<p>ಇಂದೋರ್: 50 ವರ್ಷಗಳ ಹಿಂದಿನ ಸಂಪ್ರದಾಯದಂತೆ ಹಿಂದೂ ಕುಟುಂಬವೊಂದು ಈದ್ ಉಲ್ ಪಿತ್ರ್ ಪ್ರಾರ್ಥನೆಗಾಗಿ ಖಾಜಿಯೊಬ್ಬರನ್ನು ಕುದುರೆ ಗಾಡಿಯಲ್ಲಿ ಮಸೀದಿಗೆ ಕರೆದೊಯ್ಯುವ ಮೂಲಕ ಕೋಮುಸೌಹಾರ್ದತೆಯನ್ನು ಸಾರಿತು.</p>.<p>ಮಧ್ಯಪ್ರದೇಶದ ಇಂದೋರ್ ನಗರದ ನಿವಾಸಿ ಸತ್ಯನಾರಾಯಣ ಸಲ್ವಾಡಿಯಾ ಅವರು ನಗರದ ಖಾಜಿ ಮೊಹಮ್ಮದ್ ಇಶ್ರತ್ ಆಲಿ ಅವರನ್ನು ಅವರ ರಾಜ್ಮೊಹಲ್ಲಾ ನಿವಾಸದಿಂದ ಸದಾರ್ ಬಜಾರ್ನಲ್ಲಿರುವ ಪ್ರಮುಖ ಮಸೀದಿಗೆ ಕುದುರೆ ಗಾಡಿಯಲ್ಲಿ ಕರೆದೊಯ್ದರು. ಪ್ರಾರ್ಥನೆ ಮುಗಿದ ಬಳಿಕ ಮನೆಗೆ ಮರಳಿಸಿದರು.</p>.<p>‘ನನ್ನ ತಂದೆ ರಾಮಚಂದ್ರ ಸಲ್ವಾಡಿಯಾ ಅವರು 50 ವರ್ಷಗಳ ಹಿಂದೆ ಈ ಪದ್ಧತಿಯನ್ನು ಆರಂಭಿಸಿದರು. 2017ರಲ್ಲಿ ಅವರು ತೀರಿಕೊಂಡ ಬಳಿಕ ನಾನು ಮುಂದುವರಿಸಿದ್ದೇನೆ. ಈ ಪದ್ಧತಿಯ ಮೂಲಕ ನಾವು ನಗರದ ಜನರಿಗೆ ಸಹೋದರತ್ವದ ಸಂದೇಶವನ್ನು ಸಾರಲು ಬಯಸುತ್ತೇವೆ’ ಎಂದು ಸತ್ಯನಾರಾಯಣ ಅವರು ಹೇಳಿದರು.</p>.<p>‘ಖಾಜಿಯೊಬ್ಬರನ್ನು ಹಿಂದೂ ಕುಟುಂಬ ಗೌರವಯುತವಾಗಿ ಮಸೀದಿಗೆ ಕರೆದೊಯ್ಯುವುದು ಇಂದೋರ್ನಲ್ಲಿ ಮಾತ್ರ, ದೇಶದ ಬೇರೆ ಯಾವುದೇ ಭಾಗದಲ್ಲಿ ಈ ಸಂಪ್ರದಾಯ ಇಲ್ಲ’ ಎಂದು ಖಾಜಿ ಇಶ್ರತ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದೋರ್: 50 ವರ್ಷಗಳ ಹಿಂದಿನ ಸಂಪ್ರದಾಯದಂತೆ ಹಿಂದೂ ಕುಟುಂಬವೊಂದು ಈದ್ ಉಲ್ ಪಿತ್ರ್ ಪ್ರಾರ್ಥನೆಗಾಗಿ ಖಾಜಿಯೊಬ್ಬರನ್ನು ಕುದುರೆ ಗಾಡಿಯಲ್ಲಿ ಮಸೀದಿಗೆ ಕರೆದೊಯ್ಯುವ ಮೂಲಕ ಕೋಮುಸೌಹಾರ್ದತೆಯನ್ನು ಸಾರಿತು.</p>.<p>ಮಧ್ಯಪ್ರದೇಶದ ಇಂದೋರ್ ನಗರದ ನಿವಾಸಿ ಸತ್ಯನಾರಾಯಣ ಸಲ್ವಾಡಿಯಾ ಅವರು ನಗರದ ಖಾಜಿ ಮೊಹಮ್ಮದ್ ಇಶ್ರತ್ ಆಲಿ ಅವರನ್ನು ಅವರ ರಾಜ್ಮೊಹಲ್ಲಾ ನಿವಾಸದಿಂದ ಸದಾರ್ ಬಜಾರ್ನಲ್ಲಿರುವ ಪ್ರಮುಖ ಮಸೀದಿಗೆ ಕುದುರೆ ಗಾಡಿಯಲ್ಲಿ ಕರೆದೊಯ್ದರು. ಪ್ರಾರ್ಥನೆ ಮುಗಿದ ಬಳಿಕ ಮನೆಗೆ ಮರಳಿಸಿದರು.</p>.<p>‘ನನ್ನ ತಂದೆ ರಾಮಚಂದ್ರ ಸಲ್ವಾಡಿಯಾ ಅವರು 50 ವರ್ಷಗಳ ಹಿಂದೆ ಈ ಪದ್ಧತಿಯನ್ನು ಆರಂಭಿಸಿದರು. 2017ರಲ್ಲಿ ಅವರು ತೀರಿಕೊಂಡ ಬಳಿಕ ನಾನು ಮುಂದುವರಿಸಿದ್ದೇನೆ. ಈ ಪದ್ಧತಿಯ ಮೂಲಕ ನಾವು ನಗರದ ಜನರಿಗೆ ಸಹೋದರತ್ವದ ಸಂದೇಶವನ್ನು ಸಾರಲು ಬಯಸುತ್ತೇವೆ’ ಎಂದು ಸತ್ಯನಾರಾಯಣ ಅವರು ಹೇಳಿದರು.</p>.<p>‘ಖಾಜಿಯೊಬ್ಬರನ್ನು ಹಿಂದೂ ಕುಟುಂಬ ಗೌರವಯುತವಾಗಿ ಮಸೀದಿಗೆ ಕರೆದೊಯ್ಯುವುದು ಇಂದೋರ್ನಲ್ಲಿ ಮಾತ್ರ, ದೇಶದ ಬೇರೆ ಯಾವುದೇ ಭಾಗದಲ್ಲಿ ಈ ಸಂಪ್ರದಾಯ ಇಲ್ಲ’ ಎಂದು ಖಾಜಿ ಇಶ್ರತ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>