<p><strong>ನವದೆಹಲಿ:</strong> ಹೊಸ ಮತದಾರರ ದಾಖಲಾತಿಗೆ ಆಧಾರ್ ಕಾರ್ಡ್ ಬಳಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ(ಯುಐಡಿಎಐ)ಕ್ಕೆ ಮನವಿ ಮಾಡಿದೆ.</p>.<p>ಆಧಾರ್ ಕಾರ್ಡ್ನಿಂದ ವಿಳಾಸ ಬದಲಾವಣೆಯಂತಹ ಇತರ ಸೇವೆಗಳು ವೇಗವಾಗಿ ನಡೆಯುತ್ತವೆ ಎಂದು ಕಾನೂನು ಸಚಿವಾಲಯ ಸಲಹೆ ನೀಡಿದೆ. 2020ರ 'ಉತ್ತಮ ಆಡಳಿತಕ್ಕೆ ಆಧಾರ್ ದೃಢೀಕರಣ ನೀತಿ 3'ರ ಅಡಿಯಲ್ಲಿ ಇ-ಇಪಿಐಸಿ(ವಿದ್ಯುನ್ಮಾನ ಮತದಾರರ ಭಾವಚಿತ್ರದ ಗುರುತಿನ ಚೀಟಿ) ಅಥವಾ ಮತದಾರರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.</p>.<p>ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಮಾಹಿತಿ ಸಚಿವಾಲಯವು ಕಳೆದ ವರ್ಷ ಆಗಸ್ಟ್ 5ರಲ್ಲಿ, 'ಉತ್ತಮ ಆಡಳಿತ, ಸಾರ್ವಜನಿಕ ನಿಧಿ ಸೋರಿಕೆ ತಡೆ, ನಾಗರಿಕರ ಬದುಕಿನ ಸರಳೀಕರಣ, ಸುಲಲಿತ ಸೇವೆಗಳನ್ನು ಒದಗಿಸಲು ಆಧಾರ್ ದೃಢೀಕರಣ ಅಗತ್ಯ' ಎಂದು ಪ್ರತಿಪಾದಿಸಿತ್ತು.</p>.<p>ಇದೀಗ ಕೇಂದ್ರ ಸರ್ಕಾರ ನೂತನ ಮತದಾರರ ದಾಖಲಾತಿಗೆ ಆಧಾರ್ ದೃಢೀಕರಣಕ್ಕೆ ಅವಕಾಶ ನೀಡಬೇಕು ಎಂದು ಯುಐಡಿಎಐಗೆ ಪತ್ರ ಬರೆದಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.</p>.<p><a href="https://www.prajavani.net/sports/sports-extra/women-achievers-in-olympics-855477.html" itemprop="url">ಟೋಕಿಯೊ ಒಲಿಂಪಿಕ್: ನಾರಿಯರ ಆಟ ಚೆಂದ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹೊಸ ಮತದಾರರ ದಾಖಲಾತಿಗೆ ಆಧಾರ್ ಕಾರ್ಡ್ ಬಳಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ(ಯುಐಡಿಎಐ)ಕ್ಕೆ ಮನವಿ ಮಾಡಿದೆ.</p>.<p>ಆಧಾರ್ ಕಾರ್ಡ್ನಿಂದ ವಿಳಾಸ ಬದಲಾವಣೆಯಂತಹ ಇತರ ಸೇವೆಗಳು ವೇಗವಾಗಿ ನಡೆಯುತ್ತವೆ ಎಂದು ಕಾನೂನು ಸಚಿವಾಲಯ ಸಲಹೆ ನೀಡಿದೆ. 2020ರ 'ಉತ್ತಮ ಆಡಳಿತಕ್ಕೆ ಆಧಾರ್ ದೃಢೀಕರಣ ನೀತಿ 3'ರ ಅಡಿಯಲ್ಲಿ ಇ-ಇಪಿಐಸಿ(ವಿದ್ಯುನ್ಮಾನ ಮತದಾರರ ಭಾವಚಿತ್ರದ ಗುರುತಿನ ಚೀಟಿ) ಅಥವಾ ಮತದಾರರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.</p>.<p>ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಮಾಹಿತಿ ಸಚಿವಾಲಯವು ಕಳೆದ ವರ್ಷ ಆಗಸ್ಟ್ 5ರಲ್ಲಿ, 'ಉತ್ತಮ ಆಡಳಿತ, ಸಾರ್ವಜನಿಕ ನಿಧಿ ಸೋರಿಕೆ ತಡೆ, ನಾಗರಿಕರ ಬದುಕಿನ ಸರಳೀಕರಣ, ಸುಲಲಿತ ಸೇವೆಗಳನ್ನು ಒದಗಿಸಲು ಆಧಾರ್ ದೃಢೀಕರಣ ಅಗತ್ಯ' ಎಂದು ಪ್ರತಿಪಾದಿಸಿತ್ತು.</p>.<p>ಇದೀಗ ಕೇಂದ್ರ ಸರ್ಕಾರ ನೂತನ ಮತದಾರರ ದಾಖಲಾತಿಗೆ ಆಧಾರ್ ದೃಢೀಕರಣಕ್ಕೆ ಅವಕಾಶ ನೀಡಬೇಕು ಎಂದು ಯುಐಡಿಎಐಗೆ ಪತ್ರ ಬರೆದಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.</p>.<p><a href="https://www.prajavani.net/sports/sports-extra/women-achievers-in-olympics-855477.html" itemprop="url">ಟೋಕಿಯೊ ಒಲಿಂಪಿಕ್: ನಾರಿಯರ ಆಟ ಚೆಂದ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>