'ನಾವುಈ ರೀತಿಯಲ್ಲಿ (ದುರಂತದೊಂದಿಗೆ) ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿರುವುದು ನೋವುಂಟು ಮಾಡುತ್ತಿದೆ. ಈ ಸಂಬಂಧ ವರ್ಷಾಂತ್ಯದೊಳಗೆ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇವೆ. ನೀವು ಏನು ಕ್ರಮ ಕೈಗೊಂಡಿದ್ದೀರಿ ಅಥವಾ ಕೈಗೊಂಡಿಲ್ಲ ಎಂಬುದು ನಮಗೆ ತಿಳಿದಿಲ್ಲ' ಎಂದು ನ್ಯಾಯಮೂರ್ತಿಅರವಿಂದ್ ಕುಮಾರ್ ಅವರು ನೋಟಿಸ್ ಜಾರಿ ವೇಳೆ ಹೇಳಿದ್ದಾರೆ. ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸರ್ಕಾರದ ಪರ ವಕೀಲ ಕುಮಾರ್ ತ್ರಿವೇದಿ, ನೋಟಿಸ್ ಸ್ವೀಕರಿಸಿದ್ದು, 'ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.