<p><strong>ನೋಯ್ಡಾ</strong>: ‘ಹನಿಟ್ರ್ಯಾಪ್’ನಲ್ಲಿ ಸಿಲುಕಿ ಅಪಹರಣಕ್ಕೊಳಗಾಗಿದ್ದ ಸರ್ಕಾರದ ಉನ್ನತ ಸಂಸ್ಥೆಯೊಂದರ ವಿಜ್ಞಾನಿಯೊಬ್ಬರನ್ನು ನೋಯ್ಡಾದ ಹೋಟೆಲ್ ರೂಂನಲ್ಲಿ ರಕ್ಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.</p>.<p>ದೆಹಲಿಯಲ್ಲಿರುವ ಸರ್ಕಾರದ ಉನ್ನತ ಸಂಸ್ಥೆಯೊಂದರಲ್ಲಿ ಕಿರಿಯ ವಿಜ್ಞಾನಿಯಾಗಿದ್ದ ವ್ಯಕ್ತಿಯನ್ನು ಸೆಕ್ಟರ್ 41ರಲ್ಲಿ ಶನಿವಾರ ಒಯೊ ಹೋಟೆಲ್ನಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.</p>.<p>ಅಪಹರಣಕಾರರು ವಿಜ್ಞಾನಿ ಬಿಡುಗಡೆಗಾಗಿ ಆತನ ಪತ್ನಿಗೆ ₹ 10ಲಕ್ಷದ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿಜ್ಞಾನಿ ಪತ್ನಿ ಪೊಲೀಸರ ಗಮನಕ್ಕೆ ತಂದಿದ್ದರು. ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪೊಲೀಸರು, ವಿಜ್ಞಾನಿಯನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ.</p>.<p><strong>ವಿವರ: </strong>ಹೆಂಡತಿಗೆ ಗೊತ್ತಿಲ್ಲದಂತೆ ವಿಜ್ಞಾನಿ ಗೂಗಲ್ನಲ್ಲಿ ದೊರೆತ ಮಸಾಜ್ ಪಾರ್ಲರ್ಲ್ ನಂಬರ್ಗೆ ಕರೆ ಮಾಡಿದ್ದರು. ಆರೋಪಿಗಳು ಹೋಟೆಲ್ನಲ್ಲಿ ಮಸಾಜ್ ಮಾಡುವುದಾಗಿ ವಿಜ್ಞಾನಿಯನ್ನು ಕರೆಸಿ ಬಂಧನದಲ್ಲಿರಿಸಿ, ಅವರ ಪತ್ನಿಗೆ ಕರೆ ಮಾಡಿ ₹10ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಹೊಂದಿಸಲಾಗದೇ ಪತ್ನಿ, ಪೊಲೀಸರಿಗೆ ಕರೆ ಮಾಡಿದ್ದರು. ನಂತರ ವಿಜ್ಞಾನಿಯನ್ನು ಹೋಟೆಲ್ನಿಂದ ರಕ್ಷಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೋಯ್ಡಾ</strong>: ‘ಹನಿಟ್ರ್ಯಾಪ್’ನಲ್ಲಿ ಸಿಲುಕಿ ಅಪಹರಣಕ್ಕೊಳಗಾಗಿದ್ದ ಸರ್ಕಾರದ ಉನ್ನತ ಸಂಸ್ಥೆಯೊಂದರ ವಿಜ್ಞಾನಿಯೊಬ್ಬರನ್ನು ನೋಯ್ಡಾದ ಹೋಟೆಲ್ ರೂಂನಲ್ಲಿ ರಕ್ಷಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.</p>.<p>ದೆಹಲಿಯಲ್ಲಿರುವ ಸರ್ಕಾರದ ಉನ್ನತ ಸಂಸ್ಥೆಯೊಂದರಲ್ಲಿ ಕಿರಿಯ ವಿಜ್ಞಾನಿಯಾಗಿದ್ದ ವ್ಯಕ್ತಿಯನ್ನು ಸೆಕ್ಟರ್ 41ರಲ್ಲಿ ಶನಿವಾರ ಒಯೊ ಹೋಟೆಲ್ನಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.</p>.<p>ಅಪಹರಣಕಾರರು ವಿಜ್ಞಾನಿ ಬಿಡುಗಡೆಗಾಗಿ ಆತನ ಪತ್ನಿಗೆ ₹ 10ಲಕ್ಷದ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ವಿಜ್ಞಾನಿ ಪತ್ನಿ ಪೊಲೀಸರ ಗಮನಕ್ಕೆ ತಂದಿದ್ದರು. ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಪೊಲೀಸರು, ವಿಜ್ಞಾನಿಯನ್ನು ಅಪಹರಣಕಾರರಿಂದ ರಕ್ಷಿಸಿದ್ದಾರೆ.</p>.<p><strong>ವಿವರ: </strong>ಹೆಂಡತಿಗೆ ಗೊತ್ತಿಲ್ಲದಂತೆ ವಿಜ್ಞಾನಿ ಗೂಗಲ್ನಲ್ಲಿ ದೊರೆತ ಮಸಾಜ್ ಪಾರ್ಲರ್ಲ್ ನಂಬರ್ಗೆ ಕರೆ ಮಾಡಿದ್ದರು. ಆರೋಪಿಗಳು ಹೋಟೆಲ್ನಲ್ಲಿ ಮಸಾಜ್ ಮಾಡುವುದಾಗಿ ವಿಜ್ಞಾನಿಯನ್ನು ಕರೆಸಿ ಬಂಧನದಲ್ಲಿರಿಸಿ, ಅವರ ಪತ್ನಿಗೆ ಕರೆ ಮಾಡಿ ₹10ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಹೊಂದಿಸಲಾಗದೇ ಪತ್ನಿ, ಪೊಲೀಸರಿಗೆ ಕರೆ ಮಾಡಿದ್ದರು. ನಂತರ ವಿಜ್ಞಾನಿಯನ್ನು ಹೋಟೆಲ್ನಿಂದ ರಕ್ಷಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>