ನವದೆಹಲಿ: ಜಮ್ಮು ಮತ್ತುಕಾಶ್ಮೀರ ಬ್ಯಾಂಕ್ಗೆ ₹ 59.35 ಕೋಟಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು, ದೆಹಲಿ ಸೇರಿದಂತೆ ಹತ್ತು ಕಡೆಗಳಲ್ಲಿ ಮಂಗಳವಾರ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ.
ಶ್ರೀನಗರದ ಎಂಟು ಕಡೆಗಳಲ್ಲಿ ಮತ್ತು ದೆಹಲಿ ಮತ್ತು ಬೆಂಗಳೂರಿನ ತಲಾ ಒಂದು ಕಡೆ ಶೋಧ ನಡೆಸಲಾಗಿದೆ.
ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿ ಶಾಮೀಲಾಗಿರುವುದನ್ನು ದೃಢಪಡಿಸುವಂಥ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.