<p><strong>ತಿರುವನಂತಪುರ</strong>: ‘ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮೊದಲು ಪುರುಷರು ಮೇಲಂಗಿ ಕಳಚಬೇಕು ಎಂಬ ಪರಿಪಾಟವನ್ನು ಕೈಬಿಡಬೇಕು’ ಎಂದು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಕರೆ ನೀಡಿದರು.</p>.<p>ಮಂಗಳವಾರದ ನಡೆದ ಮಠದ ವಾರ್ಷಿಕ ತೀರ್ಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕೂಡ ಸ್ವಾಮಿ ಸಚ್ಚಿದಾನಂದ ಅವರ ಮಾತನ್ನು ಬೆಂಬಲಿಸಿದರು.</p>.<p>‘ಪುರುಷರು ಜನಿವಾರ ಹಾಕಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಹೀಗೆ ಮಾಡುವುದು ಸಾಮಾಜಿಕ ಪಿಡುಗು. ಇದನ್ನು ಕೊನೆಗೊಳಿಸಲೇಬೇಕು. ನಾರಾಯಣ ಗುರುಗಳೂ ಈ ಪರಿಪಾಠದ ವಿರುದ್ಧ ಇದ್ದರು. ಆದರೂ ‘ಶ್ರೀ ನಾರಾಯಾಣ ಧರ್ಮ ಪರಿಪಾಲನಾ ಯೋಗಂ’ನಂಥ ಸಂಸ್ಥೆಗಳಲ್ಲಿ ಈ ಪರಿಪಾಠವನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಆ ಸಂಸ್ಥೆಯವರು ಮರುಪರಿಶೀಲಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ‘ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮೊದಲು ಪುರುಷರು ಮೇಲಂಗಿ ಕಳಚಬೇಕು ಎಂಬ ಪರಿಪಾಟವನ್ನು ಕೈಬಿಡಬೇಕು’ ಎಂದು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಕರೆ ನೀಡಿದರು.</p>.<p>ಮಂಗಳವಾರದ ನಡೆದ ಮಠದ ವಾರ್ಷಿಕ ತೀರ್ಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕೂಡ ಸ್ವಾಮಿ ಸಚ್ಚಿದಾನಂದ ಅವರ ಮಾತನ್ನು ಬೆಂಬಲಿಸಿದರು.</p>.<p>‘ಪುರುಷರು ಜನಿವಾರ ಹಾಕಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಹೀಗೆ ಮಾಡುವುದು ಸಾಮಾಜಿಕ ಪಿಡುಗು. ಇದನ್ನು ಕೊನೆಗೊಳಿಸಲೇಬೇಕು. ನಾರಾಯಣ ಗುರುಗಳೂ ಈ ಪರಿಪಾಠದ ವಿರುದ್ಧ ಇದ್ದರು. ಆದರೂ ‘ಶ್ರೀ ನಾರಾಯಾಣ ಧರ್ಮ ಪರಿಪಾಲನಾ ಯೋಗಂ’ನಂಥ ಸಂಸ್ಥೆಗಳಲ್ಲಿ ಈ ಪರಿಪಾಠವನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಆ ಸಂಸ್ಥೆಯವರು ಮರುಪರಿಶೀಲಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>