ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಐಟಿ ಬಾಂಬೆ‘ಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

Published 20 ಜೂನ್ 2023, 10:42 IST
Last Updated 20 ಜೂನ್ 2023, 10:42 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಪರಿಣತ ನಂದನ್‌ ನಿಲೇಕಣಿ ಅವರು ತಾವು ಎಂಜಿನಿಯರಿಂಗ್‌ ಪದವಿ ಪಡೆದ ‘ಐಐಟಿ ಬಾಂಬೆ‘ಗೆ ₹ 315 ಕೋಟಿ ಉದಾರ ದೇಣಿಗೆ ನೀಡಿದ್ದಾರೆ.


ಈ ಬಗ್ಗೆ ಟ್ವೀಟ್‌ ಮಾಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಸ್ಥೆ ನನಗೆ ಹೆಚ್ಚಿನದನ್ನು ನೀಡಿದೆ. ಇದರ ಗೌರವಾರ್ಥದ ನೆರವು ಇದಾಗಿದೆ. ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳೆಡೆಗಿನ ಬದ್ಧತೆಯಾಗಿದೆ ಎಂದು ನಂದನ್‌ ನಿಲೇಕಣಿ ಟ್ವೀಟ್‌ ಮಾಡಿದ್ದಾರೆ.

ವಿಶ್ವ ದರ್ಜೆಯ ಮೂಲಸೌಕರ್ಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಉತ್ತೇಜಿಸಲು ಹಾಗೂ ಈ ಕ್ಯಾಂಪಸ್‌ ಅಲ್ಲಿ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಪೋಷಿಸಲು ಈ ದೇಣಿಗೆ ನೀಡಿರುವುದಾಗಿ ನಂದನ್‌ ನಿಲೇಕಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಹಳೆಯ ವಿದ್ಯಾರ್ಥಿಯೊಬ್ಬರು ನೀಡಿದ ಅತಿದೊಡ್ಡ ದೇಣಿಗೆ ಇದಾಗಿದೆ ಎಂದು ಐಐಟಿ ಬಾಂಬೆ ಹೇಳಿದೆ. 

ಈ ಹಿಂದೆ ನಂದನ್‌ ನಿಲೇಕಣಿ ಅವರು ಐಐಟಿ ಬಾಂಬೆಗೆ ₹ 85 ಕೋಟಿ ದೇಣಿ ನೀಡಿದ್ದರು. ಅವರು ಐಐಟಿ ಬಾಂಬೆಗೆ ಒಟ್ಟು ₹400 ಕೋಟಿ ದೇಣಿ ನೀಡಿದಂತಾಗಿದೆ.

1973ರಲ್ಲಿ ಐಐಟಿ ಬಾಂಬೆಗೆ ಸೇರಿದ್ದ ನಿಲೇಕಣಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಐಐಟಿ ಬಾಂಬೆ 1958ರಲ್ಲಿ ಸ್ಥಾಪನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT