ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿರುವ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಅಶುತೋಷ್ ಶಾಸ್ತ್ರಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಯಾವುದೇ ಅನುಮೋದನೆ ಇಲ್ಲದಿದ್ದರೂ ಅಜಂತಾ ಕಂಪನಿಗೆ (ಒರೆವಾ ಗ್ರೂಪ್) ಸೇತುವೆ ಬಳಕೆ ಸಂಬಂಧ ಅನುಮತಿ ನೀಡಲು ಕಾರಣಗಳೇನು ಎಂದು ಕೇಳಿದೆ.