‘ಎಟಿಎಸ್ ಕೂಡ ರಾಜ್ಯ ಸರ್ಕಾರದ ಅಧೀನಕ್ಕೊಳಪಟ್ಟಿರುವ ತನಿಖಾ ಸಂಸ್ಥೆ. ಪ್ರಕರಣದ ತನಿಖೆಯ ಹೊಣೆಯನ್ನು ಆ ಸಂಸ್ಥೆಗೆ ವರ್ಗಾಯಿಸಲು ನಮ್ಮದೇನೂ ತಕರಾರಿಲ್ಲ. ಎಸ್ಐಟಿಯ ಕೆಲ ಅಧಿಕಾರಿಗಳು ಎಟಿಎಸ್ ಜೊತೆ ಇದ್ದು ತನಿಖೆಗೆ ಅಗತ್ಯ ಸಹಕಾರ ನೀಡಲಿದ್ದಾರೆ’ ಎಂದು ಎಸ್ಐಟಿ ಪರ ವಕೀಲ ಅಶೋಕ್ ಮುಂಡರಗಿ ನ್ಯಾಯಾಲಯಕ್ಕೆ ಹೇಳಿದರು.