ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುರ್ತು ಸಂದೇಶ’ ರವಾನೆ ವ್ಯವಸ್ಥೆ ಪರೀಕ್ಷೆ

Published 15 ಸೆಪ್ಟೆಂಬರ್ 2023, 16:35 IST
Last Updated 15 ಸೆಪ್ಟೆಂಬರ್ 2023, 16:35 IST
ಅಕ್ಷರ ಗಾತ್ರ

ನವದೆಹಲಿ: ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ, ಜನರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ನೂತನ ‘ಎಮರ್ಜೆನ್ಸಿ ಅಲರ್ಟ್‌’ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ದೇಶದಾದ್ಯಂತ ಶುಕ್ರವಾರ ನಡೆಸಿತು.

‘ಎಮರ್ಜೆನ್ಸಿ ಅಲರ್ಟ್‌: ಸೀವಿಯರ್’ ಎಂಬ ಮಾದರಿ ಸಂದೇಶವೊಂದನ್ನು ಎಲ್ಲ ಮೊಬೈಲ್‌ ಬಳಕೆದಾರರಿಗೆ ರವಾನಿಸಲಾಗಿತ್ತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಪರೀಕ್ಷಾರ್ಥವಾಗಿ ಈ ಸಂದೇಶವನ್ನು ರವಾನಿಸಲಾಗಿತ್ತು.

ಇಂಗ್ಲಿಷ್‌ ಮತ್ತು ಹಿಂದಿಯಲ್ಲಿದ್ದ ಈ ಸಂದೇಶವು ತಲುಪಿದ ನಂತರ ಮೊಬೈಲ್‌ ಫೋನ್‌ಗಳು ಜೋರಾದ ಶಬ್ದದೊಂದಿಗೆ ಕಂಪಿಸುವ ಮೂಲಕ ಜನರನ್ನು ಎಚ್ಚರಿಸಿದವು.

ಡಿಒಟಿ ಹಾಗೂ ಎನ್‌ಡಿಎಂಎ ಸಹಭಾಗಿತ್ವದಲ್ಲಿ ಈ ತುರ್ತು ಸಂದೇಶ ರವಾನಿಸುವ ‘ಸೆಲ್‌ ಬ್ರಾಡ್‌ಕಾಸ್ಟ್ ಅಲರ್ಟ್‌ ಸಿಸ್ಟಮ್‌’ನ ಪರೀಕ್ಷಾರ್ಥ ಪ್ರಯೋಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT