<p class="title"><strong>ನವದೆಹಲಿ</strong>: ‘ಮೂಲಭೂತ ಕರ್ತವ್ಯಗಳನ್ನು ಈಡೇರಿಸುವುದೇ ನಾಗರಿಕರ ಪ್ರಥಮ ಆದ್ಯತೆಯಾಗಬೇಕು. ಇದರಿಂದ ದೇಶವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p class="title">ಸುಪ್ರೀಂ ಕೋರ್ಟ್ನಲ್ಲಿ ಶನಿವಾರ ‘ಸಂವಿಧಾನ ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಡೀ ಜಗತ್ತು ಭಾರತದತ್ತ ದೃಷ್ಟಿ ಹರಿಸಿದೆ. ಆರ್ಥಿಕತೆಯ ತ್ವರಿತ ಪ್ರಗತಿಯನ್ನು ಗಮನಿಸುತ್ತಿದೆ’ ಎಂದರು.</p>.<p>ಭಾರತವು ಮುಂದಿನ ವಾರ ಜಿ–20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದೆ. ವಿಶ್ವಕ್ಕೇ ದೇಶದ ಕೊಡುಗೆಯನ್ನು ಬಿಂಬಿಸಲು ಇದು ದೇಶಕ್ಕೆ ದೊರೆತಿರುವ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.</p>.<p>‘ಒಂದು ತಂಡವಾಗಿ ದೇಶದ ಪ್ರತಿಷ್ಠೆಯನ್ನು ವಿಶ್ವದ ಎತ್ತರಕ್ಕೆ ನಾವು ಒಯ್ಯಬೇಕು. ಇದು, ನಮ್ಮೆಲ್ಲರ ಸಂಘಟಿತ ಹೊಣೆಯಾಗಿದೆ. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಸ್ಥಾನವನ್ನು ಭದ್ರಪಡಿಸಬೇಕಿದೆ’ ಎಂದು ಹೇಳಿದರು.</p>.<p>ಸಂವಿಧಾನದ ಆಶಯ, ಚಿಂತನೆಗಳನ್ನು ಬಲಪಡಿಸುವುದು ಹಾಗೂ ಬಡವರು, ಮಹಿಳೆಯರನ್ನು ಸಬಲರಾಗಿಸಲು ಜನಪರ ನೀತಿಗಳ ಅನುಷ್ಠಾನದ ದೃಷ್ಟಿಯಿಂದ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಭಾರತ ತಾಯಿಯ ಸ್ಥಾನದಲ್ಲಿದೆ. ಸ್ಥಿರತೆ ಕುರಿತು ಆರಂಭದಲ್ಲಿ ಅನಿಶ್ಚಿತತೆ ಇದ್ದರೂ ಭಾರತ ಈಗ ಪೂರ್ಣಬಲದೊಂದಿಗೆ ಮುನ್ನುಗ್ಗುತ್ತಿದೆ ಎಂದರು.</p>.<p>ಸಂವಿಧಾನ ಪೀಠಿಕೆಯ ಮೊದಲ ಮೂರು ಶಬ್ದಗಳು –ವೀ ದ ಪೀಪಲ್– ಎಂದಿದೆ. ಇದು, ಅಭಿಪ್ರಾಯ, ವಿಶ್ವಾಸ ಮತ್ತು ಪ್ರಮಾಣ ಎಂಬುದನ್ನು ಬಿಂಬಿಸಲಿದೆ. ಸಂವಿಧಾನದ ಆಶಯ ಭಾರತದ ಆಶಯವೂ ಆಗಿದೆ. ಆಧುನಿಕ ಕಾಲದಲ್ಲಿ ದೇಶದ ಭಾವನೆ ಮತ್ತು ಸಂಸ್ಕೃತಿಯನ್ನು ಸಂವಿಧಾನ ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು.</p>.<p>ಮಹಾತ್ಮಗಾಂಧಿ ಅವರ ಮಾತು ಉಲ್ಲೇಖಿಸಿದ ಅವರು, ನಾಗರಿಕರು ಪ್ರಥಮ ಆದ್ಯತೆಯಾಗಿ ನಿಭಾಯಿಸಬೇಕಾದ ಹೊಣೆಗಾರಿಕೆಗಳೇ ಮೂಲಭೂತ ಹಕ್ಕುಗಳಾಗಿವೆ. ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅಮೃತ ಕಾಲವಾಗಿದೆ. ಇದು, ಹೊಣೆ ನಿಭಾಯಿಸುವ ಕರ್ತವ್ಯಕಾಲವೂ ಆಗಿದೆ ಎಂದು ಹೇಳಿದರು.</p>.<p>ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕಾನೂನು ಸಚಿವ ಕಿರಣ್ ರಿಜಿಜು, ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ಮೂಲಭೂತ ಕರ್ತವ್ಯಗಳನ್ನು ಈಡೇರಿಸುವುದೇ ನಾಗರಿಕರ ಪ್ರಥಮ ಆದ್ಯತೆಯಾಗಬೇಕು. ಇದರಿಂದ ದೇಶವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p>.<p class="title">ಸುಪ್ರೀಂ ಕೋರ್ಟ್ನಲ್ಲಿ ಶನಿವಾರ ‘ಸಂವಿಧಾನ ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಡೀ ಜಗತ್ತು ಭಾರತದತ್ತ ದೃಷ್ಟಿ ಹರಿಸಿದೆ. ಆರ್ಥಿಕತೆಯ ತ್ವರಿತ ಪ್ರಗತಿಯನ್ನು ಗಮನಿಸುತ್ತಿದೆ’ ಎಂದರು.</p>.<p>ಭಾರತವು ಮುಂದಿನ ವಾರ ಜಿ–20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದೆ. ವಿಶ್ವಕ್ಕೇ ದೇಶದ ಕೊಡುಗೆಯನ್ನು ಬಿಂಬಿಸಲು ಇದು ದೇಶಕ್ಕೆ ದೊರೆತಿರುವ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.</p>.<p>‘ಒಂದು ತಂಡವಾಗಿ ದೇಶದ ಪ್ರತಿಷ್ಠೆಯನ್ನು ವಿಶ್ವದ ಎತ್ತರಕ್ಕೆ ನಾವು ಒಯ್ಯಬೇಕು. ಇದು, ನಮ್ಮೆಲ್ಲರ ಸಂಘಟಿತ ಹೊಣೆಯಾಗಿದೆ. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಸ್ಥಾನವನ್ನು ಭದ್ರಪಡಿಸಬೇಕಿದೆ’ ಎಂದು ಹೇಳಿದರು.</p>.<p>ಸಂವಿಧಾನದ ಆಶಯ, ಚಿಂತನೆಗಳನ್ನು ಬಲಪಡಿಸುವುದು ಹಾಗೂ ಬಡವರು, ಮಹಿಳೆಯರನ್ನು ಸಬಲರಾಗಿಸಲು ಜನಪರ ನೀತಿಗಳ ಅನುಷ್ಠಾನದ ದೃಷ್ಟಿಯಿಂದ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಭಾರತ ತಾಯಿಯ ಸ್ಥಾನದಲ್ಲಿದೆ. ಸ್ಥಿರತೆ ಕುರಿತು ಆರಂಭದಲ್ಲಿ ಅನಿಶ್ಚಿತತೆ ಇದ್ದರೂ ಭಾರತ ಈಗ ಪೂರ್ಣಬಲದೊಂದಿಗೆ ಮುನ್ನುಗ್ಗುತ್ತಿದೆ ಎಂದರು.</p>.<p>ಸಂವಿಧಾನ ಪೀಠಿಕೆಯ ಮೊದಲ ಮೂರು ಶಬ್ದಗಳು –ವೀ ದ ಪೀಪಲ್– ಎಂದಿದೆ. ಇದು, ಅಭಿಪ್ರಾಯ, ವಿಶ್ವಾಸ ಮತ್ತು ಪ್ರಮಾಣ ಎಂಬುದನ್ನು ಬಿಂಬಿಸಲಿದೆ. ಸಂವಿಧಾನದ ಆಶಯ ಭಾರತದ ಆಶಯವೂ ಆಗಿದೆ. ಆಧುನಿಕ ಕಾಲದಲ್ಲಿ ದೇಶದ ಭಾವನೆ ಮತ್ತು ಸಂಸ್ಕೃತಿಯನ್ನು ಸಂವಿಧಾನ ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು.</p>.<p>ಮಹಾತ್ಮಗಾಂಧಿ ಅವರ ಮಾತು ಉಲ್ಲೇಖಿಸಿದ ಅವರು, ನಾಗರಿಕರು ಪ್ರಥಮ ಆದ್ಯತೆಯಾಗಿ ನಿಭಾಯಿಸಬೇಕಾದ ಹೊಣೆಗಾರಿಕೆಗಳೇ ಮೂಲಭೂತ ಹಕ್ಕುಗಳಾಗಿವೆ. ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅಮೃತ ಕಾಲವಾಗಿದೆ. ಇದು, ಹೊಣೆ ನಿಭಾಯಿಸುವ ಕರ್ತವ್ಯಕಾಲವೂ ಆಗಿದೆ ಎಂದು ಹೇಳಿದರು.</p>.<p>ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕಾನೂನು ಸಚಿವ ಕಿರಣ್ ರಿಜಿಜು, ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>