವಣೆ ಘೋಷಣೆಯಾಯಿತು. ವರದಿಗಾರಿಕೆಯನ್ನು ಬಿಟ್ಟು ಪ್ರಣವ್ ಚುನಾವಣೆ ಪ್ರಚಾರದತ್ತ ನಡೆದರು.</p>.<p>1968ರಲ್ಲಿ ನಡೆದ ಮಿಡ್ನಾಪುರ ಉಪಚುನಾವಣೆ ಪ್ರಣವ್ ಮುಖರ್ಜಿ ಅವರ ಜೀವನ ಪಥವನ್ನು ಬದಲಿಸಿತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು.</p>.<p><strong>ಇದನ್ನೂ ಓದಿ:<a href="https://www.prajavani.net/india-news/pranab-mukherjee-former-president-of-india-dies-at-84-757505.html">ಭಾರತದ 'ರತ್ನ', ರಾಜಕೀಯ ಮುತ್ಸದ್ಧಿ ಪ್ರಣವ್ ಮುಖರ್ಜಿ ಇನ್ನಿಲ್ಲ</a></strong></p>.<p>ಉಪಚುನಾವಣೆಗೆ ಪ್ರಣವ್ ದುಡಿದ ಕಾರ್ಯವೈಖರಿ ಸಂಘಟನೆ, ಪ್ರಚಾರ ತಂತ್ರ ಇಂದಿರಾ ಗಾಂಧಿ ಅವರ ಗಮನ ಸೆಳೆಯಿತು. ಕೂಡಲೇ ಪ್ರಣವ್ ಅವರನ್ನು ಪಕ್ಷಕ್ಕೆ ಕರೆತಂದರು. 1969ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದರು. ಅಂದಿನಿಂದ ಶುರವಾದ ಕಾಂಗ್ರೆಸ್ ಜೊತೆಗಿನ ಪಯಣ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತು.</p>.<p>1975, 1981, 1993, 1999 ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು. ಪ್ರಣವ್ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು. ಕಾಂಗ್ರೆಸ್ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.</p>.<p>ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.</p>.<p>ಅಪ್ಪಟ ಕಾಂಗ್ರೆಸ್ ನಾಯಕರಾಗಿದ್ದ ಪ್ರಣವ್ ಅವರನ್ನು ಎನ್ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ‘ಭಾರತ ರತ್ನ‘ಗೆ ಆಯ್ಕೆ ಮಾಡಿತು. ಪ್ರಣವ್ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ ಆರನೇ ಮಾಜಿ ರಾಷ್ಟ್ರಪತಿಯಾದರು</p>.<p><strong>ಇವುಗಳನ್ನು ಓದಿ</strong></p>.<p><a href="https://www.prajavani.net/op-ed/vyakti/typical-life-story-of-versatile-politician-former-president-of-india-pranab-mukherjee-757522.html">ವರ್ಸಟೈಲ್ ರಾಜಕಾರಣಿಯ ವೈಶಿಷ್ಟ್ಯ ಬದುಕು...</a></p>.<p><a href="https://cms.prajavani.net/india-news/former-president-pranab-mukherjee-and-congress-party-757513.html" itemprop="url">ಕಾಂಗ್ರೆಸ್ ಎಲೆ ಮೇಲಿನ ಜಲಬಿಂದು ಪ್ರಣವ್ </a></p>.<p><a href="https://cms.prajavani.net/karnataka-news/pranab-mukherjee-passed-away-karnataka-cm-bs-yediyurappa-congress-leade-siddaramaiah-hd-kumaraswamy-757530.html" itemprop="url">ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ </a></p>.<p><a href="https://cms.prajavani.net/op-ed/vyakti/profile-pranab-mukherjee-the-gentle-giant-of-indian-politics-757524.html" itemprop="url">ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ </a></p>.<p><a href="https://cms.prajavani.net/india-news/pranab-mukherjee-death-news-pm-narendra-modi-ram-nath-kovind-rajnath-singh-and-other-dignitories-757518.html" itemprop="url">ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಪ್ಪಟ ಕಾಂಗ್ರೆಸ್ಸಿಗ ಹಾಗೂ ಗಾಂಧಿ ಕುಟುಂಬದ ಆಪ್ತ ಎಂದೇ ಗುರುತಿಸಿಕೊಂಡಿದ್ದ ಪ್ರಣವ್ ಮುಖರ್ಜಿ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭಿಸಿದರೂನಂತರದ ಕೆಲವು ದಿನಗಳು ಪತ್ರಕರ್ತರಾಗಿಯೂ ಕೆಲಸ ಮಾಡಿದರು.</p>.<p>ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಎಲ್ಎಲ್ಬಿ ಪೂರೈಸಿದರು. ವಿದ್ಯಾಭ್ಯಾಸದ ಬಳಿಕ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಪ್ರಥಮ ದರ್ಜೆ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಎರಡು ವರ್ಷದ ಬಳಿಕ ಆ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಬಂಗಾಳಿಯ ‘ಮದರ್ಲ್ಯಾಂಡ್‘ ಪತ್ರಿಕೆಗೆ ವರದಿಗಾರರಾಗಿ ಸೇರಿಕೊಂಡರು.</p>.<p>ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಾಜಕಾರಣದತ್ತ ಮುಖ ಮಾಡಿದರು. ಇದೇ ಸಮಯಕ್ಕೆ ಮಿಡ್ನಾಪುರ ಉಪಚುನಾವಣೆ ಘೋಷಣೆಯಾಯಿತು. ವರದಿಗಾರಿಕೆಯನ್ನು ಬಿಟ್ಟು ಪ್ರಣವ್ ಚುನಾವಣೆ ಪ್ರಚಾರದತ್ತ ನಡೆದರು.</p>.<p>1968ರಲ್ಲಿ ನಡೆದ ಮಿಡ್ನಾಪುರ ಉಪಚುನಾವಣೆ ಪ್ರಣವ್ ಮುಖರ್ಜಿ ಅವರ ಜೀವನ ಪಥವನ್ನು ಬದಲಿಸಿತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು.</p>.<p><strong>ಇದನ್ನೂ ಓದಿ:<a href="https://www.prajavani.net/india-news/pranab-mukherjee-former-president-of-india-dies-at-84-757505.html">ಭಾರತದ 'ರತ್ನ', ರಾಜಕೀಯ ಮುತ್ಸದ್ಧಿ ಪ್ರಣವ್ ಮುಖರ್ಜಿ ಇನ್ನಿಲ್ಲ</a></strong></p>.<p>ಉಪಚುನಾವಣೆಗೆ ಪ್ರಣವ್ ದುಡಿದ ಕಾರ್ಯವೈಖರಿ ಸಂಘಟನೆ, ಪ್ರಚಾರ ತಂತ್ರ ಇಂದಿರಾ ಗಾಂಧಿ ಅವರ ಗಮನ ಸೆಳೆಯಿತು. ಕೂಡಲೇ ಪ್ರಣವ್ ಅವರನ್ನು ಪಕ್ಷಕ್ಕೆ ಕರೆತಂದರು. 1969ರಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದರು. ಅಂದಿನಿಂದ ಶುರವಾದ ಕಾಂಗ್ರೆಸ್ ಜೊತೆಗಿನ ಪಯಣ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿತು.</p>.<p>1975, 1981, 1993, 1999 ರಲ್ಲಿ ರಾಜ್ಯಸಭೆಗೆ ನೇಮಕವಾಗಿದ್ದರು. ಪ್ರಣವ್ ಮುಖರ್ಜಿ ಅವರು ಹಣಕಾಸು ಖಾತೆ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ಆಪ್ತರಾಗಿದ್ದರು. ಕಾಂಗ್ರೆಸ್ ವಲಯದಲ್ಲಿ ಅವರನ್ನು ಎಲ್ಲರೂ ‘ಬಂಗಾಳಿ ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.</p>.<p>ಯುಪಿಎ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ ಮುಖರ್ಜಿ ಪ್ರಧಾನಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅವರನ್ನು 2012ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತು. 2017ರವರೆಗೆ ಅವರು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.</p>.<p>ಅಪ್ಪಟ ಕಾಂಗ್ರೆಸ್ ನಾಯಕರಾಗಿದ್ದ ಪ್ರಣವ್ ಅವರನ್ನು ಎನ್ಡಿಎ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ‘ಭಾರತ ರತ್ನ‘ಗೆ ಆಯ್ಕೆ ಮಾಡಿತು. ಪ್ರಣವ್ ಭಾರತ ರತ್ನ ಪುರಸ್ಕಾರ ಸ್ವೀಕರಿಸಿದ ಆರನೇ ಮಾಜಿ ರಾಷ್ಟ್ರಪತಿಯಾದರು</p>.<p><strong>ಇವುಗಳನ್ನು ಓದಿ</strong></p>.<p><a href="https://www.prajavani.net/op-ed/vyakti/typical-life-story-of-versatile-politician-former-president-of-india-pranab-mukherjee-757522.html">ವರ್ಸಟೈಲ್ ರಾಜಕಾರಣಿಯ ವೈಶಿಷ್ಟ್ಯ ಬದುಕು...</a></p>.<p><a href="https://cms.prajavani.net/india-news/former-president-pranab-mukherjee-and-congress-party-757513.html" itemprop="url">ಕಾಂಗ್ರೆಸ್ ಎಲೆ ಮೇಲಿನ ಜಲಬಿಂದು ಪ್ರಣವ್ </a></p>.<p><a href="https://cms.prajavani.net/karnataka-news/pranab-mukherjee-passed-away-karnataka-cm-bs-yediyurappa-congress-leade-siddaramaiah-hd-kumaraswamy-757530.html" itemprop="url">ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ </a></p>.<p><a href="https://cms.prajavani.net/op-ed/vyakti/profile-pranab-mukherjee-the-gentle-giant-of-indian-politics-757524.html" itemprop="url">ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ </a></p>.<p><a href="https://cms.prajavani.net/india-news/pranab-mukherjee-death-news-pm-narendra-modi-ram-nath-kovind-rajnath-singh-and-other-dignitories-757518.html" itemprop="url">ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>