<p><strong>ಹೈದರಾಬಾದ್</strong>: ‘ಫಾರ್ಮುಲಾ ಇ– ರೇಸ್’ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಆರ್ಎಸ್ ನಾಯಕ ಕೆ.ಟಿ.ರಾಮರಾವ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.</p>.<p>‘ಎಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದು, ಅಗತ್ಯವಿದ್ದರೆ ಮತ್ತೆ ಹಾಜರಾಗುತ್ತೇನೆ’ ಎಂದು ಎಸಿಬಿ ಮುಖ್ಯಕಚೇರಿಯಿಂದ ಹೊರಬಂದ ಬಳಿಕ ಸುದ್ದಿಗಾರರ ಪ್ರಶ್ನೆಗೆ ರಾಮರಾವ್ ಪ್ರತಿಕ್ರಿಯಿಸಿದರು.</p>.<p class="title">ಫಾರ್ಮುಲಾ ಇ–ರೇಸ್ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿ ಎಸಿಬಿ ಮೊಕದ್ದಮೆ ದಾಖಲಿಸಿದೆ. ರಾಮರಾವ್ ಪ್ರಮುಖ ಆರೋಪಿಯಾಗಿದ್ದು, ಸುಮಾರು 6 ಗಂಟೆ ವಿಚಾರಣೆ ಎದುರಿಸಿದರು. </p>.<p>‘ನನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿದ್ದು, ಅದು ತರ್ಕರಹಿತವಾಗಿದೆ. ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಈ ರೀತಿ ವರ್ತಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.</p>.<p>‘ರಾಜಕೀಯ ಒತ್ತಡ ಹಿನ್ನೆಲೆಯ ಪ್ರಕರಣಗಳ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಭಾವಿಸಿದ್ದರೆ ಅದು ಅವರ ಮೂರ್ಖತನ’ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.</p>.<p>‘ರೇವಂತರೆಡ್ಡಿ ಅವರು ನೀಡಿದ್ದ ಐದು ಪ್ರಶ್ನೆಗಳನ್ನೇ ಅಧಿಕಾರಿಗಳು ಹಲವು ರೀತಿಯಲ್ಲಿ ಕೇಳಿದರು. ಆದರೆ, ಫಾರ್ಮುಲಾ ಇ–ರೇಸ್ನಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ರೇಸ್ನ ಆಯೋಜಕರು ಅಂಗೀಕಾರ ನೀಡಿದ್ದ ಹಣದ ಪಾವತಿಗೆ ನಾನು ಅನುಮೋದನೆ ನೀಡಿದ್ದೇನಷ್ಟೇ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ‘ಫಾರ್ಮುಲಾ ಇ– ರೇಸ್’ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಆರ್ಎಸ್ ನಾಯಕ ಕೆ.ಟಿ.ರಾಮರಾವ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.</p>.<p>‘ಎಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದು, ಅಗತ್ಯವಿದ್ದರೆ ಮತ್ತೆ ಹಾಜರಾಗುತ್ತೇನೆ’ ಎಂದು ಎಸಿಬಿ ಮುಖ್ಯಕಚೇರಿಯಿಂದ ಹೊರಬಂದ ಬಳಿಕ ಸುದ್ದಿಗಾರರ ಪ್ರಶ್ನೆಗೆ ರಾಮರಾವ್ ಪ್ರತಿಕ್ರಿಯಿಸಿದರು.</p>.<p class="title">ಫಾರ್ಮುಲಾ ಇ–ರೇಸ್ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿ ಎಸಿಬಿ ಮೊಕದ್ದಮೆ ದಾಖಲಿಸಿದೆ. ರಾಮರಾವ್ ಪ್ರಮುಖ ಆರೋಪಿಯಾಗಿದ್ದು, ಸುಮಾರು 6 ಗಂಟೆ ವಿಚಾರಣೆ ಎದುರಿಸಿದರು. </p>.<p>‘ನನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿದ್ದು, ಅದು ತರ್ಕರಹಿತವಾಗಿದೆ. ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಈ ರೀತಿ ವರ್ತಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.</p>.<p>‘ರಾಜಕೀಯ ಒತ್ತಡ ಹಿನ್ನೆಲೆಯ ಪ್ರಕರಣಗಳ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಭಾವಿಸಿದ್ದರೆ ಅದು ಅವರ ಮೂರ್ಖತನ’ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.</p>.<p>‘ರೇವಂತರೆಡ್ಡಿ ಅವರು ನೀಡಿದ್ದ ಐದು ಪ್ರಶ್ನೆಗಳನ್ನೇ ಅಧಿಕಾರಿಗಳು ಹಲವು ರೀತಿಯಲ್ಲಿ ಕೇಳಿದರು. ಆದರೆ, ಫಾರ್ಮುಲಾ ಇ–ರೇಸ್ನಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ರೇಸ್ನ ಆಯೋಜಕರು ಅಂಗೀಕಾರ ನೀಡಿದ್ದ ಹಣದ ಪಾವತಿಗೆ ನಾನು ಅನುಮೋದನೆ ನೀಡಿದ್ದೇನಷ್ಟೇ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>