<p><strong>ಗಾಂಧಿನಗರ</strong>: ಹಿಂದಿ ಭಾಷೆ ಕೇವಲ ಜನಸಾಮಾನ್ಯರು ಮಾತನಾಡುವ ಭಾಷೆಯಾಗಬಾರದು. ಬದಲಿಗೆ ಹಿಂದಿ ಭಾಷೆ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ– ತಂತ್ರಜ್ಞಾನದ ಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p><p>ಗಾಂಧಿನಗರದಲ್ಲಿ ನಡೆಯುತ್ತಿರುವ ರಾಜ್ಯಭಾಷಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p><p>ಹಿಂದಿಯಲ್ಲಿ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ ತಂತ್ರಜ್ಞಾನದ ಸಂವಹನ ಸಾಧ್ಯವಾದರೆ ದೇಶದಾದ್ಯಂತ ಸಾರ್ವಜನಿಕ ಸಂಪರ್ಕ ಸುಲಭವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.</p><p>ರಾಜ್ಯಭಾಷೆಗಳೊಂದಿಗೆ ಹಿಂದಿ ಸಂಘರ್ಷ ಹೊಂದಲು ಬಯಸುವುದಿಲ್ಲ. ದೇಶದ ಅನೇಕ ಮಹನಿಯರು ಹಿಂದಿ ಭಾಷೆಯ ಮಹತ್ವ ಅರ್ಥ ಮಾಡಿಕೊಂಡು ಅದನ್ನು ಮುನ್ನೆಲೆಗೆ ತಂದರು ಎಂದು ಹೇಳಿದರು.</p><p>ಮನೆಯಲ್ಲಿ ತಂದೆ–ತಾಯಿ, ಪೋಷಕರು ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಆ ಮೂಲಕ ಭಾಷೆಗಳನ್ನು ಅಮರವಾಗಿಸಬೇಕು ಎಂದು ಸಲಹೆ ನೀಡಿದ್ದಾರೆ.</p><p>ನಮ್ಮ ಸರ್ಕಾರ ಕೇವಲ ಹಿಂದಿ ಅಲ್ಲದೇ ಇತರ ರಾಜ್ಯಭಾಷೆಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಅದಕ್ಕಾಗಿಯೇ ಇಂಡಿಯನ್ ಲಾಂಗ್ವೇಜಸ್ ಡಿಪಾರ್ಟ್ಮೆಂಟ್ ತೆರೆದಿದೆ ಎಂದು ಹೇಳಿದರು.</p><p>ಇವತ್ತಿನ ದಿನಗಳಲ್ಲಿ ಗುಜರಾತ್ನಲ್ಲಿ ಗುಜರಾತಿ–ಹಿಂದಿ ಸಮಾನವಾಗಿ ಬೆಳೆದಿವೆ. ಇಲ್ಲಿನ ಜನ ಎರಡಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದರಿಂದ ಅವರು ಇಡೀ ದೇಶದಲ್ಲಿಯೇ ವ್ಯಾಪಾರ ವ್ಯವಹಾರ ಮಾಡಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.</p><p>ನಮ್ಮ ದೇಶದ ಭಾಷೆ ಸಂವಹನ ಭಾಷೆಯಾಗದಿದ್ದರೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಅರ್ಥವಿಲ್ಲ ಎಂದು ಅವರು ಎಚ್ಚರಿಸಿದರು.</p>.ವಾಚಕರ ವಾಣಿ: ಹಿಂದಿ ಶಿಕ್ಷಕರಿಗೂ ಕನ್ನಡ ಕಲ್ಪವೃಕ್ಷ.1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಂಧಿನಗರ</strong>: ಹಿಂದಿ ಭಾಷೆ ಕೇವಲ ಜನಸಾಮಾನ್ಯರು ಮಾತನಾಡುವ ಭಾಷೆಯಾಗಬಾರದು. ಬದಲಿಗೆ ಹಿಂದಿ ಭಾಷೆ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ– ತಂತ್ರಜ್ಞಾನದ ಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p><p>ಗಾಂಧಿನಗರದಲ್ಲಿ ನಡೆಯುತ್ತಿರುವ ರಾಜ್ಯಭಾಷಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</p><p>ಹಿಂದಿಯಲ್ಲಿ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ ತಂತ್ರಜ್ಞಾನದ ಸಂವಹನ ಸಾಧ್ಯವಾದರೆ ದೇಶದಾದ್ಯಂತ ಸಾರ್ವಜನಿಕ ಸಂಪರ್ಕ ಸುಲಭವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.</p><p>ರಾಜ್ಯಭಾಷೆಗಳೊಂದಿಗೆ ಹಿಂದಿ ಸಂಘರ್ಷ ಹೊಂದಲು ಬಯಸುವುದಿಲ್ಲ. ದೇಶದ ಅನೇಕ ಮಹನಿಯರು ಹಿಂದಿ ಭಾಷೆಯ ಮಹತ್ವ ಅರ್ಥ ಮಾಡಿಕೊಂಡು ಅದನ್ನು ಮುನ್ನೆಲೆಗೆ ತಂದರು ಎಂದು ಹೇಳಿದರು.</p><p>ಮನೆಯಲ್ಲಿ ತಂದೆ–ತಾಯಿ, ಪೋಷಕರು ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಆ ಮೂಲಕ ಭಾಷೆಗಳನ್ನು ಅಮರವಾಗಿಸಬೇಕು ಎಂದು ಸಲಹೆ ನೀಡಿದ್ದಾರೆ.</p><p>ನಮ್ಮ ಸರ್ಕಾರ ಕೇವಲ ಹಿಂದಿ ಅಲ್ಲದೇ ಇತರ ರಾಜ್ಯಭಾಷೆಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಅದಕ್ಕಾಗಿಯೇ ಇಂಡಿಯನ್ ಲಾಂಗ್ವೇಜಸ್ ಡಿಪಾರ್ಟ್ಮೆಂಟ್ ತೆರೆದಿದೆ ಎಂದು ಹೇಳಿದರು.</p><p>ಇವತ್ತಿನ ದಿನಗಳಲ್ಲಿ ಗುಜರಾತ್ನಲ್ಲಿ ಗುಜರಾತಿ–ಹಿಂದಿ ಸಮಾನವಾಗಿ ಬೆಳೆದಿವೆ. ಇಲ್ಲಿನ ಜನ ಎರಡಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದರಿಂದ ಅವರು ಇಡೀ ದೇಶದಲ್ಲಿಯೇ ವ್ಯಾಪಾರ ವ್ಯವಹಾರ ಮಾಡಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.</p><p>ನಮ್ಮ ದೇಶದ ಭಾಷೆ ಸಂವಹನ ಭಾಷೆಯಾಗದಿದ್ದರೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಅರ್ಥವಿಲ್ಲ ಎಂದು ಅವರು ಎಚ್ಚರಿಸಿದರು.</p>.ವಾಚಕರ ವಾಣಿ: ಹಿಂದಿ ಶಿಕ್ಷಕರಿಗೂ ಕನ್ನಡ ಕಲ್ಪವೃಕ್ಷ.1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>