ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು,ಜಿಲ್ಲೆಯ ಗಂಗಲೂರು ತಹಸಿಲ್ನ ಜೋರ್ಗಯಾಗ್ರಾಮದುದ್ದಕ್ಕೂ ಹರಿಯುವ ನದಿಯನ್ನು ದಾಟಿ, ಉಪ ಆರೋಗ್ಯ ಕೇಂದ್ರಕ್ಕೆ ತಲುಪಬೇಕಿದೆ. ಸಹಾಯ ಮಾಡಿ ಎಂದು ಗರ್ಭಿಣಿ ಸರಿತಾ ಗೊಂಗ್ಡಿ ಅವರ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ನದಿ ಉಕ್ಕಿ ಹರಿಯುತ್ತಿದೆ.ಹೀಗಾಗಿ,ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಗೃಹ ರಕ್ಷಕ ಸಿಬ್ಬಂದಿಗೆ, ಈವಿಚಾರವನ್ನು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.